ಆ್ಯಪ್ನಗರ

ಸಮ್ಮಿಶ್ರ ಸರಕಾರ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ: ರಾಜಣ್ಣ

ರಾಜ್ಯಾದ್ಯಂತ ಜನವರಿ 14ರ ನಂತರ ತುಮಕೂರಿನಿಂದಲೇ ಕಾಂಗ್ರೆಸ್‌ ಉಳಿಸಿ ಅಭಿಯಾನ ...

Vijaya Karnataka 27 Dec 2018, 5:00 am
ತುಮಕೂರು: ರಾಜ್ಯಾದ್ಯಂತ ಜನವರಿ 14ರ ನಂತರ ತುಮಕೂರಿನಿಂದಲೇ ಕಾಂಗ್ರೆಸ್‌ ಉಳಿಸಿ ಅಭಿಯಾನ ಆರಂಭಿಸಲಾಗುವುದು ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದರು.
Vijaya Karnataka Web knn


ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ,''ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್‌ ಪಕ್ಷ, ಕಾಂಗ್ರೆಸ್‌ ಮೇಲೆ ಪ್ರಾಬಲ್ಯ ಸ್ಥಾಪಿಸಲು ಹೊರಟಿದ್ದು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಇದನ್ನು ತಡೆಯಲು ಪಕ್ಷದ ಸಮಾನ ಮನಸ್ಕ ಶಾಸಕರು, ಮಾಜಿ ಶಾಸಕರು ಸೇರಿ ಕಾಂಗ್ರೆಸ್‌ ಪಕ್ಷ ಉಳಿಸಿ ಅಭಿಯಾನ ಆರಂಭಿಸಲಾಗುತ್ತದೆ,'' ಎಂದು ಹೇಳಿದರು.

''ಜೆಡಿಎಸ್‌ನಿಂದ ಆಗುತ್ತಿರುವ ತೊಂದರೆ ವಿಚಾರದಲ್ಲಿ 10ಕ್ಕೂ ಹೆಚ್ಚು ಮಾಜಿ ಶಾಸಕರು ಬೆಂಗಳೂರಿನಲ್ಲಿ ಸಭೆ ನಮ್ಮ ನಿಲುವನ್ನು ಪಕ್ಷಕ್ಕೂ ತಿಳಿಸಿದ್ದೇವೆ. ಸಿದ್ದರಾಮಯ್ಯ ಸರಕಾರದ ಯೋಜನೆಗಳನ್ನು ಸಮ್ಮಿಶ್ರ ಸರಕಾರ ನಿರ್ಲಕ್ಷಿಸಿದೆ,'' ಎಂದು ಹರಿಹಾಯ್ದರು.

''ಸಮ್ಮಿಶ್ರ ಸರಕಾರ ಸಾಂದರ್ಭಿಕ ಶಿಶು. ಎಷ್ಟು ದಿನ ಉಳಿಯುತ್ತದೆಯೋ ಗೊತ್ತಿಲ್ಲ. ಅವಧಿಗೆ ಮುನ್ನವೇ ಹುಟ್ಟುವ ಮಗು ಎಷ್ಟು ತಿಂಗಳು ಆರೋಗ್ಯವಾಗಿ ಬದುಕಿ, ಬಾಳಲು ಸಾಧ್ಯ,'' ಎಂದು ಮಾರ್ಮಿಕವಾಗಿ ನುಡಿದರು.

ರಮೇಶ್‌ ಪಕ್ಷದಲ್ಲಿ ಇರಲ್ಲ

''ನನ್ನ ಪ್ರಕಾರ ರಮೇಶ್‌ ಜಾರಕಿಹೊಳಿ ಪಕ್ಷದಲ್ಲಿ ಇರಲ್ಲ. ಆದರೆ, ಅವರು ಯಾವತ್ತು ಪಕ್ಷ ಬಿಟ್ಟು ಹೋಗ್ತಾರೆ, ತಮ್ಮ ಜತೆ ಇನ್ನೂ ಹಲವು ಶಾಸಕರನ್ನು ಕರೆದುಕೊಂಡು ಹೋಗ್ತಾರಾ, ಸರಕಾರ ಉರುಳಿಸುವ ಪ್ರಯತ್ನ ಮಾಡುತ್ತಾರಾ ಎಂಬುದರ ಬಗ್ಗೆ ಸ್ವಷ್ಟತೆ ಇಲ್ಲ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ