ಆ್ಯಪ್ನಗರ

ಚಂದ್ರಯಾನ 2: ವಿಕ್ರಮ್‌ ಜತೆ ಸಂಪರ್ಕ ಸಾಧಿಸುವ ಸಾಧ್ಯತೆ ಕ್ಷೀಣ

ಚಂದ್ರಯಾನ 2 ಮಹತ್ವಾಕಾಂಕ್ಷಿ ಯೋಜನೆ ಕೊನೆಯ ಕ್ಷಣದಲ್ಲಿ ಹಾದಿ ತಪ್ಪಿದ್ದು ಕೋಟ್ಯಂತರ ಭಾರತೀಯರಲ್ಲಿ ನಿರಾಸೆ ಮೂಡಿಸಿದೆ. ಆದರೆ ಇಸ್ರೋ ಸಾಧನೆಯನ್ನು ಇಡೀ ಭಾರತವೇ ಕೊಂಡಾಡಿದೆ. ವಿಶ್ವದ ದಿಗ್ಗಜರು ಕೂಡ ಭೇಷ್‌ ಎಂದಿದ್ದಾರೆ.

Vijaya Karnataka Web 13 Sep 2019, 7:32 pm
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ - ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಕೊನೆಯ ಮೆಟ್ಟಿಲಿನಲ್ಲಿ ಎಡವಿದ್ದು ಭಾರಿ ನಿರಾಸೆ ಮೂಡಿಸಿದೆ.
Vijaya Karnataka Web ಚಂದ್ರಯಾನ 2
ಚಂದ್ರಯಾನ 2


ವಿಕ್ರಮ್‌ ಲ್ಯಾಂಡರ್‌ ಎಲ್ಲಿದೆ ಎಂದು ಪತ್ತೆ ಮಾಡಿರುವ ಇಸ್ರೋ ವಿಜ್ಞಾನಿಗಳು ಈಗ ಅದರ ಜತೆ ಸಂಪರ್ಕ ಸಾಧಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಸೆಪ್ಟೆಂಬರ್‌ 7ರಂದು ಇಡೀ ವಿಶ್ವದ ಕಣ್ಣು ಭಾರತದ ಮೇಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಂದರೆ ಕೇವಲ 2.1 ಕಿಲೋ ಮೀಟರ್‌ ದೂರದಲ್ಲಿದ್ದಾಗ ವಿಕ್ರಮ್‌ ಲ್ಯಾಂಡರ್‌ ಹಾದಿ ತಪ್ಪಿತು. ಸಂಪರ್ಕ ಕಳೆದುಕೊಂಡಿತು. ಈಗ ಅದರಿಂದ ಯಾವುದೇ ಸಂದೇಶಗಳು ಕೂಡ ಬರುತ್ತಿಲ್ಲ. ಆದರೆ ಸಂದೇಶ ಪಡೆಯಲು ಎಲ್ಲ ರೀತಿಯಲ್ಲೂ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿಕ್ರಮ್‌ ಹಾರ್ಡ್‌ ಲ್ಯಾಂಡಿಂಗ್ ಆಗಿದ್ದರಿಂದ ತೊಂದರೆಯಾಗಿದೆ. ಸಾಫ್ಟ್‌ ಲ್ಯಾಂಡಿಂಗ್‌ಗಾಗಿ ಲ್ಯಾಂಡರ್‌ ವಿನ್ಯಾಸಗೊಳಿಸಲಾಗಿತ್ತು. ಲ್ಯಾಂಡರ್‌ನೊಳಗಿರುವ ಪ್ರಗ್ಯಾನ್‌ ರೋವರ್‌ 14 ದಿನ ಮಾತ್ರ. ಅಷ್ಟರೊಳಗೆ ಇಸ್ರೋ ಸಂಪರ್ಕ ಸಾಧಿಸಬೇಕು. ಹೀಗಾಗಿ ಇಸ್ರೋಗೆ ಇರುವುದು ಒಂದು ವಾರ ಮಾತ್ರ.

ದಿನ ಕಳೆದಂತೆ ಮರು ಸಂಪರ್ಕ ಸಾಧಿಸುವುದು ಕಷ್ಟ ಎನಿಸುತ್ತದೆ. ಪ್ರತಿ ಗಂಟೆ ಕಳೆದಂತೆ ಬ್ಯಾಟರಿ ಶಕ್ತಿಯೂ ಕಡಿಮೆಯಾಗುತ್ತದೆ. ಹೀಗಾಗಿ ಇನ್ನು ಒಂದು ವಾರದೊಳಗೆ ಬ್ಯಾಟರಿ ಸಂಪೂರ್ಣ ನಿಷ್ಕ್ರಿಯವಾದರೆ ಏನೂ ಮಾಡಲಾಗದು ಎಂದು ಇಸ್ರೋ ಅಧಿಕಾರಿಯೊಬ್ಬರು ವಿಶ್ಲೇಷಿಸಿದ್ದಾರೆ.

ಮರು ಸಂಪರ್ಕ ಸಾಧ್ಯತೆ ಸದ್ಯಕ್ಕೆ ಕ್ಷೀಣ. ಪವಾಡ ನಡೆದದರೆ ವಿಕ್ರಮ್‌ ಲ್ಯಾಂಡರ್‌ನಿಂದ ಸಂದೇಶ ಬಂದು ವಿಕ್ರಮ ಸಾಧಿಸಬೇಕು.

ಇಸ್ರೋ ವಿಜ್ಞಾನಿಗಳ ಪ್ರಕಾರ ಇದು ಕಷ್ಟಸಾಧ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ