ಆ್ಯಪ್ನಗರ

ಎಲ್ಲಾ ಇಲಾಖೆ ಟ್ರಾನ್ಸ್‌ಫರ್ ನಾನೇ ಮಾಡ್ತೇನೆ..! ಸಂಪುಟ ಸಭೆಯಲ್ಲಿ ಸಚಿವರ ವಿರುದ್ಧ ಸಿಎಂ ಗರಂ..!

ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಕೋವಿಡ್ ಕಾರಣಕ್ಕೆ ಕಳೆದ ವರ್ಷ ನಡೆದಿರಲಿಲ್ಲ. ಆದರೆ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆಗೆ ಅವಕಾಶ ಕೊಡದೆ ಸ್ವತಃ ಸಿಎಂ ಹಸ್ತಕ್ಷೇಪ ಮಾಡುತ್ತಿರುವುದು ಕೆಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 21 Jun 2021, 8:19 pm

ಹೈಲೈಟ್ಸ್‌:

  • ಸಚಿವರ ಬೇಡಿಕೆಗೆ ಸಿಟ್ಟಾದ ಸಿಎಂ ಯಡಿಯೂರಪ್ಪ
  • ಇಬ್ಬರು ಸಚಿವರ ಮಧ್ಯೆ ಸಭೆಯಲ್ಲಿ ವಾಗ್ವಾದ
  • ಎಸ್‌. ಟಿ. ಸೋಮಶೇಖರ್ ಹಾಗೂ ಮಾಧುಸ್ವಾಮಿ ಕಿತ್ತಾಟ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bs yediyurappa
ಬೆಂಗಳೂರು: ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಾರ್ಷಿಕ ಸಾಮಾನ್ಯ ವರ್ಗಾವಣೆ ವಿಚಾರವಾಗಿ ಸಚಿವರ ಬೇಡಿಕೆಗೆ ಸಿಎಂ ಬಿಎಸ್ ಯಡಿಯೂರಪ್ಪ ಗರಂ ಆದ ಪ್ರಸಂಗ ನಡೆಯಿತು.‌ ಸಾಮಾನ್ಯ ವರ್ಗಾವಣೆ ವಿಚಾರವಾಗಿ ಇಲಾಖಾ ಸಚಿವರಿಗೆ ಅವಕಾಶ ಕೊಡಿ ಎಂದು ಸಿಎಂ ಮುಂದೆ ಸಚಿವ ಅರವಿಂದ ಲಿಂಬಾವಳಿ ಪ್ರಸ್ತಾಪ ಇಟ್ಟರು. ಇದಕ್ಕೆ ಕೆಲ ಸಚಿವರೂ ಧ್ವನಿ ಗೂಡಿಸಿದರು.
ಆದರೆ ಸಚಿವರ ಬೇಡಿಕೆಗೆ ಗರಂ ಆದ ಸಿಎಂ ಯಡಿಯೂರಪ್ಪ, ಅದಕ್ಕೆಲ್ಲಾ ಅವಕಾಶವಿಲ್ಲ.. ಎಲ್ಲಾ ತನ್ನಿ ನಾನೇ ಮಾಡುತ್ತೇನೆ ಎಂದು ಏರು ಧ್ವನಿಯಲ್ಲೇ ಸಚಿವರ ಬೇಡಿಕೆಯನ್ನು ತಿರಸ್ಕಾರ ಮಾಡಿದರು.

ಪ್ರತಿ ವರ್ಷವೂ ನಡೆಯುವ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಕೋವಿಡ್ ಕಾರಣಕ್ಕೆ ಕಳೆದ ವರ್ಷ ನಡೆದಿರಲಿಲ್ಲ. ಆದರೆ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆಗೆ ಅವಕಾಶ ಕೊಡದೆ ಸ್ವತಃ ಸಿಎಂ ಹಸ್ತಕ್ಷೇಪ ಮಾಡುತ್ತಿರುವುದು ಕೆಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಎಸ್ಸಿ ಅಗ್ರಿ ಡಿಗ್ರಿ ಕೋರ್ಸ್‌ನಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ - ಸಂಪುಟ ಒಪ್ಪಿಗೆ
ಸಚಿವ ಸಂಪುಟ ಸಭೆಯಲ್ಲಿ ಸಚಿವರ ಮಧ್ಯೆ ವಾಗ್ವಾದ: ಸಂಪುಟ ಸಭೆಯಲ್ಲಿ ಸಚಿವರಾದ ಮಾಧುಸ್ವಾಮಿ ಹಾಗೂ ಎಸ್‌. ಟಿ. ಸೋಮಶೇಖರ್ ಮಧ್ಯೆ ತಿಕ್ಕಾಟವೂ ನಡೆದಿದೆ ಎನ್ನಲಾಗಿದೆ.

139 ಕೋಟಿ ಸಹಕಾರ ಸಂಘದ ಸಾಲ ಬಾಕಿಗೆ ಸರ್ಕಾರದಿಂದ ಮರು ಪಾವತಿ ಆದರೂ ಡಿಸಿಸಿ ಬ್ಯಾಂಕ್ ವಸೂಲಿಗೆ ಮುಂದಾಗಿದೆ.‌ ಡಿಸಿಸಿ ಬ್ಯಾಂಕ್ ಕ್ರಮಕ್ಕೆ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ರೈತರಿಂದ ವಸೂಲಾತಿಗೆ ಮುಂದಾದರೆ ಸರ್ಕಾರಕ್ಕೆ ಕೆಟ್ಟ ಹೆಸರು.‌ ಈಗ ಸದ್ಯ ಸಾಲ ವಸೂಲಾತಿ ಕೈಬಿಡಿ ಎಂದು ಮಾಧುಸ್ವಾಮಿ ಆಗ್ರಹಿಸಿದರು.‌

ಮಾಧುಸ್ವಾಮಿ ಮಾತಿಗೆ ಎಸ್‌.ಟಿ.ಸೋಮಶೇಖರ್ ಉತ್ತರಿಸಿದರೂ ಮಾಧುಸ್ವಾಮಿ ಸಮಾಧಾನವಾಗದ ಕಾರಣ ಇಬ್ಬರ ನಡುವಣ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ