ಹೊಸದಿಲ್ಲಿ/ಬೆಂಗಳೂರು: ಮೂರು ದಿನಗಳ ಕಾಲ ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ನೆರವು ಕೋರಲು ಕೇಂದ್ರದ ನಾನಾ ಸಚಿವರನ್ನು ಶುಕ್ರವಾರ ಭೇಟಿಯಾದರು.
ಕೇಂದ್ರ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್, ಹರಿದೀಪ್ ಸಿಂಗ್ ಪುರಿ, ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಪರಿಸರ ತೊಡಕು ನಿವಾರಿಸಿ
ಕಳಸಾ ಬಂಡೂರಿ ಯೋಜನೆಯ ಮೊದಲ ಹಂತದ ಕೆಲಸ ಆರಂಭಕ್ಕೆ ಅರಣ್ಯ ತೆರವು ವಿಚಾರ ಪ್ರಮುಖವಾಗಿದೆ. ಜತೆಗೆ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಷಯದಲ್ಲೂ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮೋದನೆ ನೀಡುವಂತೆ ಪರಿಸರ, ಅರಣ್ಯ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಮಾಡಿದರು.
ಸಂಪುಟ ವಿಸ್ತರಣೆ ಬಗ್ಗೆ ಜೆಪಿ ನಡ್ಡಾ ಜೊತೆ ಬಿಎಸ್ವೈ ಚರ್ಚೆ, ಶನಿವಾರ ಅಂತಿಮ ನಿರ್ಧಾರ
ರಾಷ್ಟ್ರೀಯ ಯೋಜನೆಗೆ ಮನವಿ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಹಾಗೂ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು.
ಉಕ್ಕು ಕಾರ್ಖಾನೆ
ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ಕಂಪನಿಯಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಭೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದರು.
ಸ್ಮಾರ್ಟ್ ಸಿಟಿಗೆ ಇನ್ನಷ್ಟು ನಗರ
ನಗರ ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕ್ಷಮತೆಯ ಬಾಕಿ ಮೊತ್ತ 295.20 ಕೋಟಿ ರೂ. ನೆರವನ್ನು ಬಿಡುಗಡೆ ಮಾಡುವಂತೆ ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ, ಕಲಬುರಗಿ, ಮೈಸೂರು ಮತ್ತು ವಿಜಯಪುರ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸುವಂತೆಯೂ ಬೇಡಿಕೆ ಸಲ್ಲಿಸಿದರು.
ವಿಮಾನ ನಿಲ್ದಾಣ ವಿಸ್ತರಣೆ
ಮೈಸೂರು, ಕಲಬುರಗಿ ಹಾಗೂ ಬೆಳಗಾವಿಯ ವಿಮಾನ ನಿಲ್ದಾಣಗಳ ವಿಸ್ತರಣೆಗೆ ಹೆಚ್ಚುವರಿ ಭೂಸ್ವಾಧೀನ ವೆಚ್ಚವನ್ನು ಪೂರೈಸಲು ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ನಿಂದ ನೀಡಬೇಕಾದ ರಿಯಾಯಿತಿ ಶುಲ್ಕವನ್ನು ಬಳಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
ದಿಲ್ಲಿಯ ಕೌಟಿಲ್ಯ ಮಾರ್ಗದಲ್ಲಿ120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಭವನ-1 ಕಟ್ಟಡದ ಪುನರ್ನಿರ್ಮಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಬಿಎಸ್ವೈ, "ಒಂಬತ್ತು ಮಹಡಿಗಳ ಈ ಕಟ್ಟಡ ನಿರ್ಮಾಣವನ್ನು ಬಾಲಾಜಿ ಕೃಪಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ಗೆ ನೀಡಲಾಗಿದೆ. ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ," ಎಂದು ಹೇಳಿದರು.
ಎರಡನೇ ಬಾರಿ ಪೂಜೆ ನೆರವೇರಿಸಿದ ಸಿಎಂ ಬಿಎಸ್ವೈ
ಕರ್ನಾಟಕ ಭವನ-1ರ ಪುನರ್ನಿರ್ಮಾಣದ ಕೆಲಸಕ್ಕೆ ಎರಡನೇ ಬಾರಿ ಗುದ್ದಲಿ ಪೂಜೆ ನಡೆಸಲಾಗಿದೆ. ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಅಂದಿನ ಲೋಕೋಪಯೋಗಿ ಸಚಿವ ಎಚ್ಡಿ ರೇವಣ್ಣ ನೆರವೇರಿಸಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್ ಭೇಟಿಯಾಗಲು ಭವನದಲ್ಲಿ ತಂಗಿದ್ದಾಗ ಬೆಳಗಿನ ವಾಯುವಿಹಾರಕ್ಕೆ ಹೊರಟಿದ್ದ ಯಡಿಯೂರಪ್ಪ ಅವರನ್ನೂ ಎಚ್ಡಿ ರೇವಣ್ಣ ಅವರು ಗುದ್ದಲಿಪೂಜೆಗೆ ಕರೆತಂದಿದ್ದರು.
ಮುನಿಸಿಕೊಂಡ ಜೋಷಿ
ಕರ್ನಾಟಕ ಭವನ-1 ಪುನರ್ ನಿರ್ಮಾಣ ಭೂಮಿಪೂಜೆಗೆ ತಮಗೆ ಆಹ್ವಾನ ಬಂದಿಲ್ಲವೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಮುನಿಸಿಕೊಂಡ ಪ್ರಸಂಗ ನಡೆಯಿತು.
ಶಿಷ್ಟಾಚಾರದಂತೆ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜೋಷಿ ಹೆಸರು ನಮೂದಿಸಿದ್ದರೂ ರಾಜ್ಯ ಸರಕಾರದ ಕಡೆಯಿಂದ ಯಾರೂ ಅವರಿಗೆ ಕರೆ ಮಾಡಿ ಆಮಂತ್ರಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಅವರು ಕಾರ್ಯಕ್ರಮ ಸ್ಥಳಕ್ಕೆ ಬರುತ್ತಿದ್ದಂತೆ ಗರಂ ಆದರು. ಪರಿಸ್ಥಿತಿಯನ್ನು ಅರಿತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಕೇಂದ್ರ ಸಚಿವರಲ್ಲಿ ಕ್ಷಮಾಪಣೆ ಕೇಳಿದರು. ನಂತರ ಕಾರ್ಯಕ್ರಮದಲ್ಲಿ ಜೋಷಿ ಭಾಗಿಯಾದರು.
ತಮಗೆ ಯಾವ ಅಧಿಕಾರಿಯೂ ಕರೆ ಮಾಡಿಲ್ಲವೆಂದು ಮುಖ್ಯ ಕಾರ್ಯದರ್ಶಿ ಸಮ್ಮುಖ ಜೋಷಿ ಸಿಟ್ಟಿನಿಂದ ಹೇಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಇತ್ತೀಚೆಗೆ ಗಣಿ ಮತ್ತು ಕಲ್ಲಿದ್ದಲು ಇಲಾಖೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಿಎಂ ಜತೆಗೆ ಜೋಷಿ ಮಹತ್ವದ ಸಭೆ ನಡೆಸಿದ್ದರು. ಗಣಿಗಾರಿಕೆ ಸಂಬಂಧದಲ್ಲಿಎದುರಾಗಿದ್ದ ತೊಡಕು ನಿವಾರಿಸಿದ್ದರು. ಜೊತೆಗೆ ಜೋಷಿ ಅವರ ಹೆಸರು ಕೂಡ ಸಿಎಂ ಹುದ್ದೆಗೆ ಪ್ರಸ್ತಾಪ ಆಗುತ್ತಿರುವುದನ್ನು ಗಮನಿಸಬಹುದಾಗಿದೆ.
ಕೇಂದ್ರ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್, ಹರಿದೀಪ್ ಸಿಂಗ್ ಪುರಿ, ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಪರಿಸರ ತೊಡಕು ನಿವಾರಿಸಿ
ಕಳಸಾ ಬಂಡೂರಿ ಯೋಜನೆಯ ಮೊದಲ ಹಂತದ ಕೆಲಸ ಆರಂಭಕ್ಕೆ ಅರಣ್ಯ ತೆರವು ವಿಚಾರ ಪ್ರಮುಖವಾಗಿದೆ. ಜತೆಗೆ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಷಯದಲ್ಲೂ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮೋದನೆ ನೀಡುವಂತೆ ಪರಿಸರ, ಅರಣ್ಯ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಮಾಡಿದರು.
ಸಂಪುಟ ವಿಸ್ತರಣೆ ಬಗ್ಗೆ ಜೆಪಿ ನಡ್ಡಾ ಜೊತೆ ಬಿಎಸ್ವೈ ಚರ್ಚೆ, ಶನಿವಾರ ಅಂತಿಮ ನಿರ್ಧಾರ
ರಾಷ್ಟ್ರೀಯ ಯೋಜನೆಗೆ ಮನವಿ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಹಾಗೂ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು.
ಉಕ್ಕು ಕಾರ್ಖಾನೆ
ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ಕಂಪನಿಯಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಭೇಟಿ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದರು.
ಸ್ಮಾರ್ಟ್ ಸಿಟಿಗೆ ಇನ್ನಷ್ಟು ನಗರ
ನಗರ ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕ್ಷಮತೆಯ ಬಾಕಿ ಮೊತ್ತ 295.20 ಕೋಟಿ ರೂ. ನೆರವನ್ನು ಬಿಡುಗಡೆ ಮಾಡುವಂತೆ ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ, ಕಲಬುರಗಿ, ಮೈಸೂರು ಮತ್ತು ವಿಜಯಪುರ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸುವಂತೆಯೂ ಬೇಡಿಕೆ ಸಲ್ಲಿಸಿದರು.
ವಿಮಾನ ನಿಲ್ದಾಣ ವಿಸ್ತರಣೆ
ಮೈಸೂರು, ಕಲಬುರಗಿ ಹಾಗೂ ಬೆಳಗಾವಿಯ ವಿಮಾನ ನಿಲ್ದಾಣಗಳ ವಿಸ್ತರಣೆಗೆ ಹೆಚ್ಚುವರಿ ಭೂಸ್ವಾಧೀನ ವೆಚ್ಚವನ್ನು ಪೂರೈಸಲು ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ನಿಂದ ನೀಡಬೇಕಾದ ರಿಯಾಯಿತಿ ಶುಲ್ಕವನ್ನು ಬಳಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
ದಿಲ್ಲಿಯ ಕೌಟಿಲ್ಯ ಮಾರ್ಗದಲ್ಲಿ120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಭವನ-1 ಕಟ್ಟಡದ ಪುನರ್ನಿರ್ಮಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಬಿಎಸ್ವೈ, "ಒಂಬತ್ತು ಮಹಡಿಗಳ ಈ ಕಟ್ಟಡ ನಿರ್ಮಾಣವನ್ನು ಬಾಲಾಜಿ ಕೃಪಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ಗೆ ನೀಡಲಾಗಿದೆ. ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ," ಎಂದು ಹೇಳಿದರು.
ಎರಡನೇ ಬಾರಿ ಪೂಜೆ ನೆರವೇರಿಸಿದ ಸಿಎಂ ಬಿಎಸ್ವೈ
ಕರ್ನಾಟಕ ಭವನ-1ರ ಪುನರ್ನಿರ್ಮಾಣದ ಕೆಲಸಕ್ಕೆ ಎರಡನೇ ಬಾರಿ ಗುದ್ದಲಿ ಪೂಜೆ ನಡೆಸಲಾಗಿದೆ. ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಅಂದಿನ ಲೋಕೋಪಯೋಗಿ ಸಚಿವ ಎಚ್ಡಿ ರೇವಣ್ಣ ನೆರವೇರಿಸಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್ ಭೇಟಿಯಾಗಲು ಭವನದಲ್ಲಿ ತಂಗಿದ್ದಾಗ ಬೆಳಗಿನ ವಾಯುವಿಹಾರಕ್ಕೆ ಹೊರಟಿದ್ದ ಯಡಿಯೂರಪ್ಪ ಅವರನ್ನೂ ಎಚ್ಡಿ ರೇವಣ್ಣ ಅವರು ಗುದ್ದಲಿಪೂಜೆಗೆ ಕರೆತಂದಿದ್ದರು.
ಮುನಿಸಿಕೊಂಡ ಜೋಷಿ
ಕರ್ನಾಟಕ ಭವನ-1 ಪುನರ್ ನಿರ್ಮಾಣ ಭೂಮಿಪೂಜೆಗೆ ತಮಗೆ ಆಹ್ವಾನ ಬಂದಿಲ್ಲವೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಮುನಿಸಿಕೊಂಡ ಪ್ರಸಂಗ ನಡೆಯಿತು.
ಶಿಷ್ಟಾಚಾರದಂತೆ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜೋಷಿ ಹೆಸರು ನಮೂದಿಸಿದ್ದರೂ ರಾಜ್ಯ ಸರಕಾರದ ಕಡೆಯಿಂದ ಯಾರೂ ಅವರಿಗೆ ಕರೆ ಮಾಡಿ ಆಮಂತ್ರಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಅವರು ಕಾರ್ಯಕ್ರಮ ಸ್ಥಳಕ್ಕೆ ಬರುತ್ತಿದ್ದಂತೆ ಗರಂ ಆದರು. ಪರಿಸ್ಥಿತಿಯನ್ನು ಅರಿತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಕೇಂದ್ರ ಸಚಿವರಲ್ಲಿ ಕ್ಷಮಾಪಣೆ ಕೇಳಿದರು. ನಂತರ ಕಾರ್ಯಕ್ರಮದಲ್ಲಿ ಜೋಷಿ ಭಾಗಿಯಾದರು.
ತಮಗೆ ಯಾವ ಅಧಿಕಾರಿಯೂ ಕರೆ ಮಾಡಿಲ್ಲವೆಂದು ಮುಖ್ಯ ಕಾರ್ಯದರ್ಶಿ ಸಮ್ಮುಖ ಜೋಷಿ ಸಿಟ್ಟಿನಿಂದ ಹೇಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಇತ್ತೀಚೆಗೆ ಗಣಿ ಮತ್ತು ಕಲ್ಲಿದ್ದಲು ಇಲಾಖೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಿಎಂ ಜತೆಗೆ ಜೋಷಿ ಮಹತ್ವದ ಸಭೆ ನಡೆಸಿದ್ದರು. ಗಣಿಗಾರಿಕೆ ಸಂಬಂಧದಲ್ಲಿಎದುರಾಗಿದ್ದ ತೊಡಕು ನಿವಾರಿಸಿದ್ದರು. ಜೊತೆಗೆ ಜೋಷಿ ಅವರ ಹೆಸರು ಕೂಡ ಸಿಎಂ ಹುದ್ದೆಗೆ ಪ್ರಸ್ತಾಪ ಆಗುತ್ತಿರುವುದನ್ನು ಗಮನಿಸಬಹುದಾಗಿದೆ.