ಆ್ಯಪ್ನಗರ

ಸಕಾಲಕ್ಕೆ ಅನುದಾನ ನೀಡದ ಕೇಂದ್ರ; ಪ್ರಮುಖ ಯೋಜನೆಗಳ ಜಾರಿಗೆ ರಾಜ್ಯ ಸರಕಾರ ಪರದಾಟ!

2020-21 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಸೆಪ್ಟಂಬರ್‌ ವರೆಗೆ ಶೇ. 50 ಕ್ಕಿಂತ ಕಡಿಮೆ ಅನುದಾನವಷ್ಟೇ ಬಿಡುಗಡೆಯಾಗಿದೆ. ಸ್ವಚ್ಛ ಭಾರತಕ್ಕೆ (ಗ್ರಾಮೀಣ) ಕೇಂದ್ರ ಸರಕಾರ 249.60 ಕೋಟಿ ರೂ. ಅನುದಾನ ನೀಡಬೇಕಿತ್ತು,

Vijaya Karnataka Web 8 Dec 2021, 7:15 pm
ಬೆಂಗಳೂರು: ಸಕಾಲದಲ್ಲಿ ಕೇಂದ್ರ ಸರಕಾರ ಅನುದಾನ ನೀಡದೇ ಇರುವುದರಿಂದ ರಾಜ್ಯಕ್ಕೆ ಹಂಚಿಕೆಯಾದ ಕೇಂದ್ರ ಅನುದಾನಿತ ಯೋಜನೆಗಳ ಜಾರಿಗೆ ರಾಜ್ಯ ಸರಕಾರ ಪರದಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರಕಾರ, ಕೇಂದ್ರದ ಈ ನಡೆಯಿಂದ ಮತ್ತಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ರಾಜ್ಯಕ್ಕೆ ಸಿಗಬೇಕಾದ ಜಿಎಸ್‌ಟಿ ಪರಿಹಾರ ಹಂಚಿಕೆ ಹಾಗೂ ನೆರೆ ಪರಿಹಾರದಲ್ಲೂ ಅನ್ಯಾಯವಾಗಿದ್ದು, ಇದೀಗ ಕೇಂದ್ರ ಅನುದಾನಿತ ಯೋಜನೆಗಳಿಗೆ ನೀಡಬೇಕಾದ ಅನುದಾನವೂ ಸಕಾಲದಲ್ಲಿ ಕೈಸೇರುತ್ತಿಲ್ಲ.

ರಾಜ್ಯದಲ್ಲಿ ಪೆಟ್ರೋಲ್‌ ಮೇಲಿನ ತೆರಿಗೆ ಇಳಿಕೆ, ಆದಾಯ ಮಾತ್ರ ದಾಖಲೆ ಪ್ರಮಾಣದಲ್ಲಿ ಏರಿಕೆ!

2020-21 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಸೆಪ್ಟಂಬರ್‌ವರೆಗೆ ಶೇ. 50 ಕ್ಕಿಂತ ಕಡಿಮೆ ಅನುದಾನವಷ್ಟೇ ಬಿಡುಗಡೆಯಾಗಿದೆ. ಸ್ವಚ್ಛ ಭಾರತಕ್ಕೆ (ಗ್ರಾಮೀಣ) ಕೇಂದ್ರ ಸರಕಾರ 249.60 ಕೋಟಿ ರೂ. ಅನುದಾನ ನೀಡಬೇಕಿತ್ತು, ಆದರೆ ಈವರೆಗೂ ಬಿಡಿಗಾಸು ದೊರೆತಿಲ್ಲ. ಇಷ್ಟು ಮಾತ್ರವಲ್ಲ, ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಕೇಂದ್ರ 900 ಕೋಟಿ ರೂಪಾಯಿ ಅನುದಾನ ನೀಡಬೇಕಾಗಿತ್ತು ಆದರೆ ಬಿಡುಗಡೆಯಾಗಿದ್ದು ಕೇವಲ 195.75 ಕೋಟಿ ರೂಪಾಯಿ.

ಅದೇ ರೀತಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) 960 ಕೋಟಿ ಹಣಕಾಸು ನೆರವು ಕೇಂದ್ರ ನೀಡಬೇಕಿದೆ ಆದರೆ ಕೇಂದ್ರದಿಂದ ಬಿಡಿಗಡೆ ಆಗಿದ್ದು 358.47 ಕೋಟಿ ರೂ,. ಸಮಗ್ರ ಶಿಕ್ಷಣ ಅಭಿಯಾನಕ್ಕೆ 707.61 ಕೋಟಿ ರೂ. ಅನುದಾನ ನೀಡಬೇಕಿದೆ ಆದರೆ ಬಿಡುಗಡೆಯಾಗಿದ್ದು 165.70 ಕೋಟಿ ರೂ. ಮಧ್ಯಾಹ್ಮದ ಬಿಸಿ ಊಟ ಕಾರ್ಯಕ್ರಮಕ್ಕೂ 577.71 ಕೋಟಿ ರೂ ಪೈಕಿ 120.38 ಕೋಟಿ ರೂ ಅಷ್ಟೇ ಬಿಡುಗಡೆಯಾಗಿದೆ.

ದಕ್ಷಿಣ ರಾಜ್ಯಗಳಲ್ಲಿ ಹವಾಮಾನ ವ್ಯತ್ಯಯ : 2035ಕ್ಕೆ ತಾಪಮಾನ ಏರುಗತಿ, 6ಕ್ಕೂ ಹೆಚ್ಚು ಸೈಕ್ಲೋನ್‌ಗಳ ಲಗ್ಗೆ

ಇನ್ನು ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ 401. 53 ಕೋಟಿ ರೂ ಬದಲಾಗಿ 180.92 ಕೋಟಿ ರೂಪಾಯಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ (ನಗರ) 515 ಕೋಟಿ ರೂ. ಬದಲಾಗಿ 109 ಕೋಟಿ ರೂ. ಬಿಡುಗಡೆ ಮಾಡಿದರೆ ಪ್ರಧಾನ ಮಂತ್ರಿ ಅವಾಜ್ ಯೋಜನೆ (ಗ್ರಾಮೀಣ) 300 ಕೋಟಿ ರೂ. ನೀಡಬೇಕಾದರೂ ಸಿಕ್ಕಿದ್ದು ಮಾತ್ರ ಶೂನ್ಯ. ಅದೇ ರೀತಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 168.65 ಕೋಟಿ ರೂ ಅನುದಾನದಲ್ಲಿ ಬಿಡುಗಡೆಯಾಗಿದ್ದು ಕೇವಲ 19.30 ಕೋಟಿ ರೂಪಾಯಿ ಮಾತ್ರ. ಕೇಂದ್ರದ ಈ ವಿಳಂಬ ಧೋರಣೆಯಿಂದ ಯೋಜನೆಗಳ ಜಾರಿಗೂ ಅಡ್ಡಿ ಉಂಟಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ