ಆ್ಯಪ್ನಗರ

ಮೋಡ ಬಿತ್ತನೆ ಕಾರ್ಯಾಚರಣೆ ಸ್ಥಳ ಮೈಸೂರಿಗೆ ಶಿಫ್ಟ್‌

ಮೋಡ ಬಿತ್ತನೆ ಕಾರ್ಯಾಚರಣೆ ಸ್ಥಳ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್‌ ಆಗಿದೆ...

Vijaya Karnataka 29 Jun 2019, 5:00 am
ಬೆಂಗಳೂರು : ಮೋಡ ಬಿತ್ತನೆ ಕಾರ್ಯಾಚರಣೆ ಸ್ಥಳ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್‌ ಆಗಿದೆ.
Vijaya Karnataka Web clod seeding


ಈ ಮೊದಲು ಬೆಂಗಳೂರು ಹಾಗೂ ಹುಬ್ಬಳ್ಳಿ ಕೇಂದ್ರವಾಗಿಸಿಕೊಂಡು ಮೋಡ ಬಿತ್ತನೆ ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ಇದೀಗ ಬೆಂಗಳೂರು ಬದಲು ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿ ಕೇಂದ್ರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್‌ ನಿಲ್ದಾಣ ಹಾಗೂ ವಾಯುಪಡೆಗೆ ಸಂಬಂಧಿಸಿದ ಯಲಹಂಕ ವಾಯುನೆಲೆಯಿದೆ. ಮೋಡ ಬಿತ್ತನೆ ಕಾರ್ಯಾಚರಣೆ ಪ್ರಾರಂಭಿಸುವಾಗ ಈ ಎಲ್ಲ ಸಂಸ್ಥೆಗಳಿಂದ ಸಿಗ್ನಲ್‌ ಪಡೆದುಕೊಳ್ಳಬೇಕು. ಸ್ವಲ್ಪ ವಿಳಂಬವಾದರೂ ಬಿತ್ತನೆ ಕೈಗೂಡುವುದಿಲ್ಲ. ಈ ವಿಚಾರವಾಗಿ ದಿಲ್ಲಿಯಲ್ಲಿನ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿದ ಬಳಿಕ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಜುಲೈ 2ನೇ ವಾರದ ಹೊತ್ತಿಗೆ ಮೋಡ ಬಿತ್ತನೆ ಮಾಡಲು ಸಿದ್ಧತೆಯಾಗುತ್ತಿದೆ. ಕೇಂದ್ರ ಸರಕಾರದ ಅನುಮತಿಯನ್ನೂ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ