ಆ್ಯಪ್ನಗರ

ಕಾಂಗ್ರೆಸ್‌ ಅಲ್ಲ ಬಿಜೆಪಿಯಿಂದ ಗೂಂಡಾಗಿರಿ: ಸಿದ್ದರಾಮಯ್ಯ

ಸುಧಾಕರ್‌ಗೂ ಬಿಜೆಪಿಗೂ ಯಾವ ಸಂಬಂಧವಿದೆ. ಇಡಿ, ಸಿಬಿಐ ಹೆಸರು ಹೇಳಿ ಬಿಜೆಪಿ ನಾಯಕರು ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹಣ, ಅಧಿಕಾರದ ಆಮಿಷವೊಡ್ಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Vijaya Karnataka Web 10 Jul 2019, 7:33 pm
ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್‌ ನಾಯಕರ ಗೂಂಡಾಗಿರಿ ರಾಜಕಾರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅದರ ಪ್ರತಿಯಾಗಿ ಬಿಜೆಪಿಯವರೇ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Vijaya Karnataka Web Siddaramaiah


ಸುಧಾಕರ್‌ ಕಾಂಗ್ರೆಸ್‌ ಶಾಸಕ. ಅವರಿಗೂ ಬಿಜೆಪಿಗೂ ಯಾವ ಸಂಬಂಧವಿದೆ. ಇಡಿ, ಸಿಬಿಐ ಹೆಸರು ಹೇಳಿ ಬಿಜೆಪಿ ನಾಯಕರು ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹಣ, ಅಧಿಕಾರದ ಆಮಿಷವೊಡ್ಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಲ್ಲದೆ, ನಮ್ಮ ಪಕ್ಷದ ಶಾಸಕ ಸುಧಾಕರ್‌ರನ್ನು ಮನವೊಲಿಕೆ ಮಾಡುವುದು ತಪ್ಪಾ? ನಮ್ಮ ಪಕ್ಷದ ಶಾಸಕರ ರಕ್ಷಣೆ ನಮ್ಮ ಜವಾಬ್ದಾರಿ. ಸುಧಾಕರ್ ಪತ್ನಿ ಜತೆ ನಾನೇ ಚರ್ಚೆ ಮಾಡಿದ್ದೇನೆ. ಸುಧಾಕರ್ ಕಾಂಗ್ರೆಸ್‌ನಲ್ಲೇ ಮುಂದುವರಿಯುತ್ತಾರೆ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ