ಆ್ಯಪ್ನಗರ

ಮದ್ದೂರು ಜೆಡಿಎಸ್‌ ನಾಯಕ ಹಂತಕರನ್ನು ಶೂಟೌಟ್‌ ಮಾಡಿ ಎಂದ ಮುಖ್ಯಮಂತ್ರಿ ಎಚ್‌ಡಿಕೆ

ಕೊಲೆಯಾದವ ಪಕ್ಷದ ಕಾರ್ಯಕರ್ತ ಪಾಪ ಒಳ್ಳೆಯವನಿದ್ದ. ಅಂತಹವನನ್ನ ಕೊಲೆ ಮಾಡಿದ ಹಂತಕನನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಸಿಎಂ ಗುಡುಗಿದ್ದಾರೆ.

Vijaya Karnataka Web 25 Dec 2018, 2:33 pm
ವಿಜಯ ಪುರ: ಮದ್ದೂರಿನಲ್ಲಿ ಹಾಡಹಗಲೇ ನಡೆದ ಜೆಡಿಎಸ್‌ ಮುಖಂಡನ ಹತ್ಯೆ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ. ಅಲ್ಲದೇ ಹಂತಕರನ್ನು ಶೂಟೌಟ್‌ ಮಾಡಿ ಎಂದು ಆದೇಶವನ್ನೂ ನೀಡಿದ್ದಾರೆ.

ವಿಜಯಪುರ ಹೆಲಿಪ್ಯಾಡ್‌ನಲ್ಲಿ ಇಳಿದ ತಕ್ಷಣವೇ ಫೋನ್‌ ಮೂಲಕ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, ಕೊಲೆ ಮಾಡಿದವರನ್ನು ಶೂಟೌಟ್‌ ಮಾಡಿ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರ ಶೂಟೌಟ್ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕಿಸುತ್ತಿದ್ದಾರೆ.

ಬಾಯ್ತಪ್ಪಿ ಶೂಟೌಟ್ ಹೇಳಿಕೆ ನೀಡಿದೆ: ಸಿಎಂ ಕುಮಾರಸ್ವಾಮಿ

ಕೊಲೆಯಾದವ ಪಕ್ಷದ ಕಾರ್ಯಕರ್ತ ಪಾಪ ಒಳ್ಳೆಯವನಿದ್ದ. ಅಂತಹವನನ್ನ ಕೊಲೆ ಮಾಡಿದ ಹಂತಕನನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಸಿಎಂ ಗುಡುಗಿದ್ದಾರೆ.

ಕುಮಾರಸ್ವಾಮಿ ಮಾತನಾಡಿರುವ ವೀಡಿಯೋ ಈಗ ಸೆರೆಯಾಗಿದೆ. ಕುಮಾರಸ್ವಾಮಿ ಅವರ ಈ ರೀತಿಯ ಆದೇಶ ಸಾಕಷ್ಟು ವಿವಾದಕ್ಕೀಡಾಗಿದೆ.

ಶಾಕಿಂಗ್‌: 'ನಿರ್ದಾಕ್ಷಿಣ್ಯವಾಗಿ ಕೊಲ್ಲಿ' ಎಂದ ಸಿಎಂ ಕುಮಾರಸ್ವಾಮಿ, ವೀಡಿಯೋದಲ್ಲಿ ಸೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ