ಆ್ಯಪ್ನಗರ

ದಕ್ಷಿಣ ಒಳನಾಡಿನಲ್ಲೂ ಶೀತಮಾರುತ , ಸಂಕ್ರಾಂತಿವರೆಗೂ ಕೊರೆಯಲಿರುವ ಚಳಿ

ಹೊಸದಿಲ್ಲಿಯಲ್ಲಿ ಕಳೆದ 50 ವರ್ಷಗಳಲ್ಲಿ ಮೂರನೇ ಬಾರಿಗೆ ಅತಿ ಕಡಿಮೆ ತಾಪಮಾನ (6.7 ಡಿಗ್ರಿ) ದಾಖಲಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಇದೇ ರೀತಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಶೀತಮಾರುತ ಈ ಬಾರಿ ತೀವ್ರವಾಗಿ ಬೀಸುತ್ತಿರುವುದರಿಂದ ಚಳಿ ಹೆಚ್ಚಿದೆ. ಇದರ ಪರಿಣಾಮ ರಾಜ್ಯಕ್ಕೂ ತಟ್ಟಿದೆ.

Vijaya Karnataka Web 4 Jan 2019, 5:29 am
ಬೆಂಗಳೂರು: ಉತ್ತರ ಒಳನಾಡಿನಲ್ಲಿ ತೀವ್ರವಾಗಿ ಬೀಸುತ್ತಿರುವ ಶೀತಮಾರುತ ಈಗ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಪ್ರವೇಶಿಸಿದೆ. ಜ.15 ರವರೆಗೆ ಅಂದರೆ ಸಂಕ್ರಾಂತಿ ಹಬ್ಬದವರೆಗೂ ಇದೇ ರೀತಿ ಚಳಿ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
Vijaya Karnataka Web cold


ಹೊಸದಿಲ್ಲಿಯಲ್ಲಿ ಕಳೆದ 50 ವರ್ಷಗಳಲ್ಲಿ ಮೂರನೇ ಬಾರಿಗೆ ಅತಿ ಕಡಿಮೆ ತಾಪಮಾನ (6.7 ಡಿಗ್ರಿ) ದಾಖಲಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಇದೇ ರೀತಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಶೀತಮಾರುತ ಈ ಬಾರಿ ತೀವ್ರವಾಗಿ ಬೀಸುತ್ತಿರುವುದರಿಂದ ಚಳಿ ಹೆಚ್ಚಿದೆ. ಇದರ ಪರಿಣಾಮ ರಾಜ್ಯಕ್ಕೂ ತಟ್ಟಿದೆ.

ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ಶೀತಮಾರುತ ಬೀಸುತ್ತಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಆಗುಂಬೆ ಮೊದಲಾದ ಪ್ರದೇಶಗಳಲ್ಲೂ ಶೀತಮಾರುತವಿದ್ದು, ಕನಿಷ್ಠ ತಾಪಮಾನ ವಾಡಿಕೆಗಿಂತ ಕಡಿಮೆಯಾಗಿದೆ. ಬೀದರ್‌ ಮತ್ತು ದಾವಣಗೆರೆಯಲ್ಲಿ 8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ಬೀದರ್‌ನಲ್ಲಿ 6 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ ಎರಡು ಡಿಗ್ರಿ ಏರಿದೆ.

ಕನಿಷ್ಠ ತಾಪಮಾನದಲ್ಲಿ ಏರಿಕೆ
ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಕನಿಷ್ಠ ತಾಪಮಾನ ಸ್ವಲ್ಪ ಏರಿಕೆಯಾಗಿದ್ದು, ಚಳಿ ಕಡಿಮೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ. ಎಸ್‌. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಹಿಮಾಲಯದ ಹವಾಮಾನದಲ್ಲಾಗುವ ಬದಲಾವಣೆಯ ಪರಿಣಾಮ ರಾಜ್ಯದ ಹವಾಮಾನದ ಮೇಲೂ ಆಗುತ್ತಿದೆ.ರಾಜ್ಯದ ಶೇ.15 ರಷ್ಟು ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿಗಿಂತ ಕಡಿಮೆ ಇತ್ತು. ಈಗ ತಾಪಮಾನ ಸ್ವಲ್ಪ ಏರಿಕೆಯಾಗಿರುವುದರಿಂದ ಚಳಿ ಕಡಿಮೆಯಾಗುತ್ತಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ ಏರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರದೇಶ- ಕನಿಷ್ಠ ತಾಪಮಾನ(ಡಿಗ್ರಿ ಸೆಲ್ಸಿಯಸ್‌)
ಆಗುಂಬೆ: 7.9

ದಾವಣಗೆರೆ, ಬೀದರ್‌: 8

ಚಾಮರಾಜನಗರ: 8.2

ಮಡಿಕೇರಿ: 8.3

ವಿಜಯಪುರ: 8.8

ಹಾಸನ: 9.6

ಹಾವೇರಿ: 9.8

ಧಾರವಾಡ: 9.9.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ