ಆ್ಯಪ್ನಗರ

'ನಾನು ನಗರದ ನಕ್ಸಲ್': ಸಾಹಿತಿ ಕಾರ್ನಾಡ್ ವಿರುದ್ಧ ದೂರು

'ನಾನು ನಗರದ ನಕ್ಸಲ್' ಎಂದು ಬೋರ್ಡ್ ಹಾಕಿಕೊಂಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಹೈಕೋರ್ಟ್ ವಕೀಲ ಅಮೃತೇಶ್ ಎಂಬವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Vijaya Karnataka Web 7 Sep 2018, 3:27 pm
ಬೆಂಗಳೂರು: 'ನಾನು ನಗರದ ನಕ್ಸಲ್' ಎಂದು ಬೋರ್ಡ್ ಹಾಕಿಕೊಂಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಹೈಕೋರ್ಟ್ ವಕೀಲ ಅಮೃತೇಶ್ ಎಂಬವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Vijaya Karnataka Web karnada


ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷವಾದ ಸಂದರ್ಭದಲ್ಲಿ ಬುಧವಾರ (ಸೆ.5) ಆಯೋಜಿಸಿದ್ದ ಸ್ವಾಮಿ ಅಗ್ನಿವೇಶ್‌, ಗಿರೀಶ್‌ ಕಾರ್ನಾಡ್‌, ಪ್ರಕಾಶ್‌ ರೈ ಮೊದಲಾದ ಸ್ವಘೋಷಿತ ಬುದ್ಧಿಜೀವಿಗಳು 'ನಾನೂ ನಗರದ ನಕ್ಸಲ್‌' ಎಂಬ ಬೋರ್ಡನ್ನು ಕೊರಳಿಗೆ ನೇತುಹಾಕಿಕೊಳ್ಳುವ ಮೂಲಕ ನಕ್ಸಲ್‌ ಹಿಂಸೆಯ ಸಮರ್ಥನೆಗಿಳಿದಿದ್ದು, ಚರ್ಚೆಗೆ ಗ್ರಾಸವಾಗಿತ್ತು.

ನಕ್ಸಲೈಟ್ ಬೋರ್ಡ್‌: ಕಾನೂನು ಕ್ರಮಕ್ಕೆ ಮುತಾಲಿಕ್ ಆಗ್ರಹ

ನಕ್ಸಲ್ ನಿಷೇಧಿತ ಸಂಘಟನೆ ಎಂದು ಗೊತ್ತಿದ್ದರು ಸಹ ಕಾರ್ನಾಡ್ ಬಹಿರಂಗವಾಗಿಯೇ 'ನಾನು ನಗರದ ನಕ್ಸಲ್' ಎಂದು ಬರೆದಿರುವ ವಿವಾದಾತ್ಮಕ ಬೋರ್ಡ್ ಧರಿಸಿದ್ದಾರೆ. ಹೀಗಾಗಿ ಅವರನ್ನು ಬಂಧಿಸಬೇಕು ಎಂದು ಅಮೃತೇಶ್ ಒತ್ತಾಯಿಸಿದ್ದಾರೆ. ಅಲ್ಲದೆ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕಾರ್ನಾಡ್ ಪಾತ್ರ ಇರುವ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಕ್ಸಲ್ ಹಿಂಸೆಗೆ ಕುಮ್ಮಕ್ಕು ಕೊಡುವುದನ್ನು ಒಪ್ಪಲಾದೀತೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ