ಆ್ಯಪ್ನಗರ

10ನೇ ತರಗತಿ ಫಲಿತಾಂಶ ಕುಸಿತಕ್ಕೆ ಸಿಸಿ ಕ್ಯಾಮೆರಾ ಕಣ್ಣಿಟ್ಟಿದ್ದೇ ಕಾರಣ!

​​ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಪೂರಕ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೆಲವು ಅಧಿಕಾರಿಗಳು ಯಾವುದೇ ಎಗ್ಗು ಸಿಗ್ಗಿಲ್ಲದೆ ಈ 'ಸಂಶೋಧನಾ ಸತ್ಯ'ವನ್ನು ಹರಿಬಿಟ್ಟಾಗ ಶಿಕ್ಷಣ ಸಚಿವರು ಅವಕ್ಕಾದರು.

Vijaya Karnataka 31 Oct 2019, 8:47 am
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸಂಪೂರ್ಣ ಕುಸಿಯಲು ಪರೀಕ್ಷಾ ಕೇಂದ್ರಗಳಲ್ಲಿಅಳವಡಿಸಿರುವ ಸಿಸಿ ಕ್ಯಾಮೆರಾ ಕಣ್ಗಾವಲೇ ಕಾರಣ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಬುಧವಾರ ಇಲ್ಲಿನ ಜಿಪಂ. ನೂತನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿಪ್ರತಿಪಾದಿಸಿದರು.
Vijaya Karnataka Web Exam


ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಪೂರಕ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೆಲವು ಅಧಿಕಾರಿಗಳು ಯಾವುದೇ ಎಗ್ಗು ಸಿಗ್ಗಿಲ್ಲದೆ ಈ 'ಸಂಶೋಧನಾ ಸತ್ಯ'ವನ್ನು ಹರಿಬಿಟ್ಟಾಗ ಶಿಕ್ಷಣ ಸಚಿವರು ಅವಕ್ಕಾದರು. ಕಲಬುರಗಿ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ್‌ ಯಾದವ್‌ '' ಅಯ್ಯೋ ದೇವರೇ ಹಿಂಗಂದ್ರೆ ಹೇಗ್ರೀ? ಎಂದು ಉದ್ಗಾರ ತೆಗೆದರು.

2019-20 ನೇ ಸಾಲಿನ SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

''ನಾವು ಶಿಕ್ಷಣದ ಗುಣಮಟ್ಟದ ಸುಧಾರಿಸಬೇಕು, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಾಗಬೇಕು ಎಂದು ಸಾಕಷ್ಟು ಹಣ ನೀಡುತ್ತಿದ್ದರೆ, ನೀವು ಹೀಗೆಲ್ಲಾಹೇಳ್ತೀರಲ್ಲ,'' ಎಂದು ಅಚ್ಚರಿ ವ್ಯಕ್ತಪಡಿಸಿದರು.

''ಈ ಭಾಗದಲ್ಲಿ ಮೊದಲಿನಿಂದಲೂ ಪರೀಕ್ಷಾ ಅಕ್ರಮಗಳು ಸ್ವಲ್ಪ ಹೆಚ್ಚು. ಇಂತಹ ವಾಮಮಾರ್ಗಗಳ ಬದಲು ಮಕ್ಕಳಲ್ಲಿಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕು,'' ಎಂದು ಸೂಚಿಸಿದರು.

ಈ ವೇಳೆ, ಸಚಿವ ಸುರೇಶ್‌ ಕುಮಾರ್‌ ಮಾತನಾಡುತ್ತಾ,''ಹೈಸ್ಕೂಲು ಶಿಕ್ಷಕರು ಸಂಘ ಸಂಸ್ಥೆಗಳು ಎಂದು ಓಡಾಡುವುದರ ಬದಲು ಪ್ರಾಮಾಣಿಕವಾಗಿ ತರಗತಿಗಳಲ್ಲಿಪಾಠ ಮಾಡುವಂತೆ ನಿರ್ದೇಶನ ನೀಡಬೇಕೆಂದು ಡಿಡಿಪಿಐಗೆ ಸೂಚಿಸಿದರು. ಕಾರ್ಯಾಗಾರ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತ್ರ ಅವರು '' ನಕಲು ಮಾಡುವ ಮೂಲಕ ಪರೀಕ್ಷೆ ಬರೆಯುವುದಾದರೆ, ಹಗಲು-ರಾತ್ರಿ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ನೈತಿಕ ಮಟ್ಟ ಕುಸಿದು ಹೋಗುತ್ತದೆ. ಇದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ಹೇಳಿದರು.

ಶಿಕ್ಷಣಾಧಿಕಾರಿಗಳ ಸಿಸಿ ಕ್ಯಾಮೆರಾ ಪ್ರವರ ಸಾಗುತ್ತಿರುವಾಗ ವೇದಿಕೆಯ ಮೇಲೆ ಸಂಸದ ಡಾ.ಉಮೇಶ್‌ ಜಾಧವ್‌, ಜಿಲ್ಲಾಧಿಕಾರಿ ಬಿ.ಶರತ್‌, ಕಲಬುರಗಿ ಜಿಪಂ ಸಿಇಒ ಡಾ.ಪಿ.ರಾಜಾ, ಯಾದಗಿರಿ ಸಿಇಒ ಶಿಲ್ಪಾ ಶರ್ಮಾ ವೇದಿಕೆಯ ಮೇಲೆ 'ಮೌನ'ವಾಗಿ ಕುಳಿತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ