ಆ್ಯಪ್ನಗರ

ವಿಶೇಷ ಚೇತನ ಮಹಿಳೆಗೆ ಸಿಎಂ ನೆರವು

ಸವಾಲುಗಳನ್ನು ಮೆಟ್ಟಿನಿಂತು ಸ್ವಯಂ ಉದ್ಯೋಗ ಆರಂಭಿಸಲು ವಿಶೇಷ ಚೇತನ ಮಹಿಳೆಯೊಬ್ಬರಿಗೆ ಸಿಎಂ ಎಚ್‌ಡಿ...

Vijaya Karnataka 4 Jun 2019, 5:00 am
ಬೆಂಗಳೂರು: ಸವಾಲುಗಳನ್ನು ಮೆಟ್ಟಿನಿಂತು ಸ್ವಯಂ ಉದ್ಯೋಗ ಆರಂಭಿಸಲು ವಿಶೇಷ ಚೇತನ ಮಹಿಳೆಯೊಬ್ಬರಿಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ನೆರವಿನ ಹಸ್ತ ಚಾಚಿದ್ದಾರೆ.
Vijaya Karnataka Web cm help handicap women
ವಿಶೇಷ ಚೇತನ ಮಹಿಳೆಗೆ ಸಿಎಂ ನೆರವು


ಬೆಳಗಾವಿಯ ಗೋಕಾಕ ತಾಲೂಕಿನ ಮಾಯಕ್ಕ ಎಂಬ ವಿಶೇಷ ಚೇತನ ಮಹಿಳೆ ಸೋಮವಾರ ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ನಡೆದಾಡಲು ಎರಡೂ ಕಾಲುಗಳಿಲ್ಲ. ಆಸರೆಯಾಗಬೇಕಿದ್ದ ಪತಿಯೂ ತೊರೆದು ಹೋಗಿದ್ದಾರೆ. ಜೀವನ ನಿರ್ವಹಣೆಗೆ ತೆವಳಿಕೊಂಡೇ ಮನೆ ಕೆಲಸಗಳಿಗೆ ಹೋಗುವ ಈಕೆಗೆ ಇಬ್ಬರು ಮಕ್ಕಳನ್ನು ಸಾಕುವ ದೊಡ್ಡ ಜವಾಬ್ದಾರಿ ಹೆಗಲಿಗೇರಿದೆ. ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಸ್ವಯಂ ಉದ್ಯೋಗ ಆರಂಭಿಸಿ ಬದುಕು ಕಟ್ಟಿಕೊಳ್ಳಲು ನೆರವು ನೀಡುವಂತೆ ಮನವಿ ಮಾಡಿದರು.

ಸಿಎಂ 50 ಸಾವಿರ ರೂ. ನೆರವು ನೀಡಿದಾಗ ಮಾಯಕ್ಕ ಸಂತೋಷಪಟ್ಟರು. ಊರಿಗೆ ತೆರಳಿ ಕಿರಾಣಿ ಅಂಗಡಿ ತೆರೆದು ಜೀವನ ಮಾಡುತ್ತೇನೆ ಎಂದು ಆಕೆ ಸಂಭ್ರಮಪಟ್ಟರು. ವಿಶೇಷ ಚೇತನ ಮಹಿಳೆಯ ಆತ್ಮವಿಶ್ವಾಸ ಕಂಡು ಖುಷಿಯಾದ ಸಿಎಂ ತಕ್ಷಣ ಬೆಳಗಾವಿ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಅವರನ್ನು ಸಂಪರ್ಕಿಸಿ, ಪಡಿತರ ಚೀಟಿ ಸೇರಿದಂತೆ ಮಾಯಕ್ಕನಿಗೆ ಅಗತ್ಯವಾಗಿ ಸಿಗಬೇಕಾದ ಎಲ್ಲ ಸವಲತ್ತು ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು. ಆಕೆಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರಿ ಹಾಸ್ಟೆಲ್‌ನಲ್ಲಿ ಪ್ರವೇಶ ಕಲ್ಪಿಸುವಂತೆ ಸಿಎಂ ಡಿಸಿಗೆ ಆದೇಶಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ