ಆ್ಯಪ್ನಗರ

'ನಾವ್ ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ, ಬೈ ಎಲೆಕ್ಷನ್ ಬಳಿಕ ಯಡಿಯೂರಪ್ಪ ಮನೆಗೆ': ಸಿದ್ದು ಭವಿಷ್ಯ

ಎಂಟಿಬಿ ನಾಗರಾಜ್‌ ಒಬ್ಬ ಢೋಂಗಿ, ಅವನಿಗೆ ದುಡ್ಡಿನ ಮದ, ಅಹಂಕಾರ ಜಾಸ್ತಿಯಾಗಿದೆ ಎಂದು ಏಕವಚನದಲ್ಲೇ ಕಿಡಿಕಾರಿದ ಸಿದ್ದರಾಮಯ್ಯ, ಈ ಚುನಾವಣೆಯಲ್ಲಿ ಎಂಟಿಬಿ ಸೋತು ಮೂರನೇ ಸ್ಥಾನಕ್ಕೆ ಹೋಗೋದು ಗ್ಯಾರೆಂಟಿ ಎಂದರು.

Vijaya Karnataka Web 24 Nov 2019, 8:18 pm
ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಫಲಿತಾಂಶ ಹೊರ ಬರುತ್ತಿದ್ದಂತೆಯೇ ಬಿಜೆಪಿ ಸರಕಾರ ಪತನವಾಗಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಮನೆಗೆ ಹೋಗ್ತಾರೆ ಎಂದು ಸಿದ್ದು ಚಾಟಿ ಬೀಸಿದ್ದಾರೆ.
Vijaya Karnataka Web by election campaign siddaramaiah takes on mtb nagaraj
'ನಾವ್ ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ, ಬೈ ಎಲೆಕ್ಷನ್ ಬಳಿಕ ಯಡಿಯೂರಪ್ಪ ಮನೆಗೆ': ಸಿದ್ದು ಭವಿಷ್ಯ


ಹೊಸಕೋಟೆ ತಾಲೂಕಿನಲ್ಲಿ ಪ್ರಚಾರ ನಡೆಸಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರಕಾರ ಮತ್ತು ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದರು. 'ಕಾಂಗ್ರೆಸ್‌ ಸರಕಾರದ ಯೋಜನೆಗಳಿಗೆ ಬಿಜೆಪಿ ಸರಕಾರ ಸರಿಯಾದ ಅನುದಾನ ನೀಡುತ್ತಿಲ್ಲ. ಏಳು ಕೆ.ಜಿ ಇದ್ದ ಅಕ್ಕಿಯನ್ನು ನಾಲ್ಕು ಕೆಜಿಗೆ ಇಳಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೇ 10 ಕೆಜಿ ಅಕ್ಕಿ ಕೊಡ್ತೀವಿ' ಎಂದು ಸಿದ್ದು ಹೇಳಿದ್ದಾರೆ.

ವಿಡಿಯೋ: ಪ್ರತಿಯೊಬ್ಬ ಅನರ್ಹ ಶಾಸಕರಿಗೂ 25 ಕೋಟಿ! ಸಿದ್ದು ಆರೋಪಕ್ಕೆ ಬಿಎಸ್‌ವೈ ಗುದ್ದು!
ನಾನೇನಾದ್ರೂ ಎದೆಯಲ್ಲಿಟ್ಟುಕೊಳ್ಳಪ್ಪ ಅಂತ ಹೇಳಿದ್ನಾ?

'ಸಿದ್ದರಾಮಯ್ಯ ನನ್ನ ಎದೆಯಲ್ಲಿದ್ದಾರೆ ಅಂತ ಎಂಟಿಬಿ ನಾಗರಾಜು ಹೇಳಿದ್ದಾನೆ. ನಾನೇನಾದ್ರೂ ಎದೆಯಲ್ಲಿಟ್ಟುಕೊಳ್ಳಪ್ಪ ಅಂತ ಹೇಳಿದ್ನಾ? ಈಗ ಯಡಿಯೂರಪ್ಪ ಅಂತಾನೆ. ನಾಳೆ ಇನ್ಯಾರೋ, ಎಂಟಿಬಿ ನಾಗರಾಜ್‌ ಒಬ್ಬ ಢೋಂಗಿ, ಅವನಿಗೆ ದುಡ್ಡಿನ ಮದ, ಅಹಂಕಾರ ಜಾಸ್ತಿಯಾಗಿದೆ ಎಂದು ಏಕವಚನದಲ್ಲೇ ಕಿಡಿಕಾರಿದ ಸಿದ್ದರಾಮಯ್ಯ, ಈ ಚುನಾವಣೆಯಲ್ಲಿ ಎಂಟಿಬಿ ಸೋತು ಮೂರನೇ ಸ್ಥಾನಕ್ಕೆ ಹೋಗೋದು ಗ್ಯಾರೆಂಟಿ ಎಂದರು. ಕೆಲವರಿಗೆ ಮೈಯಲ್ಲಿ ವಿಷ ಇರುತ್ತೆ. ಇನ್ನೂ ಕೆಲವರಿಗೆ ಉಸಿರಿನಲ್ಲೂ ವಿಷಾನೇ ತುಂಬಿರುತ್ತೆ. ಇವನ ಹತ್ತಿರ ದುಡ್ಡು ಕೊಳೆಯುತ್ತಿರಬಹುದು. ಸಾಲ ಕೊಟ್ಟಿರಬಹುದು. ಆದ್ರೆ ಇವನ ಸಣ್ಣತನ ಹೋಗಿಲ್ಲ' ಎಂದು ಎಂಟಿಬಿ ನಾಗರಾಜ್ ವಿರುದ್ಧ ವಾಚಾಮಗೋಚರವಾಗಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಉಪ ಸಮರದ ಬಳಿಕ ಮತ್ತಷ್ಟು ಜೆಡಿಎಸ್ ಶಾಸಕರು ಬಿಜೆಪಿಗೆ! ಯತ್ನಾಳ್ ಸಿಡಿಸಿದ್ರು ಹೊಸ ಬಾಂಬ್!

ಬಳಿಕ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, 'ಎಂಟಿಬಿ ಜನರ ಆಶೀರ್ವಾದವನ್ನು ಕಾಲಲ್ಲಿಒದ್ದು ಉಂಡ ಮನೆಗೆ ದ್ರೋಹ ಮಾಡಿ ಹೋದ್ರು' ಎಂದರು.

'15 ಕ್ಷೇತ್ರಗಳಲ್ಲೂ ನಮಗೇ ಗೆಲುವು, ಅನರ್ಹರು ಎನ್ನಬೇಡಿ' ಅಂದ್ರು ಸಿಎಂ ಬಿಎಸ್‌ವೈ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ