ಆ್ಯಪ್ನಗರ

ಅದಾನಿಯನ್ನು ರಕ್ಷಣೆ ಮಾಡಲು ಶಾರುಖ್ ಖಾನ್ ಪುತ್ರನ ಬಂಧನ: ಬಿ.ಕೆ ಹರಿಪ್ರಸಾದ್ ಆರೋಪ

ಅದಾನಿ ಪೋರ್ಟ್ಸ್‌ನಲ್ಲಿ ಮಾದಕವಸ್ತುಗಳು ದೊರೆತ ಪ್ರಕರಣದಿಂದ ಗೌತಮ್ ಅದಾನಿಯನ್ನು ರಕ್ಷಣೆ ಮಾಡಲು ನಟ ಶಾರುಖ್ ಖಾನ್ ಮಗನನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 21 Oct 2021, 2:17 pm

ಹೈಲೈಟ್ಸ್‌:

  • ಅದಾನಿ ಬಂದರಿನಲ್ಲಿ ಭಾರಿ ಪ್ರಮಾಣದ ಗಾಂಜಾ, ಡ್ರಗ್ ಸೀಜ್ ಆಗಿತ್ತು
  • ಕೇವಲ ಅರ್ಧ ಗ್ರಾಂ ಡ್ರಗ್ಸ್ ಹೊಂದಿದ್ದ ಹುಡುಗರನ್ನು ಜೈಲಿಗೆ ಹಾಕಿದ್ದೀರಿ
  • ನೂರು ಕೋಟಿ ಡೋಸ್ ಲಸಿಕೆ ನೀಡಿರುವುದು ಸಂಭ್ರಮಾಚರಣೆ ವಿಷಯವಲ್ಲ
  • ಸತ್ತವರ ಸಂಖ್ಯೆಯನ್ನು ಸರಿಯಾಗಿ ನೀಡುವ ಜವಾಬ್ದಾರಿ ನಿರ್ವಹಣೆ ಮಾಡಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bk hariprasad
ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರನ್ನು ರಕ್ಷಣೆ ಮಾಡಲು ಸಿನಿಮಾ ನಟ ಶಾರುಖ್ ಖಾನ್ ಪುತ್ರನ ಬಂಧನ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಬಂದರಿನಲ್ಲಿ 80 ಟನ್ ಗಾಂಜಾ ಬಂದಿತ್ತು. ಅದಾನಿ ಯಾರ ಮನುಷ್ಯ ಎಂಬುವುದು ಗೊತ್ತಿದೆ. ಅದಾನಿ ಬಂದರಿನಲ್ಲಿ ಭಾರಿ ಪ್ರಮಾಣದ ಗಾಂಜಾ, ಡ್ರಗ್ ಸೀಜ್ ಆಗಿದೆ.‌ ಆದರೆ ಅರ್ಧ ಗ್ರಾಂ ಡ್ರಗ್ಸ್ ಇದ್ದ ಹುಡುಗರನ್ನು ಜೈಲಿಗೆ ಹಾಕಿದ್ದೀರಿ ಎಂದು ಟೀಕಿಸಿದರು. ಆರ್ಯನ್ ಖಾನ್‌ಗೆ ಮತ್ತೆ ನಿರಾಶೆ: ಜಾಮೀನು ಅರ್ಜಿ ವಿಚಾರಣೆ ಅ. 26ಕ್ಕೆ
ಅದಾನಿಯನ್ನು ರಕ್ಷಣೆ ಮಾಡಲು ಶಾರುಖ್ ಖಾನ್ ಪುತ್ರನ ಬಂಧನ ಮಾಡಲಾಗಿದೆ ಎಂದು‌ ಆರೋಪ ಮಾಡಿದ ಅವರು, ಅದಾನಿ ಪೋರ್ಟ್‌ನಲ್ಲಿ ಸಿಕ್ಕಿದ ಡ್ರಗ್ಸ್ ಪ್ರಕರಣವನ್ನು ಬೇರೆಡೆ ತಿರುಗಿಸುವ ಉದ್ದೇಶ ಇದು ಎಂದರು.

ಇದು ಸಂತೋಷ ಪರುವ ವಿಚಾರವಲ್ಲ
ಇದೇ ಸಂದರ್ಭದಲ್ಲಿ ನೂರು ಕೋಟಿ ವ್ಯಾಕ್ಸಿನೇಷನ್ ನೀಡಿರುವ ವಿಚಾರವಾಗಿ ಸಂಭ್ರಮಾಚರಣೆಯನ್ನು ವಿರೋಧಿಸಿದ ಅವರು, ಪ್ರಪಂಚದಲ್ಲಿ ಕೋವಿಡ್ ಜನರನ್ನು ಸಂಕಷ್ಟಕ್ಕೆ ಸೃಷ್ಟಿ ಮಾಡಿತ್ತು. ಕೇವಲ ಸರ್ಕಾರದ ಮಾತ್ರ ಅಲ್ಲ ಎಲ್ಲರೂ ವಿಫಲರಾಗಿದ್ದೇವೆ. ನೂರು ಕೋಟಿ ಲಸಿಕೆ ನೀಡಿದ್ದೇವೆ ಎಂಬುದು ಸಂತೋಷ ಪಡುವ ವಿಚಾರ ಅಲ್ಲ.
100 Crore Dose: ಲಸಿಕೆಯಲ್ಲಿ ಭಾರತದ ಸಾಧನೆ: ಇದು 'ವಿಜ್ಞಾನದ ದಿಗ್ವಿಜಯ' ಎಂದ ಮೋದಿ ಪ್ರತಿಯೊಬ್ಬರೂ ಕೋವಿಡ್ ನೋವು ತಟ್ಟಿದೆ. ಸತ್ತವರ ಸಂಖ್ಯೆಯನ್ನು ಸರಿಯಾಗಿ ನೀಡುವ ಜವಾಬ್ದಾರಿ ನಿರ್ವಹಣೆ ಮಾಡಿಲ್ಲ ಎಂದು ಕಿಡಿಕಾರಿದರು.

ಎಷ್ಟು ಸರ್ಕಾರಿ ಆಸ್ಪತ್ರೆ, ಎಷ್ಟು ಖಾಸಗಿ ಆಸ್ಪತ್ರೆಯಲ್ಲಿ ನೀಡಿದ್ದಾರೆ ಎಂದು ತಿಳಿಸಿಲ್ಲ. ಕೋವಿಡ್ ಹೇಗೆ ಎದುರಿಸಬೇಕು ಎಂದು ಹೇಳಿಲ್ಲ. ಮೊದಲನೇ ಡೋಸ್ ನೂರು ಕೋಟಿ ಜನರಿಗೆ ಕೊಡಲಾಗಿದೆ ಎನ್ನುತ್ತಾರೆ. ಬೇರೆ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ಕೊಡುತ್ತಿದ್ದಾರೆ. ಆದರೆ ಪ್ರಧಾನಿ ಕೇವಲ ಪದ ಪುಂಜ ಪ್ರಯೋಗ ಮಾಡಿದರೆ ಪ್ರಯೋಜನ ಇಲ್ಲ. ಅಮೆರಿಕಾದಲ್ಲಿ ಎರಡು ಡೋಸ್ ಆಗಿ ಈಗ ಬೂಸ್ಟರ್ ಕೊಡುತ್ತಿದ್ದಾರೆ ಎಂದರು.

ಲಸಿಕೆ ವಿಚಾರವಾಗಿ ಸಂಭ್ರಮದ ಬದಲು ಕ್ಷಮಾಪಣೆ ಕೇಳಬೇಕು. ದೊಡ್ಡ ಮಟ್ಟದಲ್ಲಿ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ವಾರಿಯರ್ಸ್‌ಗೆ ಭತ್ಯೆ ಕೊಡುವ ಬಗ್ಗೆ ಚಕಾರ ಎತ್ತಿಲ್ಲ. ಕೋ ವ್ಯಾಕ್ಸಿನ್‌ಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಎಷ್ಟು ಜನ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ ಅವರು, ವಿಕೃತ ಮನೋಭಾವದವರು ಇದನ್ನು ಸಂಭ್ರಮಿಸಬಹುದು. ಸಾಮಾನ್ಯರು ಸಂಭ್ರಮಿಸಲು ಸಾಧ್ಯವಿಲ್ಲ ಎಂದು ಲಸಿಕೆ ಸಂಭ್ರಮಾಚರಣೆಗೆ ವಾಗ್ದಾಳಿ ನಡೆಸಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ