ಬೆಂಗಳೂರು: ಲಾಕ್ಡೌನ್ ಪರಿಣಾಮವಾಗಿ ಇಂಗ್ಲೆಂಡ್ನಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದರು.
ಲಾಕ್ಡೌನ್ ಘೋಷಣೆಯಾದ ಬಳಿಕ ಅಂತಾರಾಷ್ಟ್ರೀಯ ವಿಮಾನ ಹಾರಾಟವೂ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಕನ್ನಡಿಗರು ಲಂಡನ್ ನಗರದಲ್ಲಿ ಸಿಲುಕಿದ್ದಾರೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.
ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ಲಂಡನ್ನಲ್ಲಿರುವ ಕನ್ನಡಿಗರಿಗೆ ಮನವಿ ಮಾಡಿರುವ ಬಿಎಸ್ವೈ, ಶೀಘ್ರದಲ್ಲೇ ಎಲ್ಲರನ್ನೂ ಮರಳಿ ತಾಯ್ನಾಡಿಗೆ ಕರೆತರುವ ಭರವಸೆ ನೀಡಿದರು.
ಕರ್ನಾಟಕಕ್ಕೆ ಕೊರೊನಾದಿಂದ ಬಿಗ್ ರಿಲೀಫ್..! ಭಾನುವಾರ ಕೇವಲ 3 ಪಾಸಿಟಿವ್, 24 ಜನ ಡಿಸ್ಚಾರ್ಜ್
ಇಷ್ಟೇ ಅಲ್ಲದೇ ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಲಂಡನ್ನಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಸುರಕ್ಷಿತವಾಗಿರುವಂತೆ ಈ ವೇಳೆ ಬಿಎಸ್ವೈ ಮನವಿ ಮಾಡಿದರು.
ಅಲ್ಲದೇ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ತಾವು ಸಂಪರ್ಕದಲ್ಲಿದ್ದು, ಕನ್ನಡಿಗರೂ ಸೇರಿದಂತೆ ಸಮಸ್ತ ಭಾರತೀಯರ ರಕ್ಷಣೆಯನ್ನು ರಾಯಭಾರ ಕಚೇರಿ ಹೊತ್ತಿದೆ ಎಂದು ಬಿಎಸ್ವೈ ನುಡಿದರು.
ಸರ್ಕಾರ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದಾಗಿ ಸಿಎಂ ಯಡಿಯೂರಪ್ಪ ಈ ವೇಳೆ ನುಡಿದರು.
ಆನ್ಲೈನ್ ಮೂಲಕ ದೇಣಿಗೆ ನೀಡಿ: ದಾನಿಗಳಿಗೆ ಸಿಎಂ ಯಡಿಯೂರಪ್ಪ ಮನವಿ
ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಸಿಎಂ ವಿದೇಶದಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಿದ್ದು, ಸುರಕ್ಷಿತವಾಗಿ ಮರಳಿ ರಾಜ್ಯಕ್ಕೆ ಕರೆತರುವ ಭರವಸೆ ನೀಡಿದ್ದಾರೆ.
ಲಾಕ್ಡೌನ್ ಘೋಷಣೆಯಾದ ಬಳಿಕ ಅಂತಾರಾಷ್ಟ್ರೀಯ ವಿಮಾನ ಹಾರಾಟವೂ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಕನ್ನಡಿಗರು ಲಂಡನ್ ನಗರದಲ್ಲಿ ಸಿಲುಕಿದ್ದಾರೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.
ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಂತೆ ಲಂಡನ್ನಲ್ಲಿರುವ ಕನ್ನಡಿಗರಿಗೆ ಮನವಿ ಮಾಡಿರುವ ಬಿಎಸ್ವೈ, ಶೀಘ್ರದಲ್ಲೇ ಎಲ್ಲರನ್ನೂ ಮರಳಿ ತಾಯ್ನಾಡಿಗೆ ಕರೆತರುವ ಭರವಸೆ ನೀಡಿದರು.
ಕರ್ನಾಟಕಕ್ಕೆ ಕೊರೊನಾದಿಂದ ಬಿಗ್ ರಿಲೀಫ್..! ಭಾನುವಾರ ಕೇವಲ 3 ಪಾಸಿಟಿವ್, 24 ಜನ ಡಿಸ್ಚಾರ್ಜ್
ಇಷ್ಟೇ ಅಲ್ಲದೇ ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಲಂಡನ್ನಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಸುರಕ್ಷಿತವಾಗಿರುವಂತೆ ಈ ವೇಳೆ ಬಿಎಸ್ವೈ ಮನವಿ ಮಾಡಿದರು.
ಅಲ್ಲದೇ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ತಾವು ಸಂಪರ್ಕದಲ್ಲಿದ್ದು, ಕನ್ನಡಿಗರೂ ಸೇರಿದಂತೆ ಸಮಸ್ತ ಭಾರತೀಯರ ರಕ್ಷಣೆಯನ್ನು ರಾಯಭಾರ ಕಚೇರಿ ಹೊತ್ತಿದೆ ಎಂದು ಬಿಎಸ್ವೈ ನುಡಿದರು.
ಸರ್ಕಾರ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದಾಗಿ ಸಿಎಂ ಯಡಿಯೂರಪ್ಪ ಈ ವೇಳೆ ನುಡಿದರು.
ಆನ್ಲೈನ್ ಮೂಲಕ ದೇಣಿಗೆ ನೀಡಿ: ದಾನಿಗಳಿಗೆ ಸಿಎಂ ಯಡಿಯೂರಪ್ಪ ಮನವಿ
ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಸಿಎಂ ವಿದೇಶದಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಿದ್ದು, ಸುರಕ್ಷಿತವಾಗಿ ಮರಳಿ ರಾಜ್ಯಕ್ಕೆ ಕರೆತರುವ ಭರವಸೆ ನೀಡಿದ್ದಾರೆ.