ಆ್ಯಪ್ನಗರ

ಕೇರಳ ಮತ್ತೊಂದು ಕಾಶ್ಮೀರವಾಗಲಿದೆ ಎಂಬ ಹೇಳಿಕೆ ; ಶೋಭಾ ವಿರುದ್ಧ ಎಫ್‌ಐಆರ್‌

ಕೇರಳ ಮತ್ತೊಂದು ಕಾಶ್ಮೀರವಾಗಲಿದೆ ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯ ವಿರುದ್ಧ ಕೇರಳದ ಮಲಪ್ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಎಎ ಪರವಾಗಿದ್ದಾರೆ ಎಂಬ ಕಾರಣಕ್ಕಾಗಿ ಗ್ರಾಮವೊಂದರಲ್ಲಿ ವಾಸವಾಗಿರುವ ಕುಟುಂಬಕ್ಕೆ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಶೋಭಾ ಟ್ವೀಟ್ ಮಾಡಿದ್ದರು.

Vijaya Karnataka Web 24 Jan 2020, 10:04 am
ಬೆಂಗಳೂರು: ಕೇರಳ ಮತ್ತೊಂದು ಕಾಶ್ಮೀರವಾಗಲಿದೆ ಎಂಬ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮಲಪುರಂ ಜಿಲ್ಲೆಯ ಕುಟ್ಟಿಪುರಂ ಗ್ರಾಮದ ಹಿಂದೂ ಕುಟುಂಬಗಳು ಪೌರತ್ವ ಕಾಯ್ದೆ ತಿದ್ದುಪಡಿ ಪರವಾಗಿ ಇದ್ದಾರೆ ಎಂಬ ಕಾರಣಕ್ಕಾಗಿ ಸ್ಥಳೀಯ ಗ್ರಾಮಪಂಚಾಯತ್ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಶೋಭಾ ಆರೋಪಿಸಿದ್ದರು. ಈ ಕುರಿತಾದ ಎರಡು ಫೋಟೋಗಳನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.
Vijaya Karnataka Web case has been registered by kerala police against shobha karandlaje
ಕೇರಳ ಮತ್ತೊಂದು ಕಾಶ್ಮೀರವಾಗಲಿದೆ ಎಂಬ ಹೇಳಿಕೆ ; ಶೋಭಾ ವಿರುದ್ಧ ಎಫ್‌ಐಆರ್‌



ಪೌರತ್ವ ಪ್ರತಿಭಟನೆ: ಮಂಗಳೂರಿಗೆ ವರದಿಗೆ ಬಂದಿದ್ದ ಕೇರಳ ಪತ್ರಕರ್ತರ ಬಂಧನ

ಶೋಭಾ ಆರೋಪವನ್ನು ಕೇರಳ ಸರಕಾರ ನಿರಾಕರಿಸಿದ್ದು ಸುಪ್ರೀಂ ಕೋರ್ಟ್‌ ವಕೀಲರಾದ ಸುಭಾಶ್ ಚಂದ್ರನ್ ಕೆ.ಆರ್‌ ದೂರಿನ ಅನ್ವಯ ಕೇರಳದ ಮಲಪ್ಪುರಂ ಪೊಲೀಸರು ಸಾಮಾಜಿಕ ಶಾಂತಿ ಕದಡುವ ಆರೋಪ ಹೊರಿಸಿ ಸೆಕ್ಷನ್ 153(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

ಜನವರಿ 22 ರಂದು ಶೋಭಾ ಕರಂದ್ಲಾಜೆ ಈ ವಿಚಾರದ ಕುರಿತಾಗಿ ಟ್ವೀಟ್‌ ಮಾಡಿ ತನ್ನ ಅಸಮಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಶೋಭಾ ಆರೋಪವನ್ನು ಕೇರಳ ಸರಕಾರ ನಿರಾಕರಿಸಿದೆ. ಇದು ಸುಳ್ಳು ಮಾಹಿತಿಯಿಂದ ಕೂಡಿದ ಆರೋಪವಾಗಿದೆ ಎಂಬುವುದು ಕೇರಳದ ವಾದ.

ಪ್ರಕರಣದ ಕುರಿತಾಗಿ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಕುಟ್ಟಿಪುರಂ ಗ್ರಾಮದ ನಿವಾಸಿಗಳಿಗೆ ಸ್ಥಳೀಯ ವ್ಯಕ್ತಿಯೊಬ್ಬರ ಬೋರ್‌ವೆಲ್‌ನಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಕೃಷಿ ಉದ್ಧೇಶಕ್ಕಾಗಿ ಅಳವಡಿಸಿದ ಮೋಟಾರ್‌ ಪಂಪ್‌ನ್ನು ಬೇರೆ ಉದ್ಧೇಶಕ್ಕಾಗಿ ಬಳಸಲಾಗುತ್ತಿತ್ತು. ಈ ಕುರಿತಾಗಿ ವಿದ್ಯುತ್ ಮಂಡಳಿ ಎಚ್ಚರಿಕೆಯನ್ನು ನೀಡಿತ್ತು.ಈ ಕಾರಣಕ್ಕಾಗಿ ವ್ಯಕ್ತಿ ಪಂಪ್‌ ಬಳಕೆಯನ್ನು ನಿಲ್ಲಿಸಿದ್ದರು. ಇದರಿಂದ ಸ್ಥಳೀಯ ಜನರಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿ ಮಾಡಿವೆ.

ಆದರೆ ಸಂಘಪರಿವಾರದ ಅಂಗಸಂಸ್ಥೆಯಾದ ಸೇವಾ ಭಾರತಿ ಸ್ಥಳೀಯರಿಗೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸುತ್ತಿದೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರು ಈ ಫೋಟೋಗಳನ್ನು ಬಳಸಿಕೊಂಡು ಕೇರಳ ಕಾಶ್ಮೀರವಾಗಲು ಹೊರಟಿದೆ ಎಂದು ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ