ಬೆಂಗಳೂರು: 'ಜನರಿಂದ ಆಯ್ಕೆಯಾದ ಸರಕಾರ ಇದಲ್ಲ, ಜನರಿಗಾಗಿನ ಸರಕಾರವೂ ಇದಲ್ಲ. ಜನರ ವಿಶ್ವಾಸವಿಲ್ಲದ ಈ ಸರಕಾರಕ್ಕೆ ಆಯಸ್ಸು ಇಲ್ಲ. ಈ ಸರಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡದಿದ್ದರೆ ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡ ಸರಕಾರದ ಮರ್ಯಾದೆ ಹರಾಜು ಹಾಕುತ್ತೇವೆ...
ಈ ರೀತಿ ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಗುಡುಗಿದವರು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ.
''ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾ.28 ರಿಂದ ಸ್ಥಗಿತಗೊಂಡ ಅಭಿವೃದ್ದಿ ಕೆಲಸಗಳು ಪುನಾರಂಭ ಆಗಿಲ್ಲ. ಕಳೆದ ಮೂರೂವರೆ ತಿಂಗಳಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸ್ತಬ್ಧಗೊಂಡಿದೆ. ಅಧಿವೇಶನ ಅಂತ್ಯಗೊಳ್ಳುವ ಜು.12ರ ಬಳಿಕ ಪ್ರತಿಪಕ್ಷದ ಎಲ್ಲ 104 ಶಾಸಕರು ಜನರ ಮುಂದೆ ಹೋಗಿ ಸರಕಾರ ಮಾನ ಹರಾಜು ಹಾಕುತ್ತೇವೆ,''ಎಂದು ಕಟು ವಾಗ್ದಾಳಿ ನಡೆಸಿದರು.
''ಕಾಂಗ್ರೆಸ್ನ ಆಡಳಿತದ ಬಗ್ಗೆ ತೃಪ್ತಿ ಇಲ್ಲ ಎಂಬುದು ಜನಾದೇಶದಿಂದ ಸ್ಪಷ್ಟವಾಯಿತು. ಆ ಪಕ್ಷದ ಶಾಸಕ ಸಂಖ್ಯೆ 129 ರಿಂದ 79ಕ್ಕೆ ಕುಸಿಯಿತು. ಜೆಡಿಎಸ್ 40ರಿಂದ 37ಕ್ಕೆ ತಗ್ಗಿತು. 37 ಶಾಸಕರ ಬಲವಿರುವ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿರುವುದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣ ನೀಡಿ ಕಾಂಗ್ರೆಸ್ನವರು ಜೆಡಿಎಸ್ ವರಿಷ್ಠರ ಕಾಲಿಗೆ ಬಿದ್ದು ಸರಕಾರ ಮಾಡಿದ್ದು ದುರಂತ. ಬಜೆಟ್ ಮಂಡನೆ, ಸಂಪುಟ ವಿಸ್ತರಣೆ, ನಿಗಮ -ಮಂಡಳಿ ನೇಮಕದಲ್ಲಿ ನಡೆಯುತ್ತಿರುವ ಗೊಂದಲಗಳಿಂದ ಯಾರೂ ಆಡಳಿತದ ಕಡೆ ಲಕ್ಷ ವಹಿಸುತ್ತಿಲ್ಲ,'' ಎಂದು ಟೀಕಿಸಿದರು.
ಸಾಂದರ್ಭಿಕ ಶಿಶುವಿಗೆ ಆಯುಷ್ಯವಿಲ್ಲ
''ನಾನು ಜನರ ಹಂಗಿನಲ್ಲಿಲ್ಲ, ಕಾಂಗ್ರೆಸ್ ಕೃಪೆಯಲ್ಲಿದ್ದೇನೆ ಎಂಬ ಕುಮಾರಸ್ವಾಮಿ ಮಾತು ನಾಡಿನ ಆರೂವರೆ ಕೋಟಿ ಜನರಿಗೆ ಮಾಡಿರುವ ಅಪಮಾನ. ಮತ್ತೊಮ್ಮೆ ನಾನು ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿಯೇ ಹೇಳಿಕೊಂಡಿದ್ದಾರೆ. ಇಂತಹ ಸಾಂದರ್ಭಿಕ ಶಿಶುವಿಗೆ ನೈಜ ತಂದೆ -ತಾಯಿ ಇರಲು ಸಾಧ್ಯವಿಲ್ಲ. ಈ ಮಾತು ಅವರ ಅಪರಾಧಿ ಪ್ರಜ್ಞೆಯ ಸಂಕೇತ. ಆತ್ಮಸಾಕ್ಷಿ, ಸ್ವಾಭಿಮಾನ ಇಲ್ಲದ ನಿಸರ್ಗ ನಿಯಮಕ್ಕೆ ವಿರುದ್ಧವಾದ ಸಾಂದರ್ಭಿಕ ಶಿಶುವಾದ ಸರಕಾರಕ್ಕೆ ಆಯುಷ್ಯವಿಲ್ಲ'' ಎಂದು ಕಟುಕಿದರು.
ಪದ್ಮನಾಭನಗರದಲ್ಲಿ ಕಂಟ್ರೋಲ್
''ಬಿಜೆಪಿಗೆ ಬಹುಮತ ನೀಡದೆ ತಪ್ಪು ಮಾಡಿದೆವು ಎಂಬ ಅಪರಾಧಿ ಪ್ರಜ್ಞೆ ಜನರಲ್ಲಿ ಮೂಡಿದೆ. ಜೆಡಿಎಸ್ಗೆ ಬಹುಮತ ಸಿಗದಿದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ ಅಥವಾ ಮರು ಚುನಾವಣೆಗೆ ಹೋಗುತ್ತೇವೆ ಎಂದು ಬೊಬ್ಬೆ ಹಾಕಿದವರು ಮಾತು ಮರೆತು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅಧಿಕಾರ ಸ್ವಾರ್ಥಕ್ಕಾಗಿ ತರಾತುರಿಯಲ್ಲಿ ರಚನೆಯಾದ ಸರಕಾರ ಟೇಕಾಫ್ ಆಗಿಲ್ಲ. ರಾಜ್ಯದಲ್ಲಿ ಸಿಎಂ ಯಾರು? ಕುಮಾರಸ್ವಾಮಿ ಅಥವಾ ಸಿದ್ದರಾಮಯ್ಯ ಅವರಾ? ಎಂಬ ಗೊಂದಲ ಮುಂದುವರಿದಿದೆ. ಒಂದೆಡೆ ದಿಲ್ಲಿ ಹೈಕಮಾಂಡ್ ಮತ್ತು ಪದ್ಮನಾಭನಗರದ ರಿಮೋಟ್ ಕಂಟ್ರೋಲ್ನಲ್ಲಿ ಸಿಕ್ಕು ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ'' ಎಂದು ಹರಿಹಾಯ್ದರು.
ಹೆಚ್ಚಿದ ಆತಂಕ
''ಮಹಾಘಟಬಂಧನ್ ಹೆಸರಿನಲ್ಲಿ ಸಮ್ಮಿಶ್ರ ಸರಕಾರ ತೆಲಂಗಾಣ ಮತ್ತು ಆಂಧ್ರಪ್ರದೇಶ ಸಿಎಂಗಳ ಸಖ್ಯ ಬೆಳೆಸಿದೆ. ಹೀಗಾಗಿ, ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಆಶೋತ್ತರದ ಬಗ್ಗೆ ಆ ಭಾಗದ ಜನರಲ್ಲಿ ಆತಂಕ ಮನೆಮಾಡಿದೆ,'' ಎಂದು ಹೇಳಿದರು.
ಸಾಲದ ಮಾತು
ಖಾಸಗಿ ಸಾಲ ಮನ್ನಾ ವಿಚಾರ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವಿನ ಜಟಾಪಟಿ ಆರಂಭಕ್ಕೆ ಮುನ್ನುಡಿಯಾಯಿತು
ಯಡಿಯೂರಪ್ಪ: ''ನಿಯೋಜಿತ ಸಿಎಂ ಆದ ತಕ್ಷಣ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ, ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿಯೂ ಘೋಷಣೆ ಮಾಡಿದ್ದರು''
ಸಿಎಂ ಎಚ್.ಡಿ.ಕುಮಾರಸ್ವಾಮಿ: ''ಖಾಸಗಿ ಲೇವಾದೇವಿ ವ್ಯವಹಾರಸ್ಥರ ಕಪಿಮುಷ್ಠಿಯಿಂದ ರೈತರನ್ನು ಬಿಡುಗಡೆ ಮಾಡುವ ಚಿಂತನೆ ನಡೆಸಿದ್ದೇನೆ ಎಂದಷ್ಟೇ ಹೇಳಿದ್ದೇನೆ. ಇಷ್ಟಕ್ಕೂ, ಖಾಸಗಿ ಸಾಲದ ಬಗ್ಗೆ ದಾಖಲೆಗಳನ್ನು ಎಲ್ಲಿ ತರುವುದು. ಮಾತಿನ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಿ. ನನಗೂ ನೈತಿಕತೆ ಇದೆ. ನೀವು ರೈತರ ಸಾಲ ಮನ್ನಾ ವಿಚಾರದಲ್ಲಿ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಹೇಗೆ ಅಡ್ಡಿ ಮಾಡಿದ್ದಿರಿ''
ಯಡಿಯೂರಪ್ಪ : ''ರೈತರ ಸಾಲ ಇರಲಿ, ಬಡ್ಡಿ ಮನ್ನಾ ಮಾಡಲೂ ನಿಮ್ಮ ತಂದೆ ವಿರೋಧ ವ್ಯಕ್ತಪಡಿಸಿದ್ದರು''
ಸಹಕಾರ ಸಚಿವ ಬಂಡೆಪ್ಪ ಕಾಶಂಪುರ( ಮಧ್ಯಪ್ರವೇಶ): ''ಖಾಸಗಿ ಲೇವಾದೇವಿ ನಿಯಂತ್ರಣಕ್ಕೆ ಕೇರಳದಲ್ಲಿ ಪ್ರಬಲ ಕಾನೂನು ಜಾರಿ ಮಾಡಲಾಗಿದೆ. ಈ ಮಾದರಿ ಕಾನೂನನ್ನು ರಾಜ್ಯದಲ್ಲೂ ಜಾರಿ ಮಾಡುವ ಸಂಬಂಧ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಕಳಿಸಲಾಗಿದೆ''
ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ (ಸಮಾಧಾನಪಡಿಸಿ ಮಾತಿಗೆ ತೆರೆ): ''ರಾಜನೀತಿಜ್ಞ ಮುಂದಿನ ತಲೆಮಾರು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಿದರೆ, ರಾಜಕಾರಣಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಾನೆ. ಚುನಾವಣೆ ಸಂದರ್ಭದ ಮಾತುಗಳನ್ನು ಮತ್ತೆ ಇಲ್ಲಿ ಪ್ರಸ್ತಾಪಿಸಿ ಮಾಧ್ಯಮಗಳಿಗೆ ಆಹಾರವಾಗುವುದು ಬೇಡ. ಸಂಯಮ ವಹಿಸಿ''
ಈ ರೀತಿ ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಗುಡುಗಿದವರು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ.
''ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾ.28 ರಿಂದ ಸ್ಥಗಿತಗೊಂಡ ಅಭಿವೃದ್ದಿ ಕೆಲಸಗಳು ಪುನಾರಂಭ ಆಗಿಲ್ಲ. ಕಳೆದ ಮೂರೂವರೆ ತಿಂಗಳಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸ್ತಬ್ಧಗೊಂಡಿದೆ. ಅಧಿವೇಶನ ಅಂತ್ಯಗೊಳ್ಳುವ ಜು.12ರ ಬಳಿಕ ಪ್ರತಿಪಕ್ಷದ ಎಲ್ಲ 104 ಶಾಸಕರು ಜನರ ಮುಂದೆ ಹೋಗಿ ಸರಕಾರ ಮಾನ ಹರಾಜು ಹಾಕುತ್ತೇವೆ,''ಎಂದು ಕಟು ವಾಗ್ದಾಳಿ ನಡೆಸಿದರು.
''ಕಾಂಗ್ರೆಸ್ನ ಆಡಳಿತದ ಬಗ್ಗೆ ತೃಪ್ತಿ ಇಲ್ಲ ಎಂಬುದು ಜನಾದೇಶದಿಂದ ಸ್ಪಷ್ಟವಾಯಿತು. ಆ ಪಕ್ಷದ ಶಾಸಕ ಸಂಖ್ಯೆ 129 ರಿಂದ 79ಕ್ಕೆ ಕುಸಿಯಿತು. ಜೆಡಿಎಸ್ 40ರಿಂದ 37ಕ್ಕೆ ತಗ್ಗಿತು. 37 ಶಾಸಕರ ಬಲವಿರುವ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿರುವುದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣ ನೀಡಿ ಕಾಂಗ್ರೆಸ್ನವರು ಜೆಡಿಎಸ್ ವರಿಷ್ಠರ ಕಾಲಿಗೆ ಬಿದ್ದು ಸರಕಾರ ಮಾಡಿದ್ದು ದುರಂತ. ಬಜೆಟ್ ಮಂಡನೆ, ಸಂಪುಟ ವಿಸ್ತರಣೆ, ನಿಗಮ -ಮಂಡಳಿ ನೇಮಕದಲ್ಲಿ ನಡೆಯುತ್ತಿರುವ ಗೊಂದಲಗಳಿಂದ ಯಾರೂ ಆಡಳಿತದ ಕಡೆ ಲಕ್ಷ ವಹಿಸುತ್ತಿಲ್ಲ,'' ಎಂದು ಟೀಕಿಸಿದರು.
ಸಾಂದರ್ಭಿಕ ಶಿಶುವಿಗೆ ಆಯುಷ್ಯವಿಲ್ಲ
''ನಾನು ಜನರ ಹಂಗಿನಲ್ಲಿಲ್ಲ, ಕಾಂಗ್ರೆಸ್ ಕೃಪೆಯಲ್ಲಿದ್ದೇನೆ ಎಂಬ ಕುಮಾರಸ್ವಾಮಿ ಮಾತು ನಾಡಿನ ಆರೂವರೆ ಕೋಟಿ ಜನರಿಗೆ ಮಾಡಿರುವ ಅಪಮಾನ. ಮತ್ತೊಮ್ಮೆ ನಾನು ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿಯೇ ಹೇಳಿಕೊಂಡಿದ್ದಾರೆ. ಇಂತಹ ಸಾಂದರ್ಭಿಕ ಶಿಶುವಿಗೆ ನೈಜ ತಂದೆ -ತಾಯಿ ಇರಲು ಸಾಧ್ಯವಿಲ್ಲ. ಈ ಮಾತು ಅವರ ಅಪರಾಧಿ ಪ್ರಜ್ಞೆಯ ಸಂಕೇತ. ಆತ್ಮಸಾಕ್ಷಿ, ಸ್ವಾಭಿಮಾನ ಇಲ್ಲದ ನಿಸರ್ಗ ನಿಯಮಕ್ಕೆ ವಿರುದ್ಧವಾದ ಸಾಂದರ್ಭಿಕ ಶಿಶುವಾದ ಸರಕಾರಕ್ಕೆ ಆಯುಷ್ಯವಿಲ್ಲ'' ಎಂದು ಕಟುಕಿದರು.
ಪದ್ಮನಾಭನಗರದಲ್ಲಿ ಕಂಟ್ರೋಲ್
''ಬಿಜೆಪಿಗೆ ಬಹುಮತ ನೀಡದೆ ತಪ್ಪು ಮಾಡಿದೆವು ಎಂಬ ಅಪರಾಧಿ ಪ್ರಜ್ಞೆ ಜನರಲ್ಲಿ ಮೂಡಿದೆ. ಜೆಡಿಎಸ್ಗೆ ಬಹುಮತ ಸಿಗದಿದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ ಅಥವಾ ಮರು ಚುನಾವಣೆಗೆ ಹೋಗುತ್ತೇವೆ ಎಂದು ಬೊಬ್ಬೆ ಹಾಕಿದವರು ಮಾತು ಮರೆತು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅಧಿಕಾರ ಸ್ವಾರ್ಥಕ್ಕಾಗಿ ತರಾತುರಿಯಲ್ಲಿ ರಚನೆಯಾದ ಸರಕಾರ ಟೇಕಾಫ್ ಆಗಿಲ್ಲ. ರಾಜ್ಯದಲ್ಲಿ ಸಿಎಂ ಯಾರು? ಕುಮಾರಸ್ವಾಮಿ ಅಥವಾ ಸಿದ್ದರಾಮಯ್ಯ ಅವರಾ? ಎಂಬ ಗೊಂದಲ ಮುಂದುವರಿದಿದೆ. ಒಂದೆಡೆ ದಿಲ್ಲಿ ಹೈಕಮಾಂಡ್ ಮತ್ತು ಪದ್ಮನಾಭನಗರದ ರಿಮೋಟ್ ಕಂಟ್ರೋಲ್ನಲ್ಲಿ ಸಿಕ್ಕು ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ'' ಎಂದು ಹರಿಹಾಯ್ದರು.
ಹೆಚ್ಚಿದ ಆತಂಕ
''ಮಹಾಘಟಬಂಧನ್ ಹೆಸರಿನಲ್ಲಿ ಸಮ್ಮಿಶ್ರ ಸರಕಾರ ತೆಲಂಗಾಣ ಮತ್ತು ಆಂಧ್ರಪ್ರದೇಶ ಸಿಎಂಗಳ ಸಖ್ಯ ಬೆಳೆಸಿದೆ. ಹೀಗಾಗಿ, ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಆಶೋತ್ತರದ ಬಗ್ಗೆ ಆ ಭಾಗದ ಜನರಲ್ಲಿ ಆತಂಕ ಮನೆಮಾಡಿದೆ,'' ಎಂದು ಹೇಳಿದರು.
ಸಾಲದ ಮಾತು
ಖಾಸಗಿ ಸಾಲ ಮನ್ನಾ ವಿಚಾರ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವಿನ ಜಟಾಪಟಿ ಆರಂಭಕ್ಕೆ ಮುನ್ನುಡಿಯಾಯಿತು
ಯಡಿಯೂರಪ್ಪ: ''ನಿಯೋಜಿತ ಸಿಎಂ ಆದ ತಕ್ಷಣ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ, ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿಯೂ ಘೋಷಣೆ ಮಾಡಿದ್ದರು''
ಸಿಎಂ ಎಚ್.ಡಿ.ಕುಮಾರಸ್ವಾಮಿ: ''ಖಾಸಗಿ ಲೇವಾದೇವಿ ವ್ಯವಹಾರಸ್ಥರ ಕಪಿಮುಷ್ಠಿಯಿಂದ ರೈತರನ್ನು ಬಿಡುಗಡೆ ಮಾಡುವ ಚಿಂತನೆ ನಡೆಸಿದ್ದೇನೆ ಎಂದಷ್ಟೇ ಹೇಳಿದ್ದೇನೆ. ಇಷ್ಟಕ್ಕೂ, ಖಾಸಗಿ ಸಾಲದ ಬಗ್ಗೆ ದಾಖಲೆಗಳನ್ನು ಎಲ್ಲಿ ತರುವುದು. ಮಾತಿನ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಿ. ನನಗೂ ನೈತಿಕತೆ ಇದೆ. ನೀವು ರೈತರ ಸಾಲ ಮನ್ನಾ ವಿಚಾರದಲ್ಲಿ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಹೇಗೆ ಅಡ್ಡಿ ಮಾಡಿದ್ದಿರಿ''
ಯಡಿಯೂರಪ್ಪ : ''ರೈತರ ಸಾಲ ಇರಲಿ, ಬಡ್ಡಿ ಮನ್ನಾ ಮಾಡಲೂ ನಿಮ್ಮ ತಂದೆ ವಿರೋಧ ವ್ಯಕ್ತಪಡಿಸಿದ್ದರು''
ಸಹಕಾರ ಸಚಿವ ಬಂಡೆಪ್ಪ ಕಾಶಂಪುರ( ಮಧ್ಯಪ್ರವೇಶ): ''ಖಾಸಗಿ ಲೇವಾದೇವಿ ನಿಯಂತ್ರಣಕ್ಕೆ ಕೇರಳದಲ್ಲಿ ಪ್ರಬಲ ಕಾನೂನು ಜಾರಿ ಮಾಡಲಾಗಿದೆ. ಈ ಮಾದರಿ ಕಾನೂನನ್ನು ರಾಜ್ಯದಲ್ಲೂ ಜಾರಿ ಮಾಡುವ ಸಂಬಂಧ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನು ಕೇರಳಕ್ಕೆ ಕಳಿಸಲಾಗಿದೆ''
ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ (ಸಮಾಧಾನಪಡಿಸಿ ಮಾತಿಗೆ ತೆರೆ): ''ರಾಜನೀತಿಜ್ಞ ಮುಂದಿನ ತಲೆಮಾರು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಿದರೆ, ರಾಜಕಾರಣಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಾನೆ. ಚುನಾವಣೆ ಸಂದರ್ಭದ ಮಾತುಗಳನ್ನು ಮತ್ತೆ ಇಲ್ಲಿ ಪ್ರಸ್ತಾಪಿಸಿ ಮಾಧ್ಯಮಗಳಿಗೆ ಆಹಾರವಾಗುವುದು ಬೇಡ. ಸಂಯಮ ವಹಿಸಿ''