ಆ್ಯಪ್ನಗರ

ಜೆಜೆಎಮ್ ಮೆಡಿಕಲ್ ಕಾಲೇಜು ಪಿಜಿ ವಿಧ್ಯಾರ್ಥಿಗಳ‌ ಶಿಷ್ಯ ವೇತನ ನೀಡಲು ಕ್ರಮ, ಸುಧಾಕರ್‌ಗೆ ಬಿಎಸ್‌ವೈ ಸೂಚನೆ

ಜೆಜೆಎಮ್ ಮೆಡಿಕಲ್ ಕಾಲೇಜು ಪಿಜಿ ವಿಧ್ಯಾರ್ಥಿಗಳ ಶಿಷ್ಯ ವೇತನ ಪಾವತಿ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಸೂಚನೆ ನೀಡಿದ್ದಾರೆ.

Vijaya Karnataka Web 12 Jul 2020, 7:09 pm
ಬೆಂಗಳೂರು: ದಾವಣಗೆರೆ ಜೆಜೆಎಮ್ ಮೆಡಿಕಲ್ ಕಾಲೇಜು ಗಳ ಪಿಜಿ ವಿಧ್ಯಾರ್ಥಿಗಳ‌ ಶಿಷ್ಯ ವೇತನದ ಬಗ್ಗೆ ಕೂಡಲೇ ಕ್ರಮ‌ಕೈಗೊಳ್ಳಬೇಕೆಂದು ಸಿಎಂ ಬಿ.ಎಸ್‌ ಯಡಿಯೂರಪ್ಪ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಅವರಿಗೆ ಸೂಚನೆ‌ ನೀಡಿದರು.

ಬೆಂಗಳೂರಿನ ಸಿಎಂ ಕಾವೇರಿ ನಿವಾಸದಲ್ಲಿ ಭಾನುವಾರ ನಡೆಸ ಸಭೆಯಲ್ಲಿ ಸಿಎಂ ಬಿಎಸ್‌ವೈ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಅವರಿಗೆ ಸೂಚನೆ ನೀಡಿದರು.

ಕೊರೊನಾರ್ಭಟದ ಬೆನ್ನಲ್ಲೇ ಲಾಕ್‌ಡೌನ್‌: ಬೆಂಗಳೂರಿನಿಂದ ಗಂಟು-ಮೂಟೆ ಕಟ್ಟಿದ ಜನ

ಕಾಲೇಜು ಆಡಳಿತ ಮಂಡಳಿ ಜೊತೆ ಇನ್ನೊಮ್ಮೆ ಚರ್ಚೆ‌ ನಡೆಸಿ ಮನವೊಲಿಸಬೇಕು ಒಂದು ವೇಳೆ ಸರ್ಕಾರದ ಆದೇಶವನ್ನು ಪಾಲಿಸದೇ ಇದ್ದರೆ‌ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆಯುವಂತೆ ಸೂಚನೆ ನೀಡಿದ್ದಾರೆ.

ಕೊರೊನಾ ಲಾಕ್‌ಡೌನ್: ಸಚಿವರು, ಅಧಿಕಾರಿಗಳ ಜೊತೆಗೆ ಬಿಎಸ್‌ವೈ ಸಭೆ

ಈ ವೇಳೆ ಸರ್ಕಾರ ವಿಧ್ಯಾರ್ಥಿಗಳು ಪರವಾಗಿ ಇದ್ದು ಅವರಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮ‌ಕೈಗೊಳ್ಳಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಬೇಕು ಎಂದು ತಿಳಿಸಿದ್ದಾರೆ.

ಶಿಷ್ಯ ವೇತನ ಪಾವತಿ ಆಗಿಲ್ಲ ಎಂದು ಆರೋಪಿಸಿ ದಾವಣಗೆರೆ ಜೆಜೆಎಮ್ ಮೆಡಿಕಲ್ ಕಾಲೇಜು ಪಿಜಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಈ ಸೂಚನೆಯನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ