ಆ್ಯಪ್ನಗರ

ಟೈರ್‌ ಸಿಡಿದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು: 7 ಮಂದಿ ಬಲಿ

ಕಾರಿನ ಟೈರ್‌ ಸಿಡಿದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಆರು ಜನ ಮಹಿಳೆಯರು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಸಿದ್ದಾಪುರ ಗೇಟ್‌ ಬಳಿ ಶುಕ್ರವಾರ ಸಂಜೆ ನಡೆದಿದೆ.

Vijaya Karnataka 29 Jun 2019, 5:00 am
ವಿಕ ಸುದ್ದಿಲೋಕ ಕುಣಿಗಲ್‌
Vijaya Karnataka Web TMK-28KUNIGAL5


ಕಾರಿನ ಟೈರ್‌ ಸಿಡಿದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಆರು ಜನ ಮಹಿಳೆಯರು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಸಿದ್ದಾಪುರ ಗೇಟ್‌ ಬಳಿ ಶುಕ್ರವಾರ ಸಂಜೆ ನಡೆದಿದೆ.

ಬೆಂಗಳೂರಿನ ಸಂಜಯಗಾಂಧಿ ನಗರದ ವಾಸಿಗಳಾದ ತಿರುಮಣಿ(45), ಸೆಲ್ವಿ(48), ನಾಗಮ್ಮ(47), ವೀರಮ್ಮ(50), ನಿರ್ಮಲ(51), ಉಮಾ(42), ಕಾಳಿದಾಸ (50) ಮೃತಪಟ್ಟ ದುರ್ದೈವಿಗಳು. ಚಾಲಕ ಯೋಗೀಶ್‌, ಭವಾನಿ ಹಾಗೂ 4 ವರ್ಷದ ಸಾಧಿಕ್‌ ಬಾಷಾ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೊತ್ತೊಬ್ಬ ಮಹಿಳೆಯ ಗುರುತು ಪತ್ತೆಯಾಗಿಲ್ಲ.

ರಂಗಸ್ವಾಮಿ ಬೆಟ್ಟದಲ್ಲಿ ಮದುವೆಯ ಬೀಗರ ಊಟಕ್ಕೆ ಹೋಗಿ ನಂತರ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದರ್ಶನ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುವಾಗ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ-75ರ ಸಿದ್ದಾಪುರ ಗೇಟ್‌ ಬಳಿ ಬರುತ್ತಿದ್ದಾಗ ಕಾರಿನ ಮುಂಭಾಗದ ಟೈರ್‌ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರು ಎಂಟು ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಾರಿನಲ್ಲಿ ಒಟ್ಟು 11 ಮಂದಿ ಇದ್ದು, ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 4 ವರ್ಷದ ಮಗು ಸಾಧಿಕ್‌ ಬಾಷಾ ಪವಾಡ ಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳಾಗಿ ಬದುಕಿ ಉಳಿದಿದೆ. ಉಳಿದ ಮೂರು ಮಂದಿ ಗಾಯಾಳುಗಳ ಸ್ಥಿತಿಯೂ ಗಂಭೀರವಾಗಿದೆ.

ಕುರಿಗಾಹಿ, ಎಂಟು ಕುರಿ ಸಾವು: ಅಂಚೆಪಾಳ್ಯ ಬಳಿ ಶುಕ್ರವಾರ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಕಾರೊಂದು ಕುರಿ ಮಂದೆ ಹಾಗೂ ಕುರಿಗಾಹಿಯ ಮೇಲೆ ಹರಿದಿದ್ದರಿಂದ ಕುರಿಗಾಹಿ ಹಾಗೂ ಎಂಟು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.

ಸಿರಾ ತಾಲೂಕಿನ ಈರಣ್ಣ(35) ಮೃತ ಕುರಿಗಾಹಿ. ಕುರಿ ಮಂದೆಯನ್ನು ರಸ್ತೆ ದಾಟಿಸುವಾಗ ಹಾಸನ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿಹೊಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ