ಆ್ಯಪ್ನಗರ

ದಿಲ್ಲಿಯಲ್ಲಿ ಪಟ್ಟು ಹಿಡಿದು ಸಚಿವರ ಪಟ್ಟಿ ಫೈನಲ್ ಮಾಡಿಸಿದ ಸಿಎಂ ಬೊಮ್ಮಾಯಿ

ನಿಗದಿತ ವೇಳಾಪಟ್ಟಿಯಂತೆ ಸೋಮವಾರ ಮಧ್ಯಾಹ್ನವೇ ಅವರು ಬೆಂಗಳೂರಿಗೆ ವಾಪಸಾಗಬೇಕಿತ್ತು. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ವಿಳಂಬವಾದದ್ದರಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ ಬೊಮ್ಮಾಯಿ ಮತ್ತು ನಡ್ಡಾ ಮಾತುಕತೆ ನಡೆಸಿದ್ದರು. ಈ ನಡುವೆಯೂ ಸಚಿವರ ಅಂತಿಮ ಪಟ್ಟಿ ಬಸವರಾಜ ಬೊಮ್ಮಾಯಿ ಕೈಗೆ ಸೇರಿರಲಿಲ್ಲ. ಹೀಗಾಗಿ ದಿಲ್ಲಿಯಿಂದ ಕದಲದೆ ವಿಳಂಬವಾದರೂ ಪಟ್ಟು ಹಿಡಿದು ಪಟ್ಟಿಯನ್ನು ಫೈನಲ್ ಮಾಡಿಸಿಕೊಂಡು ಬಂದಿದ್ದಾರೆ.

Vijaya Karnataka 4 Aug 2021, 7:04 am
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ದಿಲ್ಲಿಯಲ್ಲೇ ಬೀಡು ಬಿಡುವ ಮೂಲಕ ಸಂಪುಟ ವಿಸ್ತರಣೆ ಪಟ್ಟಿ ಫೈನಲ್‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web basavaraj bommai


ಬೊಮ್ಮಾಯಿ ಭಾನುವಾರ ಸಂಜೆಯೇ ದಿಲ್ಲಿಗೆ ತೆರಳಿದ್ದರು. ನಿಗದಿತ ವೇಳಾಪಟ್ಟಿಯಂತೆ ಸೋಮವಾರ ಮಧ್ಯಾಹ್ನವೇ ಅವರು ಬೆಂಗಳೂರಿಗೆ ವಾಪಸಾಗಬೇಕಿತ್ತು. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ವಿಳಂಬವಾದದ್ದರಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ ಬೊಮ್ಮಾಯಿ ಮತ್ತು ನಡ್ಡಾ ಮಾತುಕತೆ ನಡೆಸಿದ್ದರು. ಈ ನಡುವೆಯೂ ಪ್ರಮಾಣವಚನ ಸ್ವೀಕರಿಸುವ ನೂತನ ಸಚಿವರ ಪಟ್ಟಿ ಬೊಮ್ಮಾಯಿ ಕೈಸೇರಲಿಲ್ಲ. ಇದರಲ್ಲಿಏನೋ ಸಮಸ್ಯೆಯಿದೆ ಎಂಬುದನ್ನು ಅರಿತ ಬೊಮ್ಮಾಯಿ ಪುನಃ ನಡ್ಡಾ ಅವರನ್ನು ಸಂಪರ್ಕಿಸಿದ್ದಾರೆ. ಹಾಗಾಗಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನತ್ತ ಹೊರಡಬೇಕಿದ್ದ ಅವರು ದಿಲ್ಲಿಯಿಂದ ಕದಲಲಿಲ್ಲ.

ನಡ್ಡಾ ಅವರನ್ನು ಸಂಪರ್ಕ ಮಾಡಲು ಸಾಕಷ್ಟು ಪ್ರಯತ್ನ ಪಟ್ಟರಾದರೂ ಸಂಸತ್‌ ಕಲಾಪದಲ್ಲಿ ಭಾಗಿಯಾಗಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗಾಗಲೇ ಈ ಪಟ್ಟಿಗೆ ಅಂತಿಮ ಸ್ವರೂಪ ನೀಡಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಧ್ಯಸ್ಥಿತಿಕೆ ಅನಿವಾರ್ಯ ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ ಅಮಿತ್‌ ಶಾ ಭೇಟಿಗೂ ಬೊಮ್ಮಾಯಿ ಕಾಯ್ದರು. ಅಮಿತ್‌ ಶಾ ಮತ್ತು ನಡ್ಡಾ ಭೇಟಿ ಮಾಡುವುದು ವಿಳಂಬವಾದರೂ ಫಲಿತಾಂಶ ಪಡೆದುಕೊಳ್ಳುವುದು ಬೊಮ್ಮಾಯಿ ಅವರಿಗೆ ಸಾಧ್ಯವಾಯಿತು. ಹಾಗಾಗಿ ದಿನವಿಡೀ ಕಾಯ್ದದ್ದು ಉಪಯೋಗಕ್ಕೆ ಬರುವಂತಾಯಿತು. ಒಂದು ವೇಳೆ ಸಿಎಂ ವಾಪಸ್‌ ಬಂದು ಬಿಟ್ಟಿದ್ದರೆ ಸಂಪುಟ ವಿಸ್ತರಣೆ ಪಟ್ಟಿ ಫೈನಲ್‌ ಆಗಲು ಇನ್ನಷ್ಟು ಸಮಯ ಹಿಡಿಯುವ ಸಾಧ್ಯತೆ ಇರುತ್ತಿತ್ತು. ಬೊಮ್ಮಾಯಿ ಅಲ್ಲಿಯೇ ಇದ್ದು ಫಾಲೋ ಅಪ್‌ ಮಾಡಿದ್ದರಿಂದ ವರಿಷ್ಠರು ಈ ಮಾತುಕತೆಯನ್ನು ಬೇಗ ಪೂರ್ಣಗೊಳಿಸಿದರು ಎಂದು ಹೇಳಲಾಗುತ್ತಿದೆ.
ಸಿಎಂ ಕಾರ್ಯಾಲಯದ ಮೇಲೆ ‘ಪಕ್ಷ-ಸಂಘ’ದ ಹಿಡಿತ?; ಬಿಎಸ್‌ವೈ ಅವಧಿಯ 19 ಸಿಬ್ಬಂದಿಗೆ ಗೇಟ್‌ಪಾಸ್‌!
ಭೋಜನ ಕೂಟ: ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸದಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲೂ ಸಿಎಂ ಬೊಮ್ಮಾಯಿ ಭಾಗಿಯಾದರು. ಈ ಕೂಟದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್‌ ಕೂಡ ಇದ್ದರು. ಈ ವೇಳೆ ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಸಿಎಂ ಅನೌಪಚಾರಿಕ ಚರ್ಚೆ ನಡೆಸಿದರು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನೂ ಸಿಎಂ ಭೇಟಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ