ಆ್ಯಪ್ನಗರ

ರಾಮನಗರ: ಬೆಳ್ಳಂಬೆಳಗ್ಗೆ ಮುತ್ತಪ್ಪ ರೈ ಪುತ್ರನ ನಿವಾಸದ ಮೇಲೆ ಸಿಸಿಬಿ ದಾಳಿ!

​​ಸದ್ಯ ರಿಕ್ಕಿ ವಾಸ್ತ್ಯವ್ಯವಿರುವ ಬಿಡದಿಯ ನಿವಾಸದಲ್ಲಿ ಸಿಸಿಬಿ ಶೋಧ ಕಾರ್ಯ ನಡೆಸುತ್ತಿದೆ. ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಸರ್ಚ್‌ ವಾರಂಟ್‌ ಹಿಡಿದುಕೊಂಡೆ ಬಂದಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ಏಳು ಕಾರುಗಳಲ್ಲಿ 6 ಗಂಟೆ ಹೊತ್ತಿಗೆ ಸಿಸಿಬಿ ಅಧಿಕಾರಿಗಳು ಬಂದಿರುವುದಾಗಿ ತಿಳಿದುಬಂದಿದೆ.

Vijaya Karnataka Web 6 Oct 2020, 9:13 am
ರಾಮನಗರ: ಬೆಳ್ಳಂಬೆಳಗ್ಗೆ ದಿವಂಗತ ಮತ್ತಪ್ಪ ರೈ ಅವರ ಪುತ್ರನಿಗೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶಾಕ್‌ ನೀಡಿದ್ದಾರೆ. ಮುಂಜಾನೆಯೇ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಮುತ್ತಪ್ಪ ರೈ ಹಾಗೂ ಅವರ ಪುತ್ರನಿಗೆ ಸಂಬಂಧಿಸಿದ ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ರೇಡ್‌ ನಡೆಸಿದ್ದಾರೆ.
Vijaya Karnataka Web Af0xjCmR


ಸದ್ಯ ರಿಕ್ಕಿ ವಾಸ್ತ್ಯವ್ಯವಿರುವ ಬಿಡದಿಯ ನಿವಾಸದಲ್ಲಿ ಸಿಸಿಬಿ ಶೋಧ ಕಾರ್ಯ ನಡೆಸುತ್ತಿದೆ. ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಸರ್ಚ್‌ ವಾರಂಟ್‌ ಹಿಡಿದುಕೊಂಡೆ ಬಂದಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ಏಳು ಕಾರುಗಳಲ್ಲಿ 6 ಗಂಟೆ ಹೊತ್ತಿಗೆ ಸಿಸಿಬಿ ಅಧಿಕಾರಿಗಳು ಬಂದಿರುವುದಾಗಿ ತಿಳಿದುಬಂದಿದೆ.

ಆರೋಪವೇನು?
ಮುತ್ತಪ್ಪ ರೈ ಮಗ ರಿಕ್ಕಿ ಡ್ರಗ್ ಪೆಡ್ಲರ್ಸ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾದ ಬೆನ್ನತ್ತಿರುವ ಸಿಸಿಬಿ ಪೊಲೀಸರಿಗೆ ಬಂಧಿತರಾಗಿರುವ ಪೆಡ್ಲರ್‌ಗಳ ಮಾಹಿತಿ ನೀಡಿದ ಹಿನ್ನೆಲೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಅಲ್ಲದೆ ಬಿಡದಿ ನಿವಾಸದಲ್ಲಿ ರಿಕ್ಕಿ ರೈಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ