ಆ್ಯಪ್ನಗರ

ಅದೃಷ್ಟ ಕತ್ತೆ ಕಾಲು ಕಾಯುತ್ತೆ: ಜೆಡಿಎಸ್‌ ವರಿಷ್ಠರಿಗೆ ಕಾಂಗ್ರೆಸ್‌ನ ಲಿಂಗಪ್ಪ ಟಾಂಗ್‌

ಅದೃಷ್ಟ ಕತ್ತೆ ಕಾಲು ಕಾಯುತ್ತೆ ಎಂಬಂತೆ 37 ಸ್ಥಾನ ಪಡೆದ ಜೆಡಿಎಸ್ ಪಕ್ಷಕ್ಕೆ ಮನೆಬಾಗಿಲಿಗೆ ಹೋಗಿ ಅಧಿಕಾರ ಕೊಟ್ಟಿದ್ದಾರೆ.

Vijaya Karnataka Web 5 Jun 2018, 2:37 pm
ರಾಮನಗರ: ಅದೃಷ್ಟ ಕತ್ತೆ ಕಾಲು ಕಾಯುತ್ತೆ ಎಂಬಂತೆ 37 ಸ್ಥಾನ ಪಡೆದ ಜೆಡಿಎಸ್ ಪಕ್ಷಕ್ಕೆ ಮನೆಬಾಗಿಲಿಗೆ ಹೋಗಿ ಅಧಿಕಾರ ಕೊಟ್ಟಿದ್ದಾರೆ. ಇದು ಕಾಂಗ್ರೆಸ್‌ನ ಹಣೆಬರಹ ಎಂದು ವಿಧಾನಪರಿಷತ್‌ ಸದಸ್ಯ ಸಿಎಂ ಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web lingappa


ರಾಮನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೃಷ್ಟ ಅನ್ನುವುದು ಒಮ್ಮೊಮ್ಮೆ ಕೆಲಸ ಮಾಡುತ್ತದೆ. ದೇವೇಗೌಡರು ಈ ಹಿಂದೆ, ನನ್ನ ಮಗನನ್ನು ಸಿಎಂ ಮಾಡುವ ವರೆಗೆ ವಿರಮಿಸುವುದಿಲ್ಲ ಎಂದಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ ಅವರೆಲ್ಲವರೂ ಚುನಾವಣಾ ಪ್ರಚಾರದಲ್ಲೇ ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿದ್ದರು. ಆದರೆ ಕಡೆಗೆ ಅದೃಷ್ಟ ಕತ್ತೆ ಕಾಲು ಕಾಯುತ್ತದೆ ಎಂಬ ಮಾತಿನಂತೆ ಆಯಿತು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಗೆ 78 ಸ್ಥಾನ ಬಂದಿರುವುದನ್ನು ಕಡೆಗಣಿಸುವಂತಿಲ್ಲ. ಆದರೆ ದುರದೃಷ್ಟ ಎಂದರೆ, ಜೆಡಿಎಸ್ಗೆ ಅಧಿಕಾರ ಕೊಟ್ಟು ಕಾಂಗ್ರೆಸ್ ನವರು ಭಿಕ್ಷುಕರಾಗಿದ್ದಾರೆ. ಖಾತೆಗಳಿಗಾಗಿ ದೇವೇಗೌಡರ ಮುಂದೆ ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಜೆಡಿಎಸ್‌ ಜತೆ ಅಧಿಕಾರ ಹಂಚಿಕೆಗೆ ಮುಂದಾಗಿದ್ದೂ ಅಲ್ಲದೆ, ಅವರ ಮನೆ ಬಾಗಿಲಿಗೆ ತೆರಳಿ ಅಧಿಕಾರ ಕೊಟ್ಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ