ಆ್ಯಪ್ನಗರ

ಕಳಸಾ- ಬಂಡೂರಿ ಯೋಜನೆಗೆ ಹೊಸ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಸೂಚನೆ!

ಕಳಸಾ - ಬಂಡೂರಿ ನಾಲಾ ತಿರುವು ಪ್ರಥಮ ಹಂತದ ಯೋಜನೆಗೆ ಪರಿಸರ ಸಂಬಂಧಿ ಅನುಮತಿಗಾಗಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ರಾಜ್ಯಕ್ಕೆ ಸೂಚಿಸಿದೆ.

Vijaya Karnataka Web 10 Jul 2020, 10:40 pm
ಬೆಂಗಳೂರು: ಕಳಸಾ -ಬಂಡೂರಿ ನಾಲಾ ತಿರುವು ಪ್ರಥಮ ಹಂತದ ಯೋಜನೆಗೆ ಪರಿಸರ ಸಂಬಂಧಿ ಅನುಮತಿಗಾಗಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ರಾಜ್ಯಕ್ಕೆ ಸೂಚಿಸಿದೆ.
Vijaya Karnataka Web Kalasa-Banduri project


ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ದಿಲ್ಲಿಗೆ ತೆರಳಿ ಕಳಸಾ- ಬಂಡೂರಿ ನಾಲೆಗಳ ಪ್ರಥಮ ಹಂತದ ಯೋಜನೆಗೆ ಅನುಮತಿ ನೀಡುವಂತೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಕೋರಿದ್ದರು. ರಾಜ್ಯದ ಈ ಮನವಿಗೆ ಕೇಂದ್ರ ಸರಕಾರ ಸೂಕ್ತ ರೀತಿಯಲ್ಲಿಸ್ಪಂದಿಸಿದೆ.

ಕಳಸಾ -ಬಂಡೂರಿ ನಾಲಾ ಯೋಜನೆಯ ಕುರಿತು ಕರ್ನಾಟಕ ಮತ್ತು ನೆರೆ ರಾಜ್ಯಗಳ ನಡುವೆ ವಿವಾದವಿರುವ ಕಾರಣ ಯೋಜನೆ ಪ್ರಸ್ತಾವನೆಯನ್ನು 2003 ರಲ್ಲಿಯೇ ರಾಜ್ಯಕ್ಕೆ ಮರಳಿಸಲಾಗಿತ್ತು, 2014 ರಲ್ಲಿಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಅಂತೆಯೇ, ಹೊಸ ಪ್ರಸ್ತಾವಣೆ ಸಲ್ಲಿಸಿ ಅನುಮತಿ ಪಡೆಯುವಂತೆ ಕೇಂದ್ರ ಸರಕಾರದಿಂದ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಪತ್ರ ಬಂದಿದೆ.

ಸತತ ಮೂರನೇ ದಿನ 2000 ದಾಟಿದ ಕೊರೊನಾ: ಅಪಾಯದ ಮುನ್ಸೂಚನೆಯಾದ ಮೃತರ ಸಂಖ್ಯೆ!

ಆನ್‌ಲೈನ್‌ ಮೂಲಕವೇ ಹೊಸ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ನೀರಾವರಿ ಬಿಕ್ಕಟ್ಟು ಪರಿಹಾರಕ್ಕಾಗಿ ಮುಂಬಯಿಗೆ ವಿಶೇಷ ನಿಯೋಗ ಕೊಂಡೊಯ್ದು ಬೆನ್ನಲ್ಲೇ, ಕಳಸಾ -ಬಂಡೂರಿ ಯೋಜನೆಗೂ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ ಸ್ಪಂದಿಸಿದೆ. ರಾಜ್ಯದ ಪಾಲಿಗೆ ಅದರಲ್ಲಿಯೂ ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂತಸದ ಸುದ್ಧಿ ಹೊರಬಿದ್ದಿದೆ.

ಇಂಜಿನಿಯರಿಂಗ್‌, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಎಗ್ಸಾಂ ಕ್ಯಾನ್ಸಲ್- ಡೈರೆಕ್ಟ್‌ ಪಾಸ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ