ಆ್ಯಪ್ನಗರ

ಇಬ್ಬರು ಐಟಿ ಅಧಿಕಾರಿಗಳು ಸಿಬಿಐ ಬಲೆಗೆ

ಆದಾಯ ತೆರಿಗೆ ದಾಳಿ ಪ್ರಕರಣ ಮುಚ್ಚಿ ಹಾಕಲು 14 ಲಕ್ಷ ರೂ...

Vijaya Karnataka 4 Apr 2019, 5:00 am
ಬೆಂಗಳೂರು: ಆದಾಯ ತೆರಿಗೆ ದಾಳಿ ಪ್ರಕರಣ ಮುಚ್ಚಿ ಹಾಕಲು 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Vijaya Karnataka Web cbi caught it officer
ಇಬ್ಬರು ಐಟಿ ಅಧಿಕಾರಿಗಳು ಸಿಬಿಐ ಬಲೆಗೆ


ಐಟಿ ಇಲಾಖೆ ಬೆಂಗಳೂರು ವಿಭಾಗದ ಅಧಿಕಾರಿ ಎಚ್‌.ಆರ್‌.ನಾಗೇಶ್‌ ಲಂಚ ಪಡೆಯುವ ವೇಳೆ ಬಂಧಿತರಾದವರು. ಇವರ ಜೊತೆಗೆ ಅಕ್ರಮದಲ್ಲಿ ಭಾಗಿಯಾದ ಮತ್ತೊಬ್ಬ ಅಧಿಕಾರಿ ನಾಗೇಂದರ್‌ ಸಿಂಗ್‌ ಅವರನ್ನು ಬಂಧಿಸಲಾಗಿದೆ.

ನಗರದ ಬಿಲ್ಡರ್‌ ಆಗಿರುವ ಎಂ. ಶ್ರೀನಿವಾಸ್‌ ರಾವ್‌ ಎಂಬುವರ ಕಚೇರಿ ಮೇಲೆ ಮಾ.6ರಂದು ಅಧಿಕಾರಿಗಳಾದ ನಾಗೇಶ್‌ ಮತ್ತು ನರೇಂದರ್‌ ಸಿಂಗ್‌ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ ಸರ್ವೋತ್ತಮ ರಾಜು ಎಂಬುವರು ನೀಡಿದ್ದ 25 ಲಕ್ಷ ರೂ. ಮತ್ತು 15 ಲಕ್ಷ ರೂ. ಸಂಬಂಧಿಸಿದ ಸ್ವೀಕೃತಿ ಪ್ರತಿಗಳನ್ನು ಜಪ್ತಿ ಮಾಡಿದ್ದರು. ನಂತರ ಹೇಳಿಕೆ ದಾಖಲಿಸಿಕೊಂಡು ನೋಟಿಸ್‌ ನೀಡಿ, ಕಚೇರಿಗೆ ಆಗಮಿಸಲು ತಿಳಿಸಿದ್ದರು. ಅದರಂತೆ ಮಾ.25ರಂದು ತೆರಳಿದಾಗ 1.51 ಕೋಟಿ ರೂ.ಯಿಂದ 1.57 ಕೋಟಿ ರೂ.ವರೆಗೆ ವಹಿವಾಟು ನಡೆಸಿರುವುದಾಗಿ ಡಿಕ್ಲೇರ್‌ ಮಾಡಿಕೊಂಡು 10ರಿಂದ 15 ಲಕ್ಷ ರೂ. ಮುಂಗಡ ತೆರಿಗೆ ಪಾವತಿ ಮಾಡಲು ಸೂಚಿಸಿದರು. ಅದರಂತೆ ಮುಂಗಡ ತೆರಿಗೆ ಪಾವತಿ ಮಾಡಿದ್ದೆ ಎಂದು ದೂರಿನಲ್ಲಿ ಶ್ರೀನಿವಾಸ್‌ ರಾವ್‌ ವಿವರಿಸಿದ್ದಾರೆ.

ಅದಾದ ಬಳಿಕ 1.51 ಕೋಟಿ ರೂ. ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಕೇಸ್‌ ದಾಖಲಿಸದೆ 7.5 ಲಕ್ಷ ರೂ. ಪಡೆದುಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡಿದೆ. ಆದರೆ, ಅವರು ನಿಮ್ಮ ಪ್ರಕರಣವೇ ಬೇರೆಯಾಗಿದ್ದು, ಸರ್ವೋತ್ತಮ ರಾಜು ಅವರಿಂದ ಪ್ರತ್ಯೇಕವಾಗಿ ಹಣ ವಸೂಲಿ ಮಾಡುತ್ತೇವೆ. ನೀವು 7.5 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಇಬ್ಬರದ್ದು ಸೇರಿಸಿ 7.5 ಲಕ್ಷ ರೂ.ಗೆ ಮುಕ್ತಾಯಗೊಳಿಸುವಂತೆ ಮನವಿ ಮಾಡಿದರೂ ಅವರು ಒಪ್ಪದೇ ಬೇರೆ ದಿನ ಭೇಟಿ ಮಾಡುವಂತೆ ಸೂಚಿಸಿದರು.

ಮತ್ತೊಮ್ಮೆ ಭೇಟಿ ಮಾಡಿದಾಗ ಒಟ್ಟು 15 ಲಕ್ಷ ರೂ. ಕೊಟ್ಟರೆ ಇಬ್ಬರಿಗೆ ಸಂಬಂಧಿಸಿದ ವಿಷಯವನ್ನು ಸೆಟಲ್‌ ಮಾಡುತ್ತೇವೆ ಎಂದರು. ಮಾತುಕತೆ ಬಳಿಕ 15 ಲಕ್ಷ ರೂ. ಬದಲು 14 ಲಕ್ಷ ರೂ.ಗೆ ಒಪ್ಪಿದರು. ಅದನ್ನು ಜಯನಗರದ ಉಪಾಹಾರ ದರ್ಶಿನಿಗೆ ತರಲು ಹೇಳಿದರು ಎಂದು ದೂರಿನಲ್ಲಿ ಶ್ರೀನಿವಾಸ್‌ ವಿವರಿಸಿದ್ದಾರೆ.

ಲಂಚ ನೀಡಲು ಇಚ್ಛಿಸಿದ ಶ್ರೀನಿವಾಸ್‌ ಸಿಬಿಐಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸ್ಟಾರ್‌ಬಕ್ಸ್‌ ಕಾಫಿ ಶಾಫ್‌ನಲ್ಲಿ 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಐಟಿ ಅಧಿಕಾರಿ ನಾಗೇಶ್‌ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಅಧಿಕಾರಿ ನರೇಂದರ್‌ ಸಿಂಗ್‌ ಅವರನ್ನು, ಎಚ್‌ಎಸ್‌ಆರ್‌ ಲೇಔಟ್‌ನ ಮನೆಯಲ್ಲಿ ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ