ಆ್ಯಪ್ನಗರ

ಕಾರು ಭಸ್ಮದಿಂದ ಅಂದಾಜು 20 ಕೋಟಿ ನಷ್ಟ

ಭಸ್ಮವಾಗಿರುವ ಕಾರುಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಸೇರಿವೆ. ಇನ್ನು ಕೆಲವು 3-5 ಲಕ್ಷ ರೂ. ಮೌಲ್ಯದ ಕಾರುಗಳೂ ಇವೆ.

Vijaya Karnataka 24 Feb 2019, 7:52 am
ಬೆಂಗಳೂರು: ಏರ್‌ ಶೋ ಅಗ್ನಿ ದುರಂತದಲ್ಲಿ ಸಂಭವಿಸಿದ ಅನಾಹುತದಲ್ಲಿ ಅಂದಾಜು 20 ಕೋಟಿಯಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
Vijaya Karnataka Web Car Fire


ಭಸ್ಮವಾಗಿರುವ ಕಾರುಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಸೇರಿವೆ. ಇನ್ನು ಕೆಲವು 3-5 ಲಕ್ಷ ರೂ. ಮೌಲ್ಯದ ಕಾರುಗಳೂ ಇವೆ. ಹೀಗಾಗಿ ಪ್ರತಿ ಕಾರಿ ಬೆಲೆ ಅಂದಾಜು 6 ಲಕ್ಷ ರೂ. ಎಂದು ಲೆಕ್ಕ ಹಾಕಿದರೂ 343 ( ಇದರಲ್ಲಿ ಭಾಗಶಃ ಸುಟ್ಟಿರುವ ಕಾರುಗಳು ಸೇರಿ) ಕಾರುಗಳಿಗೆ ಒಟ್ಟು 20 ಕೋಟಿ ರೂ. ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಎಲ್ಲಾ ಕಾರು ಮಾಲೀಕರುಗಳಿಂದ ಇನ್ನೂ ಸಮಗ್ರವಾಗಿ ದಾಖಲೆ ಮತ್ತು ಮಾಹಿತಿ ಸಿಕ್ಕಿಲ್ಲ. ಸೋಮವಾರದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಟ್ಟ ಕಾರು ಕಂಡು ಕಣ್ಣೀರಾದರು...


ವೈಮಾನಿಕ ಪ್ರದರ್ಶನ ಕಂಡ ಸಂತಸದಲ್ಲಿದ್ದ ಮಕ್ಕಳು ತಮ್ಮ ಪ್ರೀತಿಯ ಕಾರು ಅಗ್ನಿ ಅನಾಹುತದಲ್ಲಿ ಭಸ್ಮವಾಗಿದ್ದ ದೃಶ್ಯ ಕಂಡು ಬಿಕ್ಕಿ ಬಿಕ್ಕಿ ಅತ್ತರು. ಸುಟ್ಟು ಕರಕಲಾದ ಕಾರಿನ ಅವಶೇಷಗಳಡಿ ಕೀ ಮತ್ತಿತರ ವಸ್ತುಗಳನ್ನು ಕೆದಕಿ ಭಾವುಕರಾದರು. ಉಮ್ಮಳಿಸಿ ಬಂದ ದುಃಖದಿಂದ ಕಣ್ಣೀರಿಟ್ಟರು. ಅತ್ತ ಪೋಷಕರಿಗೂ ದುಃಖ ತಡೆಯಲಾಗಲಿಲ್ಲ. ಮಕ್ಕಳನ್ನು ಸಂತೈಸುವ ಬದಲು ತಾವೇ ಕಣ್ಣೀರಾದರು.

ಶಾಲೆಗೆ ರಜೆ ಹಾಕಿ ಪೋಷಕರ ಜತೆ ಕಾರಿನಲ್ಲಿ ಖುಷಿ ಖುಷಿಯಿಂದ ಬಂದ ಪುಟಾಣಿಗಳು ಕೊನೆಗೆ ಕಾರು, ಆಹಾರ ಪದಾರ್ಥಗಳು, ಹಣ ಎಲ್ಲವನ್ನೂ ಕಳೆದುಕೊಂಡು ನೋವಿನಿಂದ ಮನೆಯತ್ತ ಭಾರ ಹೊತ್ತ ಹೃದಯದಿಂದ ಹೆಜ್ಜೆ ಹಾಕಿದರು.

ಸಾರ್ವಜನಿಕ ವಾಹನಗಳಿಗೆ ಗೇಟ್‌-5ರ ಪಾರ್ಕಿಂಗ್‌ ಸ್ಥಳದಲ್ಲೇ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ, ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಇಲ್ಲೇ ನಿಲುಗಡೆ ಮಾಡಲಾಗಿತ್ತು. ದುರಂತವೆಂದರೆ 1800 ರೂ. ಪಾವತಿಸಿ ಟಿಕೆಟ್‌ ಖರೀದಿಸಿದ್ದ ವಾಹನ ಮಾಲೀಕರು ಲಕ್ಷಾಂತರ ರೂ. ಮೌಲ್ಯದ ಕಾರು ಕಳೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ