ಆ್ಯಪ್ನಗರ

ಆಡಿಯೋ ಲೀಕ್ ಎಫೆಕ್ಟ್: ಸಿಎಂ ನಿವಾಸ, ಕಚೇರಿಯಲ್ಲಿ ಮೊಬೈಲ್‌ ಬ್ಯಾನ್!

ಹುಬ್ಬಳ್ಳಿ ಬಿಜೆಪಿ ಕೋರ್ ಕಮಿಟಿ ಸಭೆಯ ಆಡಿಯೋ ಲೀಕ್ ಆದ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ವೈ ಎಚ್ಚೆತ್ತುಕೊಂಡಿದ್ದು ಸಿಎಂ ನಿವಾಸ, ಕಚೇರಿಯಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ಹೇರಲಾಗಿದೆ.

Vijaya Karnataka Web 6 Nov 2019, 9:59 pm
ಬೆಂಗಳೂರು: ಹುಬ್ಬಳ್ಳಿ ಬಿಜೆಪಿ ಕೋರ್ ಕಮಿಟಿ ಸಭೆಯ ಆಡಿಯೋ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಕಾರ್ಯಾಲಯ ಹಾಗೂ ನಿವಾಸಕ್ಕೆ ಭೇಟಿ ನೀಡುವವರ ಮೊಬೈಲ್‌ ಬಳಕೆ ನಿಷೇಧಕ್ಕೆ ಮೌಖಿಕ ಸೂಚನೆ ನೀಡಲಾಗಿದೆ.
Vijaya Karnataka Web chief minister bs yeddyurappa planing to ban mobile use around in office and home
ಆಡಿಯೋ ಲೀಕ್ ಎಫೆಕ್ಟ್: ಸಿಎಂ ನಿವಾಸ, ಕಚೇರಿಯಲ್ಲಿ ಮೊಬೈಲ್‌ ಬ್ಯಾನ್!


ಡಿಕೆಶಿಯನ್ನು ಭೇಟಿಯಾದ ಬಿಜೆಪಿ ಮುಖಂಡ ಎಸ್ಎಂ ಕೃಷ್ಣ;ಕುತೂಹಲ ಕೆರಳಿಸಿದ ಮಾತುಕತೆ

ಅನರ್ಹ ಶಾಸಕರ ಪರ ವಹಿಸಿ ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ್ದರ ಆಡಿಯೋಬಹಿರಂಗಗೊಂಡು ವಿವಾದ ಎದ್ದಿದೆ. ಹಾಗಾಗಿ ಸಿಎಂ ಅವರ ಖಾಸಗಿ ನಿವಾಸ ಧವಳಗಿರಿಯ ಒಳಗೆ ಮೊಬೈಲ್‌ ಕೊಂಡೊಯ್ಯಲು ಬಿಡುತ್ತಿಲ್ಲ. ಸಿಎಂ ನಿವಾಸಕ್ಕೆ ಭೇಟಿ ನೀಡುವವರ ಮೊಬೈಲ್‌ ಅನ್ನು ಬಾಗಿಲ ಬಳಿಯೇ ಇಟ್ಟು ಹೋಗುವಂತೆ ಆಪ್ತ ಸಿಬ್ಬಂದಿ ಸೂಚಿಸುತ್ತಿದ್ದಾರೆಂಬ ಮಾಹಿತಿಯಿದೆ. ಗೃಹ ಕಚೇರಿ ಕೃಷ್ಣಾದಲ್ಲೂಈ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.

ಯಡಿಯೂರಪ್ಪ ಕೆಳಗಿಳಿಸಲು ಬಿಜೆಪಿಯಲ್ಲೇ ಕುತಂತ್ರ: ಸಿದ್ದರಾಮಯ್ಯ

ವಿಧಾನಸೌಧದಲ್ಲಿ ಮೊಬೈಲ್‌ ಬಳಕೆಯನ್ನು ಸಂಪೂರ್ಣ ನಿರ್ಬಂಧಿಸುವುದು ಕಷ್ಟಸಾಧ್ಯ. ಹಾಗಾಗಿ ಸಮ್ಮೇಳನ ಸಭಾಂಗಣ, ಸಮಿತಿ ಕೊಠಡಿ, ಸಿಎಂ ಕಚೇರಿ ಸೇರಿದಂತೆ ಪ್ರಮುಖ ಕಡೆ ಜಾಮರ್‌ ಅಳವಡಿಸಲು ಯೋಚಿಸಲಾಗಿದೆ. ವಿಧಾನಸೌಧದಲ್ಲಿಈಗಾಗಲೇ ಜಾಮರ್‌ ಇದ್ದು ಅದನ್ನು ಮತ್ತಷ್ಟು ಪರಿಣಾಮಕಾರಿ ಮಾಡಲಾಗುತ್ತದೆ. ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಭೆ ನಡೆಯುವಾಗ ಅಧಿಕಾರಿಗಳು ಮೊಬೈಲ್‌ ಸ್ವಿಚ್ ಆಫ್‌ ಮಾಡುವಂತೆ ಲಿಖಿತ ಸೂಚನೆ ನೀಡಿದ್ದರು. ಇದೇ ಮಾದರಿಯನ್ನು ಈ ಸರಕಾರವೂ ಅನುಸರಿಸುವ ನಿರೀಕ್ಷೆಯಿದೆ. ಈ ಮಧ್ಯೆ ಸಿಎಂ ನಿವಾಸ, ಗೃಹ ಕಚೇರಿಗೆ ಬಂದು ಹೋಗುವವರು ಅನಗತ್ಯ ವಿಡಿಯೋ ಮಾಡುವುದನ್ನು ನಿರ್ಬಂಧಿಸಬೇಕು ಎಂಬ ಸಲಹೆಯೂ ಇದೆ.

ಮೊಬೈಲ್ ನಿರ್ಬಂಧಕ್ಕೆ ಕಾಂಗ್ರೆಸ್ ಜೆಡಿಎಸ್ ಚಿಂತನೆ !

ಸಿಎಂ ಬಿಎಸ್‌ವೈ ಆಡಿಯೋ ಲೀಕ್ ಎಫೆಕ್ಟ್ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೂ ತಟ್ಟಿದೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಕುರಿತಾದ ಮಾತುಕತೆಯ ವಿಡಿಯೋ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ವಲಯದಲ್ಲೂ ಮೊಬೈಲ್ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ.

ಕಾಂಗ್ರೆಸ್‌ ವಲಯದಲ್ಲೂಈ ಬಗ್ಗೆ ಚರ್ಚೆಯಾಗಿದ್ದು ಪ್ರಮುಖ ಸಭೆ ನಡೆಯುವಾಗ ಮೊಬೈಲ್‌ ಚಿತ್ರೀಕರಣಕ್ಕೆ ನಿರ್ಬಂಧ ಹೇರಬೇಕೆಂಬ ಒತ್ತಾಯ ಕೇಳಿ ಬಂದಿದೆ. ಮುನ್ನಚ್ಚರಿಕೆ ದೃಷ್ಟಿಯಿಂದ ಜೆಡಿಎಸ್‌ನಲ್ಲೂಇಂಥ ನಿಯಂತ್ರಣ ಅಗತ್ಯವೆಂಬ ಆಗ್ರಹವಿದೆ. ಹಾಗಾಗಿ ಆಡಳಿತದ ಶಕ್ತಿ ಕೇಂದ್ರ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಆಂತರಿಕ ಸಭೆಗಳಲ್ಲಿಮೊಬೈಲ್‌ ನಿಷೇಧ ಕ್ರಮ ಜಾರಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ