ಆ್ಯಪ್ನಗರ

ಬರದಿಂದ 2434 ಕೋಟಿ ರೂ. ನಷ್ಟ, ಕೇಂದ್ರದಿಂದ ಬಂದಿದ್ದು 949 ಕೋಟಿ ರೂ.: ಪರಮೇಶ್ವರ್‌

ಮಹಾರಾಷ್ಟ್ರಕ್ಕೆ 4000 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರ ಈ ರೀತಿಯ ಮಲತಾಯಿ ಧೋರಣೆ ತೋರಬಾರದು ಎಂದು ದೂರಿದರು.

Vijaya Karnataka Web 10 May 2019, 8:21 pm
ತುಮಕೂರು: ಕರ್ನಾಟಕದಲ್ಲಿ ಬರಗಾಲದಿಂದ 2,434 ಕೋಟಿ ರೂ. ನಷ್ಟವಾಗಿದ್ದು, ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆವು. ಆದರೆ, 949 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.
Vijaya Karnataka Web ಪರಮೇಶ್ವರ್‌
ಪರಮೇಶ್ವರ್‌


ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಕುಡಿಯುವ ನೀರು, ಮೇವು, ಜನ ಗುಳೆ ಹೋಗುವುದು ತಡೆಯಲು ಈ ಹಣ ಸಾಲದು ಎಂದರು.

ಆದರೆ ಮಹಾರಾಷ್ಟ್ರಕ್ಕೆ 4000 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರ ಈ ರೀತಿಯ ಮಲತಾಯಿ ಧೋರಣೆ ತೋರಬಾರದು ಎಂದು ದೂರಿದರು.

ಬರ ಕುರಿತು ವರದಿ ಕೊಟ್ಟರೂ ಹಣ ಕೊಟ್ಟಿಲ್ಲ. ಆದರೂ ಸರಕಾರ ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ ಎಂದು ಪರಮೇಶ್ವರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ