ಆ್ಯಪ್ನಗರ

ಶೀಘ್ರದಲ್ಲಿಯೇ ಸಮ್ಮಿಶ್ರ ಸರಕಾರ ಪತನ: ಸಂಸದ ಪ್ರಹ್ಲಾದ್ ಜೋಷಿ

ಕುಮಾರಸ್ವಾಮಿ ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ನಾನು ಭವಿಷ್ಯ ನುಡಿಯಲಾರೆ. ಆದರೆ, ಶೀಘ್ರದಲ್ಲಿಯೇ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Vijaya Karnataka Web 3 Jun 2018, 4:42 pm
ಧಾರವಾಡ: ಕುಮಾರಸ್ವಾಮಿ ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ನಾನು ಭವಿಷ್ಯ ನುಡಿಯಲಾರೆ. ಆದರೆ, ಶೀಘ್ರದಲ್ಲಿಯೇ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
Vijaya Karnataka Web Prahlad Joshi


ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಪ್ರಧಾನಿ ನರೇಂದ್ರ ಮೋದಿ ಎದುರಿಸಲು ಕಾಂಗ್ರೆಸ್ ಐವತ್ತು ಪಕ್ಷಗಳೊಂದಿಗೆ ದೋಸ್ತಿ ಮಾಡಿಕೊಳ್ಳುವ ದಯನೀಯ ಸ್ಥಿತಿ ತಲುಪಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಅವನತಿ ಹಂತ ತಲುಪಿದೆ. ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಈ ಮೂಲಕ ಎಲ್ಲ ಪ್ರಮುಖ ಖಾತೆಗಳನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.

ಸಮಾಜ ಒಡೆಯುವ ಕೆಲಸ ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ: ಜಗದೀಶ್ ಶೆಟ್ಟರ್

ಧಾರವಾಡ ಜಿಲ್ಲೆಗೆ ಇಬ್ಬರು ಮಂತ್ರಿಗಳು ಇದ್ದರೂ ಇಬ್ಬರನ್ನೂ ಮನೆಗೆ ಕಳಿಸಿದ್ದಾರೆ. ಜನಪ್ರತಿನಿಧಿಗಳ ಕೆಲಸ ಬಿಟ್ಟು ಬೇರೆ ಮಾಡಲು ಹೋದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ಧಾರವಾಡ ಗ್ರಾಮೀಣ ಮತಕ್ಷೇತ್ರದ ಫಲಿತಾಂಶವೇ ಸಾಕ್ಷಿಯಾಗಿದೆ. ಧರ್ಮ ರಾಜಕಾರಣದ ಮೂಲಕ ಸಮಾಜ ಒಡೆಯುವ ಕೆಲಸ ಮಾಡಿದ ವಿನಯ ಕುಲಕರ್ಣಿ ಸೇರಿದಂತೆ ಬಹುತೇಕ ಸಚಿವರು ಮನೆ ಸೇರುವಂತಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರೂ ಹೊರತಾಗಿಲ್ಲ ಎಂದು ಶಾಸಕ ಶೆಟ್ಟರ್ ಹೇಳಿದ್ದಾರೆ.

ಇನ್ನು, ಜೆಡಿಎಸ್ ಮತ್ತು ಕಾಂಗ್ರೆಸ್ ಮೃತ್ರಿಯ ಸರಕಾರ ಖಿಚಡಿ ಸರಕಾರ ಆಗಿದ್ದು, ಇದು ಬಹಳ ದಿನ ಉಳಿಯಲಾರದು. ಬೇಗನೇ ಹಳಸಿ ಹೋಗಲಿದೆ. ಸಿಎಂ ಕುಮಾರಸ್ವಾಮಿ ಅವರಿಗೆ ಅಧಿಕಾರ ಬೇಕೆ ಹೊರತು ರೈತರ ಹಿತವಲ್ಲ. ರೈತರ ಸಾಲಮನ್ನಾ ಬಗ್ಗೆ ಅವರು ಯೂ ಟರ್ನ್ ಹೊಡೆದಿರುವುದೇ ಇದಕ್ಕೆ ಸಾಕ್ಷಿ.
ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು. ಹಾಗೂ, ನೂತನ ಶಾಸಕರ ಹೆಸರಿನಲ್ಲಿಯೇ ಅಮೃತ ಇರಲಿದ್ದು, ಅದರಂತೆ ಅವರ ಕ್ಷೇತ್ರವನ್ನು ಅಮೃತಮಯ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ‌ ಎಂದು ಧಾರವಾಡ ಕ್ಷೇತ್ರದ ಶಾಸಕ ಅಮೃತ್ ದೇಸಾಯಿಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಧ್ಯಮದೆದುರು ಹಾಡಿ ಹೊಗಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ