ಆ್ಯಪ್ನಗರ

ಸಿ.ಡಿ ಪ್ರಕರಣ: ಯಡಿಯೂರಪ್ಪ ರಾಜೀನಾಮೆಗೆ ಯುವ ಕಾಂಗ್ರೆಸ್ ಆಗ್ರಹ

ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕರಾದ ವಿಶ್ವನಾಥ್, ರೇಣುಕಾಚಾರ್ಯ ಮೆಗಾಸಿಟಿ ಹಗರಣದ ದಾಖಲೆ ಇದೆ ಅದನ್ನು ಕೂಡಲೆ ಬಿಡುಗಡೆ ಮಾಡುತ್ತೇವೆ ಎಂದು ಸವಾಲು ಎಸೆದಿದ್ದಾರೆ. ಹಾಗಾದರೆ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡುವ ಅವಶ್ಯಕತೆ ಬಿಜೆಪಿಗೆ ಇದೆಯೇ? ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

Vijaya Karnataka 15 Jan 2021, 4:27 pm
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷದವರೇ ಟೀಕೆ ನಡೆಸಿ ಸಿ.ಡಿ ಹಾಗೂ ಭ್ರಷ್ಟಾಚಾರದ ಸರಕಾರ ಎ೦ದು ಟೀಕಿಸಿರುವ ಹಿನ್ನೆಲೆಯಲ್ಲಿ ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್‌ ಸದಸ್ಯರು ಆಗ್ರಹಿಸಿದ್ದಾರೆ.
Vijaya Karnataka Web Youth Congress Protest


ಈ ಸಂಬಂಧ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಆಪರೇಶನ್ ಕಮಲದ ಮೂಲಕ ಅಧಿಕಾರ ಪಡೆದು ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇಂದು ಬಿಜೆಪಿ ಪಕ್ಷದವರೇ ಕಾಂಗ್ರೆಸ್ ಆರೋಪವನ್ನು ಒಪ್ಪಿಕೊಂಡು ಯಡಿಯೂರಪ್ಪನ ಕುಟುಂಬದವರು ಹಾಗೂ ನೂತನ ಸಚಿವರು ಹಣ ನೀಡಿ ಅಧಿಕಾರ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಈ ಭ್ರಷ್ಟ ಸರಕಾರ ರಾಜ್ಯದ ಜನಕ್ಕೆ ಮಾರಕ ಎಂದು ಈಗ ಬಿಜೆಪಿ ಪಕ್ಷದವರೇ ಸಾಬೀತುಪಡಿಸಿದ್ದಾರೆ ಎಂದರು.

ಸಿಪಿ ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕರಾದ ಎಚ್ ವಿಶ್ವನಾಥ್, ಎಂಪಿ ರೇಣುಕಾಚಾರ್ಯ ಮೆಗಾಸಿಟಿ ಹಗರಣದ ದಾಖಲೆ ಇದೆ ಅದನ್ನು ಕೂಡಲೆ ಬಿಡುಗಡೆ ಮಾಡುತ್ತೇವೆ ಎಂದು ಸವಾಲು ಎಸೆದಿದ್ದಾರೆ. ಹಾಗಾದರೆ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಸಚಿವರನ್ನಾಗಿ ಮಾಡುವ ಅವಶ್ಯಕತೆ ಬಿಜೆಪಿ ಪಕ್ಷಕ್ಕೆ ಇದೆಯೇ? ಬಿಜೆಪಿ ಭ್ರಷ್ಟಾಚಾರದ ಪರ ಇರುವ ಪಕ್ಷ ಹಾಗೂ ಸರಕಾರ ಎಂದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್‌ ಕಾರ್ಯಕರ್ತರು ಆಗ್ರಹಿಸಿದರು.

ಯಾವ್ಯಾವ ಕುದುರೆಗೆ ಎಷ್ಟೆಷ್ಟು ರೇಟು? ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ಪ್ರಶ್ನೆ?
ಸಿ.ಡಿ ವಿಷಯದಲ್ಲಿ ಅನೇಕ ಬಾರಿ ಅನುಮಾನದ ಹೇಳಿಕೆಗಳು ಕೇಳಿ ಬಂದರೂ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ಹೀಗಿದ್ದೂ ಅದರ ಬಗ್ಗೆ ಯಡಿಯೂರಪ್ಪ ಗಮನ ಹರಿಸಿರಲಿಲ್ಲ. ಇಂದು ಸ್ವಪಕ್ಷದವರೇ ಸಿ.ಡಿ ವಿಷಯವನ್ನು ಪ್ರಸ್ತಾಪಿಸಿ ಯಡಿಯೂರಪ್ಪನವರು ಬ್ಲಾಕ್ ಮೇಲ್‌ಗೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ. ಈ ಸಿ.ಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಎಸ್ ಮನೋಹರ್, ಜಿ ಜನಾರ್ಧನ್ ಎ ಆನಂದ್, ಎಂ ಎ ಸಲೀಮ್, ಈ ಶೇಖರ್, ಪ್ರಕಾಶ್, ಮಹೇಶ್, ಪುಟ್ಟರಾಜು, ಚಿಕ್ಕಣ್ಣ, ಉಮೇಶ್ ಶಶಿಭೂಷಣ್,, ಚಂದ್ರಶೇಖರ್‌, ಶ್ರೀಮತಿ ಶೀಲಮ್ಮ ಮತ್ತು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡರುಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ