ಆ್ಯಪ್ನಗರ

ಸಂವಿಧಾನ ಬದಲಿಸಬೇಕು ಎನ್ನುವವರನ್ನು ಬದಲಿಸಿ: ಡಿಸಿಎಂ ಡಾ.ಜಿ. ಪರಮೇಶ್ವರ

ಕೆಲವರ ದೃಷ್ಟಿಯಲ್ಲಿ ಸಂವಿಧಾನ ಭಿನ್ನವಾಗಿ ಕಾಣುತ್ತಿದೆ. ಅದನ್ನು ಬದಲಿಸಬೇಕು ಎನ್ನುವ ಯೋಚನೆ ಹೊಂದಿದ್ದಾರೆ. ಸಂವಿಧಾನದ ಅಡಿಪಾಯವನ್ನು ಅಲುಗಾಡಿಸುವ ಪ್ರಯತ್ನ ನಡೆದರೆ ಇಡೀ ಸಮಾಜವೇ ಅಲುಗಾಡುತ್ತದೆ. ದೊಡ್ಡ ಆಂದೋಲನವೇ ನಡೆಯಲಿದೆ. ನಮ್ಮ ಸಂವಿಧಾನ ಹಾಗೂ ಮೀಸಲಾತಿ ವ್ಯವಸ್ಥೆ ಇಂದಿಗೂ ಪ್ರಸ್ತುತ. ಸಂವಿಧಾನದ ರಕ್ಷಣೆಗೆ ನಿಲ್ಲುವುದೇ ನಮ್ಮೆಲ್ಲರ ಮುಂದಿನ ಅಜೆಂಡಾ ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.

Vijaya Karnataka Web 5 Apr 2019, 3:54 pm
ಬೆಂಗಳೂರು: ಸಂವಿಧಾನವನ್ನೇ ಬದಲಿಸಬೇಕು ಎಂದು ಹೊರಟವರನ್ನು ಈ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿದ್ದೇ ಆದರೆ ನಮ್ಮ ದೇಶ ಅರಾಜಕತೆಯತ್ತ ಸಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
Vijaya Karnataka Web Dr G Parameswhara


ಇಂದಿರಾ ನಗರದ ಈಸ್ಟ್ ಕಲ್ಚರ್ ಅಸೋಸಿಯೇಷನ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ರಕ್ಷಣೆಯಲ್ಲಿ ಯುವಜನರ ಪಾತ್ರ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೆಲವರ ದೃಷ್ಟಿಯಲ್ಲಿ ಸಂವಿಧಾನ ಭಿನ್ನವಾಗಿ ಕಾಣುತ್ತಿದೆ. ಅದನ್ನು ಬದಲಿಸಬೇಕು ಎನ್ನುವ ಯೋಚನೆ ಹೊಂದಿದ್ದಾರೆ. ಸಂವಿಧಾನದ ಅಡಿಪಾಯವನ್ನು ಅಲುಗಾಡಿಸುವ ಪ್ರಯತ್ನ ನಡೆದರೆ ಇಡೀ ಸಮಾಜವೇ ಅಲುಗಾಡುತ್ತದೆ. ದೊಡ್ಡ ಆಂದೋಲನವೇ ನಡೆಯಲಿದೆ. ನಮ್ಮ ಸಂವಿಧಾನ ಹಾಗೂ ಮೀಸಲಾತಿ ವ್ಯವಸ್ಥೆ ಇಂದಿಗೂ ಪ್ರಸ್ತುತ. ಸಂವಿಧಾನದ ರಕ್ಷಣೆಗೆ ನಿಲ್ಲುವುದೇ ನಮ್ಮೆಲ್ಲರ ಮುಂದಿನ ಅಜೆಂಡಾ ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಶ್ರಮಿಕ ವರ್ಗ ಸೇರಿದಂತೆ ಎಲ್ಲ ವರ್ಗದ ಸಂವಿಧಾನ ರಕ್ಷಿಸುವ ಅಭ್ಯರ್ಥಿಗಳ ಪರ ನಿಲ್ಲದೇ ಹೋದರೆ ಮುಂದೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ