ಆ್ಯಪ್ನಗರ

ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ವೈದ್ಯರಿಗೆ ಹೈಕೋರ್ಟ್‌ ಸೂಚನೆ

ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌

Vijaya Karnataka Web 16 Nov 2017, 4:06 pm
ಬೆಂಗಳೂರು: ಸಮಾಜದ ಹಿತದೃಷ್ಟಿಯಿಂದ ಕೂಡಲೇ ಮುಷ್ಕರ ಹಿಂಪಡೆಯುವಂತೆ ವೈದ್ಯರಿಗೆ ಹೈಕೋರ್ಟ್ ಮನವಿ ಮಾಡಿದೆ.
Vijaya Karnataka Web call off protest high court tells doctors
ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ವೈದ್ಯರಿಗೆ ಹೈಕೋರ್ಟ್‌ ಸೂಚನೆ


ನೀವು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಸರಕಾರ ನಿಮ್ಮ ಜೊತೆ ಚರ್ಚೆ ನಡೆಸಲು ಸಿದ್ಧ ಎಂದು ಹೇಳುತ್ತಿದೆ. ಚರ್ಚೆ ಮಾಡಿ. ಮಾತನಾಡಿ. ಇನ್ನೂ ಮಸೂದೆಯೇ ಮಂಡನೆ ಆಗಿಲ್ಲ. ಮುಷ್ಕರದಿಂದ ತಕ್ಷಣ ಹಿಂದೆ ಸರಿಯಿರಿ‌‌. ಇದು ಜನರ ಜೀವನ್ಮರಣದ ಪ್ರಶ್ನೆ" ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ‌.ರಮೇಶ್ ತಿಳಿಸಿದರು.

ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ‌.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ‌. ರಮೇಶ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವೈದ್ಯಕೀಯ ಸಂಘಗಳ ಪರ ವಕೀಲ ಎಸ್.ಬಸವರಾಜ್, "ಆರೋಗ್ಯ ಸಚಿವ ರಮೇಶ್‌ ಕುಮಾರ್ ಅವರು ವೈದ್ಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಮಸೂದೆ ಮಾತು ಆಮೇಲೆ" ಎಂದರು.

ಸರ್ಕಾರದ ಪರ ಹೆಚ್ಚುವರಿ ಎ.ಜಿ. ಎಂ. ಆರ್. ನಾಯಕ್ "ಸರ್ಕಾರ ಮಾತುಕತೆಗೆ ಸಿದ್ಧವಿದೆ. ಉದ್ದೇಶಿತ ಮಸೂದೆ ಮಂಡನೆಗೂ ಮೊದಲು ಆರೋಗ್ಯ ಸಚಿವರು, ಕಾನೂನು ಸಚಿವರು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವೈದ್ಯಕೀಯ ಸಂಘಗಳ ಜೊತೆ ಚರ್ಚಿಸಲಿದೆ" ಎಂದರು.

ಭಾರತೀಯ ವೈದ್ಯಕೀಯ ಸಂಘದ ಪರ ವಕೀಲರು, " ನಮ್ಮ ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ" ಎಂದು ನ್ಯಾಯಪೀಠಕ್ಕೆ ಸ್ಪಷ್ಟನೆ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಏತನ್ಮಧ್ಯೆ ಮುಷ್ಕರ ನಿರತ ವೈದ್ಯರು ಸೇವೆಗೆ ಮರಳುವಂತೆ ನ್ಯಾಯಮೂರ್ತಿಗಳಯ ಪರಿಪರಿಯಾಗಿ ಮನವಿ ಮಾಡಿದರು.

call off protest: High court tells doctors

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ