ಆ್ಯಪ್ನಗರ

ಸಿಎಂ ಆಯ್ಕೆ ಕೊನೆ ತನಕ ಅನಿಶ್ಚಿತ: ಎಸ್ಸಾರ್‌ಪಿ

ಮುಂದಿನ ಚುನಾವಣೆಯಲ್ಲಿ 113 ಮ್ಯಾಜಿಕ್‌ ಸಂಖ್ಯೆ ತಲುಪಿ ಶಾಸಕಾಂಗ ಸಭೆ ಕೈಗೊಂಡ ತೀರ್ಮಾನಕ್ಕೆ ಹೈಕಮಾಂಡ್‌ ಅನುಮೋದನೆ ಕೊಡುವ ತನಕ ಕಾಂಗ್ರೆಸ್‌ ಮುಖ್ಯಮಂತ್ರಿಯಾರಾಗುತ್ತಾರೆ ಎನ್ನುವುದು ಅನಿಶ್ಚಿತ

Vijaya Karnataka 22 Jan 2018, 5:43 pm

ಬಾಗಲಕೋಟ: ಮುಂದಿನ ಚುನಾವಣೆಯಲ್ಲಿ 113 ಮ್ಯಾಜಿಕ್‌ ಸಂಖ್ಯೆ ತಲುಪಿ ಶಾಸಕಾಂಗ ಸಭೆ ಕೈಗೊಂಡ ತೀರ್ಮಾನಕ್ಕೆ ಹೈಕಮಾಂಡ್‌ ಅನುಮೋದನೆ ಕೊಡುವ ತನಕ ಕಾಂಗ್ರೆಸ್‌ ಮುಖ್ಯಮಂತ್ರಿಯಾರಾಗುತ್ತಾರೆ ಎನ್ನುವುದು ಅನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ತಿಳಿಸಿದರು.

ಕೆಪಿಸಿಸಿ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ''ಸಿಎಂ ಸಿದ್ದರಾಮಯ್ಯ ಅವರು ಇದುವರೆಗೂ ಪಕ್ಷ ದಲ್ಲಿ ಯಾವತ್ತೂ ಏಕಪಕ್ಷೀಯ ತೀರ್ಮಾನ ಕೈಗೊಂಡಿಲ್ಲ. ಅವರ ವಿರುದ್ಧ ಯಾರ ಅಸಮಾಧಾನವೂ ಇಲ್ಲ,''ಎಂದರು.

''ಸಿದ್ದರಾಮಯ್ಯ ಅವರಿಗೆ ಚಾಮುಂಡಿ ಕ್ಷೇತ್ರ ಹೊರತುಪಡಿಸಿ ಬಾಗಲಕೋಟ ಜಿಲ್ಲೆಯಿಂದ ಸ್ಪರ್ಧಿಸಲು ಒತ್ತಡ ಹಾಕಿದ್ದೇವೆ. ಸಿಎಂ ಸ್ಪರ್ಧೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಹೆಚ್ಚು ಸಂಖ್ಯೆಯಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಲಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ