ಆ್ಯಪ್ನಗರ

SC-ST ACT: ಎಸ್ಸಿ, ಎಸ್ಟಿ ಕಾಯಿದೆ ಜಾರಿಗೆ ಸಭೆ ನಡೆಸದ ಸಿಎಂ ಸಮಿತಿ:ಸರಕಾರದ ವಿರುದ್ಧ ಹೈಕೋರ್ಟ್‌ ಕಿಡಿ

SC-ST ACT: ಎಸ್‌ಸಿ., ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಹೈಕೋರ್ಟ್‌ ರಚಿಸಿರುವ ಸಿಎಂ ನೇತೃತ್ವದ ಸಭೆ ವರ್ಷಕ್ಕೆರಡು ಬಾರಿ ನಡೆಸಬೇಕೆಂದಿದ್ದರೂ 2022 ಹಾಗೂ 2023 ರಲ್ಲಿ ಒಂದು ಸಭೆಯೂ ನಡೆಸಿಲ್ಲ. ಸಭೆಯೇ ನಡೆಸಿಲ್ಲವಾದರೆ ಕಾಯ್ದೆ ಜಾರಿಯ ಮೇಲ್ವಿಚಾರಣೆ ಹೇಗೆ ಎಂದು ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.

Vijaya Karnataka Web 16 Feb 2023, 12:32 pm

ಹೈಲೈಟ್ಸ್‌:

  • ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆ ಜಾರಿ ಸಂಬಂಧ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ನೇತೃತ್ವದ ಉನ್ನತಾಧಿಕಾರ ವಿಚಕ್ಷಣಾ ಮತ್ತು ನಿಗಾ ಸಮಿತಿಯು ಸಭೆ ನಡೆಸದಿರುವುದಕ್ಕೆ ಹೈಕೋರ್ಟ್‌ ಕಿಡಿಕಾರಿದೆ
  • 2022 ರಲ್ಲಿ ಮುಖ್ಯಮಂತ್ರಿ ನೇತೃತ್ವದ ಸಮಿತಿಯು ಒಂದೇ ಒಂದು ಬಾರಿಯೂ ಸಭೆ ನಡೆಸದಿರುವುದು ಸರಿಯಲ್ಲ. ಆನಂತರ 2023 ರಲ್ಲಿಯೂ ಸಭೆ ನಡೆಸಿಲ್ಲ ಎಂದು ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿದೆ.
  • ಜಿಲ್ಲಾ, ಉಪ ವಿಭಾಗೀಯದಲ್ಲಿ ನಡೆದ ಸಭೆ ವರದಿ ತೃಪ್ತಿದಾಯಕವಿಲ್ಲ, ಕೋರ್ಟ್‌ ಪ್ರಶ್ನೆಗಳಿಗೆ ಉತ್ತರಿಸುವ ಬದಲಿಗೆ ಇನ್ನಷ್ಟು ಪ್ರಶ್ನೆಗೆ ಗ್ರಾಸವಾಗಿದೆ. ಸಭೆ ನಡೆಸಲು ಸೂಚಿಸಿದ್ದರೂ ಅದನ್ನು ಪಾಲನೆ ಮಾಡಿಲ್ಲವೇಕೆ ಎಂದು ಪ್ರಶ್ನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web HIGHCOURT
ಬೆಂಗಳೂರು: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆ ಜಾರಿ ಸಂಬಂಧ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ನೇತೃತ್ವದ ಉನ್ನತಾಧಿಕಾರ ವಿಚಕ್ಷಣಾ ಮತ್ತು ನಿಗಾ ಸಮಿತಿಯು ಸಭೆ ನಡೆಸದಿರುವುದಕ್ಕೆ ಹೈಕೋರ್ಟ್‌ ಕಿಡಿಕಾರಿದೆ. ಈ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಿ ವಿಚಾರಣೆ ಮುಂದೂಡಿದೆ.
ಬೆಂಗಳೂರಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಸ್ಥೆಯು ಕಾಯಿದೆ ಜಾರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್‌ ಕುರಿತು ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Gali Janardhana Reddy-ಗಾಲಿ ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ಅಸ್ತು:ಹೈಕೋರ್ಟ್‌ ಚಾಟಿ ಬಳಿಕ ಎಚ್ಚೆತ್ತ ಸರಕಾರ

ನಿಯಮದಂತೆ ಪ್ರತಿ ವರ್ಷದ ಜನವರಿ ಮತ್ತು ಜುಲೈನಲ್ಲಿ ಸಭೆ ನಡೆಸುವುದು ಕಡ್ಡಾಯವಾಗಿದೆ. ಆದರೆ, 2022 ರಲ್ಲಿ ಮುಖ್ಯಮಂತ್ರಿ ನೇತೃತ್ವದ ಸಮಿತಿಯು ಒಂದೇ ಒಂದು ಬಾರಿಯೂ ಸಭೆ ನಡೆಸದಿರುವುದು ಸರಿಯಲ್ಲ. ಆನಂತರ 2023 ರಲ್ಲಿಯೂ ಸಭೆ ನಡೆಸಿಲ್ಲ ಎಂದು ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿದೆ.

''2021 ರಲ್ಲಿಯೇ ಹೈಕೋರ್ಟ್‌ ಕಾಯಿದೆಯ ನಿಯಮ 16ರ ಪ್ರಕಾರ ಮುಖ್ಯಮಂತ್ರಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸಭೆ ನಡೆಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಭೆ ನಡೆಸುವಂತೆ ಸೂಚಿಸಿದ್ದರೂ ಅದನ್ನು ಪಾಲನೆ ಮಾಡಿಲ್ಲವೇಕೆ,'' ಎಂದು ನ್ಯಾಯಪೀಠ ಸರಕಾರವನ್ನು ಪ್ರಶ್ನಿಸಿದೆ.

Sc St Reservation: ಮೀಸಲಾತಿ ಹೆಚ್ಚಳ ಸಂವಿಧಾನಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸಿಗೆ ಸಂಪುಟ ಅಸ್ತು?
''ಕಾಯಿದೆಯಡಿ ಸಂತ್ರಸ್ತರಿಗೆ ನೀಡಲಾದ ಪರಿಹಾರ ಮತ್ತು ಪುನರ್ವಸತಿ ಪರಿಶೀಲನೆ ನಡೆಸುವ ಹಾಗೂ ಕಾಯಿದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆ, ಕಾಯಿದೆ ಜಾರಿಯಲ್ಲಿಅಧಿಕಾರಿಗಳು/ಸಂಬಂಧಿತ ಸಂಸ್ಥೆಯ ಜವಾಬ್ದಾರಿ ಹಾಗೂ ಸರಕಾರಕ್ಕೆ ಸಲ್ಲಿಕೆಯಾದ ವರದಿಗಳ ಪರಿಶೀಲನೆಯ ಜವಾಬ್ದಾರಿ ಮುಖ್ಯಮಂತ್ರಿ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಆ ಸಮಿತಿಯೇ ಸಭೆ ನಡೆಸಲಿಲ್ಲವೆಂದರೆ ಕಾಯಿದೆ ಜಾರಿಯ ಮೇಲ್ವಿಚಾರಣೆ ಹೇಗಾಗುತ್ತದೆ,'' ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.

ಕಳೆದ ವಿಚಾರಣೆಯಲ್ಲಿ ಕೋರ್ಟ್‌ ಎತ್ತಿದ್ದ ಹಲವು ಗಂಭೀರ ವಿಚಾರಗಳಿಗೆ ಉತ್ತರಿಸುವ ಬದಲಿಗೆ ವರದಿಗಳು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ ಎಂದು ಹೇಳಿರುವ ನ್ಯಾಯಪೀಠ, ಸುಮ್ಮನೆ ಕೋರ್ಟ್‌ಗೆ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತೋರಿಸಲು ಆತುರದಲ್ಲಿ ವರದಿ ಸಲ್ಲಿಸಿದಂತೆ ಕಾಣುತ್ತದೆ ಎಂದು ಹೇಳಿದೆ. ಅಲ್ಲದೆ, ಸಮಗ್ರ ವರದಿ ಸಲ್ಲಿಸಲು ಮೂರು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ