ಆ್ಯಪ್ನಗರ

ತುಕ್ಕು ಹಿಡಿದ ಆಡಳಿತಕ್ಕೆ ಸುಧಾರಣೆ ತಂದ ವ್ಯಕ್ತಿ, ನರೇಂದ್ರ ಮೋದಿಯ ಗುಣಗಾನ ಮಾಡಿದ ಬಿಎಸ್‌ವೈ

ಪ್ರಧಾನಿ ನರೇಂದ್ರ ಮೋದಿ ದ್ವಿತೀಯ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇದರ ವಿವರ ಇಲ್ಲಿದೆ.

Vijaya Karnataka Web 1 Jun 2020, 2:34 pm
ಬೆಂಗಳೂರು: ದೇಶದದಲ್ಲಿ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತಂದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಗುಣಗಾನ ಮಾಡಿದ್ದಾರೆ.
Vijaya Karnataka Web bs yeddyurappa


ನರೇಂದ್ರ ಮೋದಿ ದ್ವಿತೀಯ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಎಸ್‌ ಯಡಿಯೂರಪ್ಪ ಕೇಂದ್ರ ಸರ್ಕಾರದ ಸಾಧನೆಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಂತ್ರಜ್ಞಾನ ಅಳವಡಿಕೆ, ಪಾರದರ್ಶಕತೆಯೊಂದಿಗೆ ಆಡಳಿತ ನಡೆಸಿದ ಮೋದಿ ಈ ಅವಧಿಯನ್ನು ಪೂರ್ಣ ಮುಗಿಸಿ ಮತ್ತೊಂದು ಅವಧಿಗೆ ಪ್ರಧಾನಿ ಆಗಬೇಕು. ಆಗ ಮಾತ್ರ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂಬುವುದು 70 ಶೇಕಡ ಜನರ ಭಾವನೆಯಾಗಿದೆ ಎಂದರು.

ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಬಿ.ಸಿ.ಪಾಟೀಲ್ ಸೂಚನೆ

ನುಡಿದಂತೆ ನಡೆದ ಪ್ರಧಾನಿ, ದೇಶದ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿರುವುದು ಅವರ ಹೆಗ್ಗಳಿಕೆಯಾಗಿದೆ. ಜನಧನ ಯೋಜನೆ, ಜನರಿಕ್ ಔಷಧಿ, ಆಯುಷ್ಮಾನ್ ಭಾರತ್, ಮುದ್ರಾ ಯೋಜನೆ, ಸ್ಟಾರ್ಟಪ್ ಇಂಡಿಯಾ ಸೇರಿದಂತೆ ದೇಶದ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ರಾಜ್ಯದಲ್ಲಿ ಸೋಲಿಲ್ಲದ ಸರಾಧಾರ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌ ಮುನಿಯಪ್ಪ, ಎಚ್‌ಡಿ ದೇವೇಗೌಡ ಅವರು ಮೋದಿಯ ಅಲೆಯಲ್ಲಿ ಸೋತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ರಲ್ಲಿ 25 ಗೆಲುವು ಕಾಣಲು ಮೋದಿ ಸಾಧನೆಯೇ ಕಾರಣ ಎಂದರು.

ಪ್ರಧಾನಿ ನರೇಂದ್ರ ಮೋದಿ ಪ್ರಪಂಚದ ನಾಯಕರಲ್ಲಿ ಅಗ್ರಗಣ್ಯ ನಾಯಕರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು ಪಡೆಯುವುದರಲ್ಲಿ ಅವರು ನಡೆಸಿದ ಕಾನೂನು ಸಮರ, ಸಹನೆ ಹಾಗೂ ತಂತ್ರಗಾರಿಕೆಯನ್ನು ದೇಶದ ಜನತೆ ಪ್ರಶಂಸೆ ಮಾಡುತ್ತಿದ್ದಾರೆ.

ಮೂರು ಸೇನೆಗೆ ಓರ್ವ ದಂಢನಾಯಕ ನೇಮಕ, ತ್ರಿವಳಿ ತಲಾಕ್ ರದ್ದತಿ, ಭಯೋತ್ಪಾದನೆ ನಿಗ್ರಹ, ಬ್ಯಾಂಕುಗಳಸುಧಾಕರಣೆ, ಮಕ್ಕಳ ದೌರ್ಜನ್ಯದ ವಿರುದ್ಧ ಕಠಿಣ ಕಾಯಿದೆ, 371 ವಿಧಿ ರದ್ದು ಕೇಂದ್ರ ಸರ್ಕಾರದ ಮಹತ್ವದ ಸಾಧನೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ