ಆ್ಯಪ್ನಗರ

ಪ್ರಧಾನಿ ಬಳಿ ಲಾಕ್‌ಡೌನ್‌ ಘೋಷಣೆ ಬಿಟ್ಟು ಬೇರೆ ದಾರಿ ಇದ್ದಿಲ್ಲ: ಸಿಎಂ ಬಿಎಸ್‌ವೈ

ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ಮನೆಯಲ್ಲಿ ಇರುವಂತೆ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ಅವರು ದೂರದೃಷ್ಟಿ ಇಟ್ಟುಕೊಂಡು 21 ದಿನಗಳ ಕಾಲ ಮನೆಯಲ್ಲಿರುವ ಇರುವ ಕ್ರಮಕ್ಕೆ ಕರೆ ನೀಡಿದ್ದಾರೆ. ಮೋದಿ ಅವರ ಕರೆಯನ್ನು ಪಾಲಿಸಿ ಜೀವ ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Vijaya Karnataka Web 24 Mar 2020, 11:25 pm
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 21 ದಿನ ಮನೆಯಲ್ಲಿ ಇರುವಂತೆ ಮನವಿ ಮಾಡಿ ದೇಶದ ಜನತೆಯ ರಕ್ಷಣೆಗೆ ನಿಂತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿಯವರಿಗೆ ಈ ಕ್ರಮ ಬಿಟ್ಟರೆ ಬೇರೊಂದು ಮಾರ್ಗ ಇರಲಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web BSY


ಪ್ರಧಾನಿ ಮೋದಿ 21 ದಿನಗಳ ಲಾಕ್‌ಡೌನ್‌ ಘೋಷಿಸಿದ ಮೇಲೆ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಗತ್ತಿನ ಅನೇಕ ದೇಶಗಳು ಈ ಮಹಾಮಾರಿ ಕೋವಿಡ್‌-19 ತಡೆಯಲು ವಿಫಲವಾದ ಕಾರಣ, ಪ್ರಧಾನಿ ಮೋದಿ ಅವರು ದೂರದೃಷ್ಟಿ ಇಟ್ಟುಕೊಂಡು 21 ದಿನಗಳ ಕಾಲ ಮನೆಯಲ್ಲಿರುವ ಇರುವ ಕ್ರಮಕ್ಕೆ ಕರೆ ನೀಡಿದ್ದಾರೆ.

ದೇಶದ ಜನರ ರಕ್ಷಣೆ ಮಾಡಬೇಕು ಎನ್ನುವುದೇ ಪ್ರಧಾನಿ ಮೋದಿ ಅವರ ಗುರಿ. ಈ ದೊಡ್ಡ ಮತ್ತು ಕಷ್ಟಕರ ಕಾರ್ಯದಲ್ಲಿ ನಾವು ಮೋದಿಯವರ ಜೊತೆಗಿದ್ದೇವೆ. ನಾನೊಬ್ಬನೇ ಅಲ್ಲ, ಕರ್ನಾಟಕದ 6.5 ಕೋಟಿ ಜನ ಅವರ ಜೊತೆ ಇದ್ದಾರೆ ಮತ್ತು ಪ್ರಧಾನಿಯವರ ಕರೆಯನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.

21 ದಿನ ಮನೆಯಲ್ಲಿ ಕಾಲ ಕಳೆಯುವುದು ತಪಸ್ಸಿದ್ದಂತೆ. ಈ ತಪಸ್ಸಿನಲ್ಲಿ ನಾವೆಲ್ಲರೂ ಭಾಗಿಯಾಗಿ ನಮ್ಮ ಜೀವವನ್ನು ಉಳಿಸಿಕೊಳ್ಳೋಣ. ಇನ್ನು ರಾಜ್ಯ ಸರಕಾರ ಈ ಸಮಯದಲ್ಲಿ ಜನರನ್ನು ರಕ್ಷಣೆ ಮಾಡುವ ಹೊಣೆಯ ಜೊತೆಗೆ ಬಡವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತದೆ.

21 ದಿನ ಇಡೀ ಭಾರತ ಲಾಕ್‌ಡೌನ್‌..! ನಾಳೆಯಿಂದ ದೇಶಾದ್ಯಂತ ಏನಿರುತ್ತೆ..? ಏನಿರಲ್ಲ..?

ಯಾರೂ ಆತಂಕಕ್ಕೆ ಒಳಗಾಗಬೇಡಿ. ನಮ್ಮ ಸರಕಾರ ನಿಮ್ಮ ಜೊತೆಗಿದೆ. ಮೋದಿ ಅವರ ಕರೆಯನ್ನು ಧಿಕ್ಕರಿಸಿ, ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳಬೇಡಿ. ಕಾಳಸಂತೆಕೋರರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

21 ದಿನ ಹಿಂದೂಸ್ತಾನ್ ಲಾಕ್ಔಟ್..! 3 ವಾರ ದೇಶಾದ್ಯಂತ ನಿರ್ಬಂಧ ಘೋಷಿಸಿದ ಪ್ರಧಾನಿ

ದೇಶವನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ನಿಯಂತ್ರಣಕ್ಕಾಗಿ 21 ದಿನಗಳ ಕಾಲ ದೇಶವನ್ನು ಲಾಕ್‌ಡೌನ್‌ ಮಾಡುವುದಾಗಿ ಘೋಷಿಸಿದ್ದು, ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಮನೆಯಿಂದ ಯಾರು ಹೊರಬೇಡಿ ಎಂದು ಹೇಳಿದ್ದಾರೆ.

ನಿಮ್ಮ ಮನೆ ಮುಂದಿದೆ ಲಕ್ಷ್ಮಣ ರೇಖೆ..! ದಾಟಿದರೆ ‘ಪ್ರಾಣಾಪಹರಣ’ ಖಚಿತ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ