ಆ್ಯಪ್ನಗರ

ಈ ವರ್ಷ ರಾಜ್ಯದಲ್ಲಿ ದುರ್ಬಲಗೊಂಡ ಚಳಿ!

ಕಳೆದ ವರ್ಷ ಈ ಹೊತ್ತಿಗೆ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕೆಳಕ್ಕಿಳಿದು ಚಳಿ ಹೆಚ್ಚಿತ್ತು. ಈ ಬಾರಿಯ ಡಿಸೆಂಬರ್‌ನ ಆರಂಭದಲ್ಲಿ ಕೆಲ ದಿನಗಳವರೆಗೆ ಚಳಿ ಸೃಷ್ಟಿಯಾಗಿತ್ತು. ನಂತರದ ದಿನಗಳಲ್ಲಿ ಕನಿಷ್ಠ ತಾಪಮಾನ ಏರಿಕೆಯಾಗಿ ಚಳಿ ಇಳಿದಿದೆ. ದಕ್ಷಿಣ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಭಾಗದಲ್ಲಿ ಕನಿಷ್ಠ ತಾಪಮಾನ ಹೆಚ್ಚು ಕೆಳಕ್ಕಿಳಿದಿದೆ. ಹಿಂಗಾರು ಚುರುಕಾಗಿದಿದ್ದರೆ ಮಳೆ ಜತೆಗೆ ಚಳಿಯೂ ಜೋರಾಗುತ್ತಿತ್ತು. ಈ ಬಾರಿ ಬಿಸಿಲು ಹೆಚ್ಚಿರುವುದರಿಂದ ಚಳಿ ಹೆಚ್ಚಿಲ್ಲ.

Vijaya Karnataka 15 Dec 2018, 9:37 am
ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಹಿಂಗಾರು ದುರ್ಬಲಗೊಂಡಿರುವುದರ ಜತೆಗೆ ಚಳಿಯೂ ಕಡಿಮೆಯಾಗಿದೆ.
Vijaya Karnataka Web winter


ಕಳೆದ ವರ್ಷ ಈ ಹೊತ್ತಿಗೆ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕೆಳಕ್ಕಿಳಿದು ಚಳಿ ಹೆಚ್ಚಿತ್ತು. ಈ ಬಾರಿಯ ಡಿಸೆಂಬರ್‌ನ ಆರಂಭದಲ್ಲಿ ಕೆಲ ದಿನಗಳವರೆಗೆ ಚಳಿ ಸೃಷ್ಟಿಯಾಗಿತ್ತು. ನಂತರದ ದಿನಗಳಲ್ಲಿ ಕನಿಷ್ಠ ತಾಪಮಾನ ಏರಿಕೆಯಾಗಿ ಚಳಿ ಇಳಿದಿದೆ. ದಕ್ಷಿಣ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಭಾಗದಲ್ಲಿ ಕನಿಷ್ಠ ತಾಪಮಾನ ಹೆಚ್ಚು ಕೆಳಕ್ಕಿಳಿದಿದೆ.

ಹಿಂಗಾರು ದುರ್ಬಲವಾಗಿರುವುದು ಕೂಡಾ ಚಳಿ ಕಡಿಮೆಯಾಗಲು ಒಂದು ಕಾರಣವಾಗಿದೆ. ಹಿಂಗಾರು ಚುರುಕಾಗಿದಿದ್ದರೆ ಮಳೆ ಜತೆಗೆ ಚಳಿಯೂ ಜೋರಾಗುತ್ತಿತ್ತು. ಈ ಬಾರಿ ಬಿಸಿಲು ಹೆಚ್ಚಿರುವುದರಿಂದ ಚಳಿ ಹೆಚ್ಚಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

''ದಕ್ಷಿಣ ಒಳನಾಡಿಗೆ ಹೋಲಿಸಿದರೆ ಉತ್ತರ ಒಳನಾಡಿನಲ್ಲೇ ಚಳಿ ಸ್ವಲ್ಪ ಹೆಚ್ಚಿದೆ. ಆದರೆ ಕಳೆದ ವರ್ಷದಷ್ಟು ಚಳಿ ಕಂಡುಬಂದಿಲ್ಲ. ಮಳೆ ಕಡಿಮೆಯಾಗಿರುವುದೂ ಇದಕ್ಕೆ ಕಾರಣವಿರಬಹುದು,'' ಎಂದು ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ