ಆ್ಯಪ್ನಗರ

ಮೊಬೈಲ್‌ ಸ್ಫೋಟ: ಬಿಜೆಪಿ ಮುಖಂಡ ಸಾವು

ಮೊಬೈಲ್‌ ಬ್ಯಾಟರಿ ಸ್ಫೋಟಗೊಂಡು ಹಾಸಿಗೆಗೆ ಬೆಂಕಿ ಹತ್ತಿದ್ದರಿಂದ ಬಿಜೆಪಿ ಮುಖಂಡ ಟಿಎಸ್‌...

Vijaya Karnataka 17 Jun 2019, 5:00 am
ಬಂಗಾರಪೇಟೆ: ಮೊಬೈಲ್‌ ಬ್ಯಾಟರಿ ಸ್ಫೋಟಗೊಂಡು ಹಾಸಿಗೆಗೆ ಬೆಂಕಿ ಹತ್ತಿದ್ದರಿಂದ ಬಿಜೆಪಿ ಮುಖಂಡ ಟಿ.ಎಸ್‌. ನಾಗಪ್ರಕಾಶ್‌(58) ಸ್ಥಳದಲ್ಲಿಯೇ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ತಂದೆ, ಪತ್ನಿ, ಮಗ ಹಾಗೂ ಸೊಸೆ ತೀವ್ರ ಅಸ್ವಸ್ಥಗೊಂಡು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ.
Vijaya Karnataka Web KLR-16BPET1


ನಿವಾಸದ ಮಲಗುವ ಕೋಣೆಯಲ್ಲಿ ಮೊಬೈಲ್‌ ಚಾರ್ಜ್‌ ಹಾಕಿ ಮಲಗಿದ್ದ ನಾಗಪ್ರಕಾಶ್‌ ಶನಿವಾರ ತಡರಾತ್ರಿ ಮೊಬೈಲ್‌ಗೆ ಬಂದ ಮೆಸೇಜ್‌ ನೋಡಲು ಪಿನ್‌ ತೆಗೆಯದೇ ಮೊಬೈಲ್‌ ತೆರೆದಾಗ ಸ್ಫೋಟಗೊಂಡು ಬೆಂಕಿ ಹಾಸಿಗೆಗೆ ವ್ಯಾಪಿಸಿದೆ. ಇದರಿಂದ ಹೊಗೆ ಎದ್ದಿದೆ. ಜತೆಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮೆಣಿಸಿನಕಾಯಿ ಚೀಲಗಳಿಗೂ ವ್ಯಾಪಿಸಿ ಅದರ ಘಾಟಿನಿಂದ ಹೊರಬರಲಾಗದೇ ನಾಗಪ್ರಕಾಶ್‌ ಶೇ.60ರಷ್ಟು ಸುಟ್ಟುಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪತ್ನಿ ಶೋಭಾ ತೀವ್ರ ಅಸ್ವಸ್ಥಗೊಂಡು ಕಿರುಚಾಡಿದ್ದಾರೆ. ಮನೆಯಲ್ಲಿಯೇ ಮಲಗಿದ್ದ ತಂದೆ ಸತ್ಯನಾರಾಯಣ, ಮಗ ಸ್ವರೂಪ್‌ ಹಾಗೂ ಸೊಸೆ, ನಾಗಪ್ರಕಾಶ್‌ ಹಾಗೂ ಅವರ ಪತ್ನಿಯನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ 1985ರ ಸುಮರಿಗೆ ಬಿಜೆಪಿ ಪಕ್ಷ ವನ್ನು ಕಟ್ಟಿ ಬೆಳೆಸಿದವರಲ್ಲಿ ಟಿ.ಎಸ್‌.ನಾಗಪ್ರಕಾಶ್‌ ಮೊದಲಿಗರು. ಹಲವಾರು ಹುದ್ದೆಗಳಲ್ಲಿ ಸಮರ್ಥ ಕೆಲಸ ಮಾಡಿದ್ದಾರೆ. ಪುರಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋಲುಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ