ಆ್ಯಪ್ನಗರ

ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್‌ ವಿರುದ್ಧ ಜೋಡೆತ್ತುಗಳ ಗುಟುರು

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್‌ ವಿರುದ್ಧ ಜೋಡೆತ್ತುಗಳು ರಂಗಪ್ರವೇಶ ಮಾಡಿವೆ ಮಾಜಿ ಸಿಎಂ ಮತ್ತು ಮಾಜಿ ಸಚಿವ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ನಾಪತ್ರ ಸಲ್ಲಿಸಿದ ದಿನವೇ ರೋಡ್‌ ಶೋ ನಡೆಸಿದ್ದಾರೆ.

Vijaya Karnataka Web 21 Nov 2019, 7:37 am
ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ವಿರುದ್ಧ ಜೋಡೆತ್ತುಗಳು ರಂಗಪ್ರವೇಶ ಮಾಡಿವೆ. ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನವೇ ರೋಡ್‌ ಶೋ ನಡೆಸುವ ಮೂಲಕ ರಣಕಹಳೆ ಊದಿದ್ದಾರೆ.
Vijaya Karnataka Web sudhakar


ಡಾ. ಕೆ. ಸುಧಾಕರ್‌ ಇಬ್ಬರಿಗೂ ಸಮಾನ ವೈರಿ ಅನಿಸಿದ್ದಾರೆ. ಸರಕಾರ ಉರುಳಿಸಿದ ಸಿಟ್ಟು ಕುಮಾರಸ್ವಾಮಿ ಅವರಿಗಿದ್ದರೆ, ರಾಮನಗರಕ್ಕೆ ಮಂಜೂರು ಮಾಡಿಸಿಕೊಂಡಿದ್ದ ಮೆಡಿಕಲ್‌ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗ ಮಾಡಿಸಿಕೊಂಡ ಆಕ್ರೋಶ ಡಿ.ಕೆ. ಶಿವಕುಮಾರ್‌ಗಿದೆ. ಹಾಗಾಗಿ, ಇಬ್ಬರೂ ಜತೆಯಾಗಿ ಹೋರಾಡುವಂತಿದೆ. ಇವರಿಬ್ಬರೂ ಸೇರಿ ಕ್ಷೇತ್ರದಲ್ಲಿಪ್ರಬಲವಾಗಿರುವ ಒಕ್ಕಲಿಗರ ಮತಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ V/S ಸುಧಾಕರ್; ಚಿಕ್ಕಬಳ್ಳಾಪುರ ಕಣದಲ್ಲಿ ವರ್ಕೌಟಾಗುತ್ತಾ ಟ್ರಬಲ್ ಶೂಟರ್ ತಂತ್ರ!

ಜೆಡಿಎಸ್‌ ನಡೆ ನಿಗೂಢ: ಇನ್ನೂ ಸೋಮವಾರ ಇಬ್ಬರು ಅಭ್ಯರ್ಥಿಗಳಿಂದ ಉಮೇದುವಾರಿಕೆ ಮಾಡಿಸಿದ್ದ ಜೆಡಿಎಸ್‌ ಅಭ್ಯರ್ಥಿಗಳ ಪೈಕಿ, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ನಾಮಪತ್ರ ತಿರಸ್ಕೃತಗೊಂಡಿದ್ದು, ರಾಧಾಕೃಷ್ಣ ಅವರು ಕಣದಲ್ಲಿಉಳಿದಿದ್ದಾರೆ. ಕೆ.ಪಿ.ಬಚ್ಚೇಗೌಡ ತಾನೂ ರಾಧಾಕೃಷ್ಣ ಅವರ ಪರ ಕಾರ‍್ಯನಿರ್ವಹಿಸುವುದಾಗಿ ಹೇಳಿದ್ದು, ಜೆಡಿಎಸ್‌ನ ಈ ದಿಢೀರ್‌ ನಡೆ ಹಲವು ಪ್ರಶ್ನೆ, ಅನುಮಾನಗಳನ್ನು ಹುಟ್ಟುಹಾಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ