ಆ್ಯಪ್ನಗರ

Kodagu Floods: 2 ಸಾವಿರ ಕೋಟಿ ರೂ. ಮಧ್ಯಾಂತರ ಪರಿಹಾರಕ್ಕೆ ಪಿಎಂಗೆ ಸಿಎಂ ಪತ್ರ

ಕೊಡಗು ಸೇರಿದಂತೆ ರಾಜ್ಯದ ಕರಾವಳಿ-ಮಲೆನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿರುವ ನಷ್ಟ ಭರ್ತಿ ಮಾಡಲು 2 ಸಾವಿರ ಕೋಟಿ ರೂ...

Vijaya Karnataka 25 Aug 2018, 10:41 am
ಬೆಂಗಳೂರು: ಕೊಡಗು ಸೇರಿದಂತೆ ರಾಜ್ಯದ ಕರಾವಳಿ-ಮಲೆನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿರುವ ನಷ್ಟ ಭರ್ತಿ ಮಾಡಲು 2 ಸಾವಿರ ಕೋಟಿ ರೂ. ಮಧ್ಯಾಂತರ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿ ಅವರಿಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
Vijaya Karnataka Web hdk


2,200 ಮನೆಗಳು ಧ್ವಂಸವಾಗಿವೆ. ಆಗಸ್ಟ್‌ 14 ರಿಂದ ಈವರೆಗೆ 17 ಜನರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಾಫಿ, ಅಡಕೆ ತೋಟಗಳಿಗೆ ಹೆಚ್ಚಿನ ಹಾನಿಯಾಗಿದೆ. ಕೊಡಗು ಜಿಲ್ಲೆಯನ್ನು ಮರು ನಿರ್ಮಾಣ ಮಾಡುವ ಸ್ಥಿತಿಯಿದೆ. ಮೂಲಸೌಕರ್ಯ, ಬೆಳೆ ಹಾನಿ ಸೇರಿ ಅಂದಾಜು 3 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಈ ಕುರಿತ ವಿವರವಾದ ಪ್ರಸ್ತಾವನೆಯನ್ನು ಕಳುಹಿಸಿ ಕೊಡಲಾಗುವುದು. ಅದಕ್ಕೆ ಮುನ್ನ ಮಧ್ಯಾಂತರ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಶುಕ್ರವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ನೆರೆ ಸಂತ್ರಸ್ತರನ್ನು ಭೇಟಿಯಾಗಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ