ಆ್ಯಪ್ನಗರ

ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಟ್ಟಿದ ಟ್ರಾಫಿಕ್‌ ಬಿಸಿ!

ಸಿಟಿ ರೌಂಡ್ಸ್‌ಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಸ್‌ ಕೈ ಕೊಟ್ಟಿದೆ.

Vijaya Karnataka Web 13 Sep 2017, 5:34 pm
ಬೆಂಗಳೂರು: ಸಿಲಿಕಾನ್‌ ಸಿಟಿಯ ಟ್ರಾಫಿಕ್‌ ಬಿಸಿ ಅನುಭವಿಸಿದವರೇ ಇಲ್ಲ. ಬುಧವಾರ ಈ ಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಟ್ಟಿದೆ.
Vijaya Karnataka Web cm siddaramaiah struck in traffic
ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಟ್ಟಿದ ಟ್ರಾಫಿಕ್‌ ಬಿಸಿ!


ಕಳೆದ ಒಂದು ವಾರದಿಂದ ಬಿದ್ದ ಮಳೆಯಿಂದ ಹಾನಿಗೊಳಗೊದ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ರಾಫಿಕ್‌ನಲ್ಲಿ ಸಿಲುಕಿದರು.

ವೋಲ್ವೊ ಬಸ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ನಿಮ್ಹಾನ್ಸ್‌ ರಸ್ತೆಯಲ್ಲಿ ನಗರದ ಟ್ರಾಫಿಕ್‌ ಜಂಜಾಟದ ದರ್ಶನವಾಯಿತು. ಸುಮಾರು 20 ನಿಮಿಷಗಳ ಕಾಲ ಬಸ್‌ ಚಲಿಸದೇ ಟ್ರಾಫಿಕ್‌ನಲ್ಲಿಯೇ ಸಿಲುಕಿಕೊಂಡಿತು.

ಬಿಬಿಎಂಪಿ ಅಧಿಕಾರಿಗೆ ಬೈರತಿ ತರಾಟೆ

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ಬಸ್‌ ಕೂಡ ಕೈ ಕೊಟ್ಟಿತು. ವೋಲ್ವೊ ಬಸ್‌ನಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಪ್ತ, ಶಾಸಕ ಬೈರತಿ ಬಸವರಾಜ್‌ ಬಿಬಿಎಂಪಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಿಬಿಎಂಪಿ ಅಧಿಕಾರಿಯನ್ನು ಏಕವಚನದಲ್ಲಿಯೇ ಬೈರತಿ ಬೈದರು.

ಸಿಎಂ ಸಿಟಿ ರೌಂಡ್ಸ್ ಬರುತ್ತಾರೆ ಅಂದರೆ ಎಂಥ ಬಸ್ಸು ಮಾಡಬೇಕು ಅಂಥ ಗೊತ್ತಾಗಲ್ವಾ ನಿನ್ಗೆ? ಸಿಎಂ ಅಂದ್ರೆ ಏನೋ ಅನ್ಕೊಂಡಿದ್ದೀಯಾ? ಇದ್ರ ಪರಿಣಾಮ ಸರಿ ಇರೋದಿಲ್ಲ ನೋಡು? ಎದುರು ಮಾತಾಡಿದ್ರೆ ನಿನ್ನನ್ನ ನೋಡಿಕೊಳ್ತೀನಿ ಹುಷಾರ್ ಎಂದು ಅಧಿಕಾರಿಗೆ ಬೈರತಿ ಬಸವರಾಜು ತರಾಟೆ ತೆಗೆದುಕೊಂಡರು.

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಎಸ್ ಆರ್ ಬಡಾವಣೆಯ ರಾಜಕಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಬಗ್ಗೆ ಶಾಸಕ ಸತೀಶ್ ರೆಡ್ಡಿಯಿಂದ ಸಿಎಂ ಮಾಹಿತಿ ಪಡೆದರು.

ಭಾರೀ ಮಳೆಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 3 ವಾರ್ಡ್ ಗಳಲ್ಲಿ ಭಾರಿ ಸಮಸ್ಯೆ ಎದುರಾಗಿತ್ತು. 95 ಕಿ.ಮೀ ರಸ್ತೆ ಎಚ್ಎಸ್ಆರ್ ಲೇಔಟ್ನಲ್ಲಿದೆ....ಅವುಗಳಿಗೆ ಟಾರ್ ಹಾಕಬೇಕಿದೆ... ರಾಜಕಾಲುವೆ ಹೂಳು ತೆಗೆಯುವುದು ಮತ್ತು ಕಾಮಗಾರಿ ನಡೆದಿದ್ದರೆ ಮನೆಗಳಿಗೆ ನೀರು ನುಗ್ಗುತ್ತಿರಲಿಲ್ಲ ಎಂದು ಶಾಸಕ ಸತೀಶ್ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

CM siddaramaiah struck in Traffic

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ