ಆ್ಯಪ್ನಗರ

ವಿಶ್ವಾಸದ ಮಾತು ಹೇಗಿರಬೇಕು ಗೊತ್ತೆ ?

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಳಸುವ ಭಾಷೆ ಬಗ್ಗೆ ಎಚ್ಚರವಿರಲಿ ...

Vijaya Karnataka 16 Jul 2019, 5:00 am
ಬೆಂಗಳೂರು: ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಳಸುವ ಭಾಷೆ ಬಗ್ಗೆ ಎಚ್ಚರವಿರಲಿ ಎಂದು ಸದನದ ಸದಸ್ಯರಿಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಕಿವಿಮಾತು ಹೇಳಿದ್ದಾರೆ.
Vijaya Karnataka Web 325415DF-F482-40B1-8ECD-34A4B63C8E6B


ಬಹುಮತ ಸಾಬೀತಿಗೆ ದಿನಾಂಕ ನಿಗದಿ ಪಡಿಸಿದ ಬಳಿಕ ಮಾತನಾಡಿದ ಅವರು, ''ಈ ಚದುರಂಗದಾಟದಲ್ಲಿ ಯಾರ ಸೋಲು, ಗೆಲುವು ನನಗೆ ಮುಖ್ಯವಲ್ಲ. ಆದರೆ, ಭಾಷೆ ಬಳಕೆಯ ಬಗ್ಗೆ ಎಚ್ಚರವಿರಬೇಕು. ಅನೇಕ ಮಹಾನುಭಾವರು ಈ ಸದನದಲ್ಲಿ ಹೇಗೆ ನಡೆದುಕೊಂಡು ಗೌರವ ತಂದಿದ್ದಾರೆ ಎಂಬ ಅರಿವು ಇಟ್ಟುಕೊಂಡಿರಬೇಕು,'' ಎಂದರು.

''ಇಲ್ಲಿ ಫುಟ್‌ಬಾಲ್‌ ಆಡುವುದು ಬೇಡ. ಈ ಸ್ಥಾನದಲ್ಲಿ ಕುಳಿತುಕೊಂಡು ಎಲ್ಲದಕ್ಕೂ ಉತ್ತರಿಸುವುದು ಕಷ್ಟ. ಹಾಗಾಗಿ ನಾನು ಅಸಹಾಯಕ. ಅದರರ್ಥ ನಾನು ಮೂಕನೆಂದು ಭಾವಿಸುವುದು ಬೇಡ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಸಾಮರ್ಥ್ಯ‌ ನನಗಿದೆ. ಇಲ್ಲಿದ್ದುಕೊಂಡು ಹಾಗೆ ನಡೆದುಕೊಳ್ಳಲಾಗುವುದಿಲ್ಲ. ಈ ಸೂಕ್ಷ್ಮವನ್ನೂ ಅರ್ಥ ಮಾಡಿಕೊಂಡು ಸಹಕರಿಸಬೇಕು,'' ಎಂದು ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ