ಆ್ಯಪ್ನಗರ

ಮೀರುತ್ತಲೇ ಇದೆ ಸಂಪುಟ ಸರ್ಜರಿಯ ಡೆಡ್‌ಲೈನ್‌..! ಈ ಬಾರಿಯಾದ್ರೂ ವಿಸ್ತರಣೆಯಾಗುತ್ತಾ ಕ್ಯಾಬಿನೆಟ್‌..?

ರಾಜ್ಯದಲ್ಲಿ ಕಳೆದ 3 ತಿಂಗಳಿನಿಂದ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಲೇ ಇದೆ. ಅದಕ್ಕೆ ಸಂಬಂಧಪಟ್ಟಂತೆ ನಾಲ್ಕು ಬಾರಿ ಬಿಎಸ್‌ ಯಡಿಯೂರಪ್ಪ ಅವರು ಡೆಡ್‌ಲೈನ್‌ ಕೂಡ ವಿಧಿಸಿಕೊಂಡಿದ್ದರು. ಆದರೆ, ಸಂಪುಟಕ್ಕೆ ಮಾತ್ರ ಸರ್ಜರಿ ಆಗಿಲ್ಲ. ಈಗ ಮತ್ತೊಂದು ಡೆಡ್‌ಲೈನ್‌ನ್ನು ಅವರು ಮೈಸೂರಿನಲ್ಲಿ ನೀಡಿದ್ದು, ಈ ಬಾರಿಯಾದ್ರೂ ಕ್ಯಾಬಿನೆಟ್‌ ವಿಸ್ತರಣೆಯಾಗುತ್ತಾ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

Vijaya Karnataka Web 26 Nov 2020, 10:33 pm
ಬೆಂಗಳೂರು: ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ಸಿಎಂ ಯಡಿಯೂರಪ್ಪ ನೀಡುತ್ತಿರುವ ಡೆಡ್‌ಲೈನ್‌ ಮೀರುತ್ತಲೇ ಇದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ 'ಸಂಪುಟ'ದ ಸರ್ಜರಿಯ 'ಅವಧಿ' ವಿಸ್ತರಣೆಯಾಗಿದೆ.
Vijaya Karnataka Web BSY
ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ


ಕಳೆದ ಮೂರು ದಿನಗಳಿಂದ ಮೈಸೂರು ಪ್ರವಾಸದಲ್ಲಿರುವ ಯಡಿಯೂರಪ್ಪ ಮತ್ತೊಮ್ಮೆ 'ಮೂರ್ನಾಲ್ಕು' ದಿನದಲ್ಲಿ ಸಂಪುಟ ವಿಸ್ತರಣೆಯ ಮಾತಾಡಿದ್ದಾರೆ. ಆದರೆ, ಪಕ್ಷದೊಳಗೆ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದಾಗ ಈ ಬಾರಿಯೂ ಗಡುವಿನೊಳಗೆ ಸಂಪುಟ ವಿಸ್ತರಣೆ-ಪುನರ್‌ರಚನೆ ನಡೆಯುವುದೇ ಅನುಮಾನ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಸೆಪ್ಟಂಬರ್‌ ಮೊದಲ ವಾರ ಸಂಪುಟ ವಿಸ್ತರಣೆ ಬೇಡಿಕೆ ಬಂದಾಗ ಕೆಲವೇ ದಿನದಲ್ಲಿ ವರಿಷ್ಠರನ್ನು ಭೇಟಿ ಮಾಡುವ ಭರವಸೆ ನೀಡಿದ್ದರು. ಆದರೆ, ಸೆಪ್ಟಂಬರ್‌ 15ರವರೆಗೂ ದಿಲ್ಲಿಗೆ ಬರುವುದಕ್ಕೆ ಹೈಕಮಾಂಡ್‌ನಿಂದ ಒಪ್ಪಿಗೆ ಲಭಿಸಿರಲಿಲ್ಲ. ಸೆಪ್ಟಂಬರ್‌ 15ರಂದು ಕಲಬುರಗಿ ವಿಮಾನ ನಿಲ್ದಾಣದ ಮೂಲಕ ದಿಲ್ಲಿಗೆ ತೆರಳಿ ಜೆ.ಪಿ.ನಡ್ಡಾ, ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಭೇಟಿ ಮಾಡಿ ಬಂದಿದ್ದರು.

ಯೋಗೇಶ್ವರ್‌ ಪರ ರಮೇಶ್‌ ಜಾರಕಿಹೊಳಿ ಬ್ಯಾಟಿಂಗ್‌ಗೆ ಪ್ರೀತಿಗಿಂತ ದ್ವೇಷವೇ ಕಾರಣ..!

ಕೆಲವೇ ದಿನಗಳಲ್ಲಿ ವರಿಷ್ಠರ ಸೂಚನೆ ಆಧರಿಸಿ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಪ್ರವಾಹ, ಉಪಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದೂಡಿಕೆಯಾಗಿತ್ತು. ನವೆಂಬರ್‌ 18ರಂದು ಮತ್ತೊಮ್ಮೆ ದಿಲ್ಲಿಗೆ ಭೇಟಿ ಕೊಟ್ಟು ಬಂದು ಮೂರ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವ ಡೆಡ್‌ಲೈನ್‌ ನೀಡಿದ್ದರು. ಅದು ಮುಕ್ತಾಯಗೊಂಡ ಬಳಿಕ ಈಗ ಮೈಸೂರಿನಲ್ಲಿ ಮತ್ತೊಮ್ಮೆ ಡೆಡ್‌ಲೈನ್‌ ನಿಗದಿ ಮಾಡಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಚಿವ ಸ್ಥಾನಕ್ಕಾಗಿ ಮೂಲ-ವಲಸಿಗರ ತಿಕ್ಕಾಟ..! ಜಾರಕಿಹೊಳಿ, ರೇಣುಕಾಚಾರ್ಯ ಮನೆಯಲ್ಲಿ ಪ್ರತ್ಯೇಕ ಸಭೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ