ಆ್ಯಪ್ನಗರ

ಸಿಎಂ ಗ್ರಾಮ ವಾಸ್ತವ್ಯ ನಿರ್ಧಾರ ಒಳ್ಳೆಯದು, ಜತೆಗೆ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಿ: ಶ್ರೀರಾಮುಲು

ಸರಕಾರ ಪತನ ಬಗ್ಗೆ ನಾವು ಮಾತನಾಡೋಲ್ಲ. ನಮ್ಮ ನಾಯಕರು ಹೇಳಿಕೆ ನೀಡಬೇಡಿ ಎಂದು ಸೂಚಿಸಿದ್ದಾರೆ. ನಾವು ಸರಕಾರ ಬೀಳಿಸೋ ಪ್ರಯತ್ನ ಮಾಡೋಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ, ಕೊಟ್ರೆ ನಿಭಾಯಿಸುವೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka Web 3 Jun 2019, 4:57 pm
ಬಳ್ಳಾರಿ: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಿರ್ಧಾರ ಒಳ್ಳೆಯ ಬೆಳವಣಿಗೆ. ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವುದು ಯಾವುದಾದರೂ ಸ್ವಾಗತ. ಗ್ರಾಮಗಳ ಅಭಿವೃದ್ಧಿಗೂ ಒತ್ತು ನೀಡಲಿ ಎಂದು ಬಿಜೆಪಿ ನಾಯಕ ಶ್ರೀರಾಮುಲು ತಿಳಿಸಿದ್ದಾರೆ.
Vijaya Karnataka Web ಶ್ರೀರಾಮುಲು
ಶ್ರೀರಾಮುಲು


ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದಿ ಹೇರಿಕೆ ವಿಚಾರವಾಗಿ ದೇಶದ್ಯಾಂತ ವಿರೋಧವಿದೆ. ನಾವು ಹಿಂದಿ ಹೇರಿಕೆ ಬೇಡ ಅಂತ ಹೇಳ್ತಿಲ್ಲ, ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.

ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆ ವಿಚಾರದಲ್ಲಿಯೂ ನಮ್ಮ ಅಪಸ್ವರ ಇಲ್ಲ. ಕಾರ್ಖಾನೆ ಅಭಿವೃದ್ಧಿಗೆ ನಮ್ಮ ಅಪಸ್ವರ ಇಲ್ಲ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಈ ಬಗ್ಗೆ ನಾನು ದಾಖಲೆಗಳನ್ನು ಪರಿಶೀಲಿಸಿ, ಹೋರಾಟ ರೂಪಿಸುತ್ತೇವೆ. ಯಾವುದೇ ಸರಕಾರ ಭೂಮಿ ಕೊಟ್ಟಿರಬಹುದು, ಕೇವಲ 1 ಲಕ್ಷ 20 ಸಾವಿರ ಹಣಕ್ಕೆ ಎಕರೆ ನೀಡಲಾಗಿದೆ. ಅದಕ್ಕೆ ನಮ್ಮ ವಿರೋಧವಿದೆ. ಪರಭಾರೆ ಮಾಡುವ ಅವಶ್ಯಕತೆ ಇರಲಿಲ್ಲ, ಲೀಜ್ ಮಾತ್ರ ಮುಂದುವರಿಸಬಹುದಾಗಿತ್ತು ಎಂದು ಶಾಸಕರು ತಿಳಿಸಿದರು.

ಸರಕಾರ ಪತನ ಬಗ್ಗೆ ನಾವು ಮಾತನಾಡೋಲ್ಲ. ನಮ್ಮ ನಾಯಕರು ಹೇಳಿಕೆ ನೀಡಬೇಡಿ ಎಂದು ಸೂಚಿಸಿದ್ದಾರೆ. ನಾವು ಸರಕಾರ ಬೀಳಿಸೋ ಪ್ರಯತ್ನ ಮಾಡೋಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ, ಕೊಟ್ರೆ ನಿಭಾಯಿಸುವೆ ಎಂದು ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ