ಆ್ಯಪ್ನಗರ

ಅಲೋಕ್‌ ಮನೆ ಮೇಲೆ ಸಿಬಿಐ ದಾಳಿ: ನನಗೆ ಸಂಬಂಧವಿಲ್ಲ ಅಂದ್ರು ಕುಮಾರಸ್ವಾಮಿ

​ಕುಮಾರಸ್ವಾಮಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲೋಕ್‌ ಕುಮಾರ್‌ರನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಿದ್ದರು. ಈ ಅವಧಿಯಲ್ಲೇ ನಡೆದ ಫೋನ್‌ ಕದ್ದಾಲಿಕೆ ಪ್ರಕರಣ ಇದಾಗಿದೆ.​

Vijaya Karnataka 26 Sep 2019, 3:09 pm
ಬೆಂಗಳೂರು: ಮಾಜಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಎಡಿಜಿಪಿ ಅಲೋಕ್‌ ಕುಮಾರ್‌ ಮನೆ ಮೇಲಿನ ಸಿಬಿಐ ದಾಳಿಗೂ ನನಗೂ ಏನ್‌ ಸಂಬಂಧ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
Vijaya Karnataka Web Alok Kumar HD Kumaraswamy


ಜೆಡಿಎಸ್ ಕಚೇರಿಯಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, "ಯಾರ ಮನೆ ಮೇಲಾದರೂ ದಾಳಿ ಮಾಡಲಿ. ನನ್ನ ಯಾಕೆ ಕೇಳ್ತೀರಾ, ನಂಗೇನು ಸಂಬಂಧ?" ಎಂದು ಮರು ಪ್ರಶ್ನೆ ಹಾಕಿದರು.

ಟೆಲಿಫೋನ್ ಕದ್ದಾಲಿಕೆಗೆ ಅನುಮತಿ ಕೊಟ್ಟಿದ್ದು ಯಾರು?: ಅಲೋಕ್ ಕುಮಾರ್‌ಗೆ ಸಿಬಿಐ ಗ್ರಿಲ್

ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಮಾಡ್ಕೊಳ್ತಾರೆ ಎಂದು ಹೇಳಿದ ಕುಮಾರಸ್ವಾಮಿ, "ಅವ್ರ ಮನೆ ಮೇಲೆ ದಾಳಿ ಮಾಡಿದ್ರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ಸಿಬಿಐ ರೇಡ್‌ಗೂ ನನಗೂ ಸಂಬಂಧ ಇಲ್ಲ. ನನ್ನ ತನಿಖೆಗೂ ಬೇಕಾದ್ರೆ ಬರಲಿ," ಎಂದು ಉತ್ತರಿಸಿದರು.

ದೇಶದ ಕಾನೂನಿನಲ್ಲಿ ಯಾರ ಮೇಲೆ ಬೇಕಾದರೂ ತನಿಖೆ ಮಾಡಬಹುದು. ಅದಕ್ಕೆ ಯಾಕೆ ಗಾಬರಿ? ಎಂದ ಅವರು, ಅಲೋಕ್ ಕುಮಾರ್ ಈಗ್ಲೂ ದಕ್ಷ ಅಧಿಕಾರಿನೇ ಎಂದು ಹೇಳಿದರು.

ಫೋನ್ ಟ್ಯಾಪಿಂಗ್ ಪ್ರಕರಣ: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ದಾಳಿ

ಕುಮಾರಸ್ವಾಮಿ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲೋಕ್‌ ಕುಮಾರ್‌ರನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಿದ್ದರು. ಈ ಅವಧಿಯಲ್ಲೇ ನಡೆದ ಫೋನ್‌ ಕದ್ದಾಲಿಕೆ ಪ್ರಕರಣ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ