ಆ್ಯಪ್ನಗರ

ಸಂಪುಟ ವಿಸ್ತರಣೆ ಸಮ್ಮಿಶ್ರ ಸರಕಾರದ ಶವಪೆಟ್ಟಿಗೆಗೆ ಕೊನೆ ಮೊಳೆ: ಶೋಭಾ

ಸಂಸದರ ನೂತನ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ¨ ಅವರು,''ಅಭಿವೃದ್ಧಿ ಸಹಿತ ಅಧಿಕಾರ ಸಿಗದ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರಲ್ಲಿ ಕಚ್ಚಾಟ, ಅಸಮಾಧಾನ, ಗೊಂದಲ ಮುಂದುವರಿದಿದ್ದು, ಬುಧವಾರದ ಬಳಿಕದ ರಾಜಕೀಯ ವಿದ್ಯಮಾನಗಳನ್ನು ಬಿಜೆಪಿ ಕಾದು ನೋಡಲಿದೆ,'' ಎಂದರು.

Vijaya Karnataka 11 Jun 2019, 9:37 am
ಉಡುಪಿ: ಸಂಪುಟ ವಿಸ್ತರಣೆ ರಾಜ್ಯ ಸಮ್ಮಿಶ್ರ ಸರಕಾರದ ಶವ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Vijaya Karnataka Web shobha


ಸಂಸದರ ನೂತನ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ¨ ಅವರು,''ಅಭಿವೃದ್ಧಿ ಸಹಿತ ಅಧಿಕಾರ ಸಿಗದ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರಲ್ಲಿ ಕಚ್ಚಾಟ, ಅಸಮಾಧಾನ, ಗೊಂದಲ ಮುಂದುವರಿದಿದ್ದು, ಬುಧವಾರದ ಬಳಿಕದ ರಾಜಕೀಯ ವಿದ್ಯಮಾನಗಳನ್ನು ಬಿಜೆಪಿ ಕಾದು ನೋಡಲಿದೆ,'' ಎಂದರು.

''ಈ ನೆಲದ ಕಾನೂನು ಉಲ್ಲಂಘಿಸಿದ ಆರೋಪ ಹೊತ್ತ ಜಿಂದಾಲ್‌(ಜೆಎಸ್‌ಡಬ್ಲ್ಯು) ಕಂಪನಿಗೆ 3,666 ಎಕರೆ ಫಲವತ್ತಾದ, ಹೇರಳ ಕಬ್ಬಿಣದ ಅದಿರುಳ್ಳ ಭೂಮಿ ಮಾರಾಟದ ಸಂಪುಟ ನಿರ್ಣಯದ ಹಿಂದೆ ಕಾಣದ ಕೈಗಳ, ಕಮಿಷನ್‌ ಏಜೆಂಟರ ಕೈವಾಡವಿದ್ದು, ಜೂ.14ರಿಂದ ಹೋರಾಟ ನಡೆಸಲಿದ್ದೇವೆ. ಅತಿವೃಷ್ಟಿ, ಅನಾವೃಷ್ಟಿಗೆ ಕೇಂದ್ರ ಸರಕಾರ 7,182 ಕೋಟಿ ರೂ. ನೆರವು ನೀಡಿದ್ದರೂ ರಾಜ್ಯ ಸಮ್ಮಿಶ್ರ ಸರಕಾರ ಬದುಕಿರುವಂತೆ ಕಾಣುತ್ತಿಲ್ಲ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ