ಬೆಂಗಳೂರು: ಚಂದನವನದ ತಾರಾ ಜೋಡಿಗಳಾದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಭಾನುವಾರ ರಿಂಗ್ ಬದಲಿಸಿಕೊಂಡು ಹಾರ ವಿನಿಮಯ ಮಾಡಿಕೊಳ್ಳುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕ್ರಿಶ್ಚಿಯನ್ ಸಂಪ್ರದಾಯದಂತೆ ಕೋರಮಂಗಲದ ಸೇಂಟ್ ಅಂಥೋಣಿ ಫ್ರೈರಿ ಚರ್ಚ್ನಲ್ಲಿ ಫಾದರ್ ಪ್ರವೀಣ್ಕುಮಾರ್ ಮದುವೆ ನೆರವೇರಿಸಿಕೊಟ್ಟರು. ಮೇ 2 ರಂದು ಚಿತ್ರರಂಗದ ಕಲಾವಿದರು- ತಂತ್ರಜ್ಞರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಲಿದೆ.
ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಶಾಯ್ ಅವರು ಕ್ರಿಶ್ಚಿಯನ್ ಸಂಪ್ರದಾಯದವರಾಗಿದ್ದು, ತಂದೆ ಸುಂದರ್ರಾಜ್ ಹಿಂದೂ ಸಂಪ್ರದಾಯದವರಾಗಿದ್ದಾರೆ.
ಭಾನುವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಮೇಘನಾ ರಾಜ್ ಅವರು ಬಿಳಿ ಗೌನ್ ಧರಿಸಿ ಚರ್ಚ್ಗೆ ಆಗಮಿಸಿದರೆ, ಚಿರು ಸರ್ಜಾ ಸೂಟ್ನಲ್ಲಿ ಬಂದರು. ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಬಳಗ ಹಾಜರಿತ್ತು. ಚಿರು-ಮೇಘನಾ ಇಬ್ಬರೂ ಫಾದರ್ ಸಮ್ಮುಖದಲ್ಲಿ ಬೈಬಲ್ ಮುಟ್ಟಿ ಮದುವೆಗೆ ಒಪ್ಪಿಗೆ ನೀಡಿರುವುದಾಗಿ ಪ್ರಮಾಣ ಮಾಡಿದರು. ನಂತರ ಶಿಲುಬೆ ಗುರುತು ಹಾಕಿ ಇಬ್ಬರೂ ಉಂಗುರ ಬದಲಿಸಿಕೊಂಡರು.
ಈ ಸಂಭ್ರಮಕ್ಕೆ ನಟಿ ತಾರಾ, ಅರ್ಜುನ್ ಸರ್ಜಾ, ಐಶ್ವರ್ಯ ಸರ್ಜಾ, ಪ್ರಜ್ವಲ್ ದೇವರಾಜ್, ದೃವ ಸರ್ಜಾ, ಆಶಾ ರಾಣಿ, ಪನ್ನಗಾಭರಣ ಸೇರಿದಂತೆ ಹಲವರು ಸಾಕ್ಷಿಯಾದರು. ಚಿಕ್ಕ- ಚೊಕ್ಕದಾದ ಸಮಾರಂಭದಲ್ಲಿ ಮದುವೆ ಸಂಭ್ರಮ ಮುಗಿದಿದ್ದು, ಮೇ 2 ರಂದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆ ದಿನ ಚಿತ್ರರಂಗದ ಗಣ್ಯರು ಉಪಸ್ಥಿತರಿರುವರು.
ಕ್ರಿಶ್ಚಿಯನ್ ಸಂಪ್ರದಾಯದಂತೆ ಕೋರಮಂಗಲದ ಸೇಂಟ್ ಅಂಥೋಣಿ ಫ್ರೈರಿ ಚರ್ಚ್ನಲ್ಲಿ ಫಾದರ್ ಪ್ರವೀಣ್ಕುಮಾರ್ ಮದುವೆ ನೆರವೇರಿಸಿಕೊಟ್ಟರು. ಮೇ 2 ರಂದು ಚಿತ್ರರಂಗದ ಕಲಾವಿದರು- ತಂತ್ರಜ್ಞರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಲಿದೆ.
ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಶಾಯ್ ಅವರು ಕ್ರಿಶ್ಚಿಯನ್ ಸಂಪ್ರದಾಯದವರಾಗಿದ್ದು, ತಂದೆ ಸುಂದರ್ರಾಜ್ ಹಿಂದೂ ಸಂಪ್ರದಾಯದವರಾಗಿದ್ದಾರೆ.
ಭಾನುವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಮೇಘನಾ ರಾಜ್ ಅವರು ಬಿಳಿ ಗೌನ್ ಧರಿಸಿ ಚರ್ಚ್ಗೆ ಆಗಮಿಸಿದರೆ, ಚಿರು ಸರ್ಜಾ ಸೂಟ್ನಲ್ಲಿ ಬಂದರು. ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಬಳಗ ಹಾಜರಿತ್ತು. ಚಿರು-ಮೇಘನಾ ಇಬ್ಬರೂ ಫಾದರ್ ಸಮ್ಮುಖದಲ್ಲಿ ಬೈಬಲ್ ಮುಟ್ಟಿ ಮದುವೆಗೆ ಒಪ್ಪಿಗೆ ನೀಡಿರುವುದಾಗಿ ಪ್ರಮಾಣ ಮಾಡಿದರು. ನಂತರ ಶಿಲುಬೆ ಗುರುತು ಹಾಕಿ ಇಬ್ಬರೂ ಉಂಗುರ ಬದಲಿಸಿಕೊಂಡರು.
ಈ ಸಂಭ್ರಮಕ್ಕೆ ನಟಿ ತಾರಾ, ಅರ್ಜುನ್ ಸರ್ಜಾ, ಐಶ್ವರ್ಯ ಸರ್ಜಾ, ಪ್ರಜ್ವಲ್ ದೇವರಾಜ್, ದೃವ ಸರ್ಜಾ, ಆಶಾ ರಾಣಿ, ಪನ್ನಗಾಭರಣ ಸೇರಿದಂತೆ ಹಲವರು ಸಾಕ್ಷಿಯಾದರು. ಚಿಕ್ಕ- ಚೊಕ್ಕದಾದ ಸಮಾರಂಭದಲ್ಲಿ ಮದುವೆ ಸಂಭ್ರಮ ಮುಗಿದಿದ್ದು, ಮೇ 2 ರಂದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆ ದಿನ ಚಿತ್ರರಂಗದ ಗಣ್ಯರು ಉಪಸ್ಥಿತರಿರುವರು.