ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಕಾಂಗ್ರೆಸ್ ಆರೋಪ ಮಾಡಿದರೆ ಅಂತಹಾ ಯಾವುದೇ ಸಮಸ್ಯೆ ಇಲ್ಲ ಎಂದು ಬಿಜೆಪಿ ಸಮರ್ಥನೆ ಮಾಡುತ್ತಿದೆ. ಆಕ್ಸಿಜನ್ ಕೊರತೆ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಯಾವ ಕೊರತೆಯೂ ಇಲ್ಲ ಎಲ್ಲವೂ ಸುಳ್ಳು ವದಂತಿಗಳು ಎಂದು ವಾಸ್ತವನ್ನು ಮುಚ್ಚಿಡಲು, ಸತ್ಯವನ್ನೇ ಸುಳ್ಳು ಮಾಡುತ್ತಿದ್ದ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ ಎಂದು ಪತ್ರಿಕಾ ವರದಿಯನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದೆ.
ಕೋವಿಡ್ ಆತಂಕ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ರಚನೆಯಾಗಿದೆ ಪ್ರತ್ಯೇಕ ವಾರ್ರೂಂ
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲವೇ ಇಲ್ಲ, ವಿಪಕ್ಷಗಳ ಸುಳ್ಳು ಹಬ್ಬಿಸುತ್ತಿವೆ ಎಂದಿದ್ದ ಬಿಜೆಪಿ ಇದೀಗ ಉತ್ತರಿಸಿ, ಕೊರತೆ ಇಲ್ಲವೆಂದ ಮೇಲೆ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಆಕ್ಸಿಜನ್ ಕೊರತೆ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಆರೋಪವನ್ನು ಬಿಜೆಪಿ ಅಲ್ಲಗಳೆಯುತ್ತಾ ಬಂದಿದೆ. ಕೋವಿಡ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ಸಮರ್ಥವಾಗಿ ಹೋರಾಡುತ್ತಿದೆ. 7 ಮೆಡಿಕಲ್ ಆಕ್ಸಿಜನ್ ತಯಾರಿಕಾ ಘಟಕಗಳು ದಿನಕ್ಕೆ 812 ಟನ್ ಆಕ್ಸಿಜನ್ ಉತ್ಪಾದಿಸುತ್ತಿವೆ.
ಎಪ್ರಿಲ್ 18 ರಂದು 305 ಟನ್ ಆಕ್ಸಿಜನ್ ಬಳಕೆಯಾಗಿದ್ದು, 19417 ಮೆಡಿಕಲ್ ಸಿಲಿಂಡರ್ ಲಭ್ಯವಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರೋಣ ಎಂದು ಸಮರ್ಥಿಸಿಕೊಂಡಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ವಾರ್ರೂಂ ತೆರೆದಿದೆ. ಯಾವುದೇ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರು ಆಕ್ಸಿಜನ್ಗಾಗಿ ವಾರ್ರೂಂ ಸಂಪರ್ಕ ಮಾಡಬಹುದಾಗಿದೆ.
ಕೋವಿಡ್ ಆತಂಕ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ರಚನೆಯಾಗಿದೆ ಪ್ರತ್ಯೇಕ ವಾರ್ರೂಂ
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲವೇ ಇಲ್ಲ, ವಿಪಕ್ಷಗಳ ಸುಳ್ಳು ಹಬ್ಬಿಸುತ್ತಿವೆ ಎಂದಿದ್ದ ಬಿಜೆಪಿ ಇದೀಗ ಉತ್ತರಿಸಿ, ಕೊರತೆ ಇಲ್ಲವೆಂದ ಮೇಲೆ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಆಕ್ಸಿಜನ್ ಕೊರತೆ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಆರೋಪವನ್ನು ಬಿಜೆಪಿ ಅಲ್ಲಗಳೆಯುತ್ತಾ ಬಂದಿದೆ. ಕೋವಿಡ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ಸಮರ್ಥವಾಗಿ ಹೋರಾಡುತ್ತಿದೆ. 7 ಮೆಡಿಕಲ್ ಆಕ್ಸಿಜನ್ ತಯಾರಿಕಾ ಘಟಕಗಳು ದಿನಕ್ಕೆ 812 ಟನ್ ಆಕ್ಸಿಜನ್ ಉತ್ಪಾದಿಸುತ್ತಿವೆ.
ಎಪ್ರಿಲ್ 18 ರಂದು 305 ಟನ್ ಆಕ್ಸಿಜನ್ ಬಳಕೆಯಾಗಿದ್ದು, 19417 ಮೆಡಿಕಲ್ ಸಿಲಿಂಡರ್ ಲಭ್ಯವಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರೋಣ ಎಂದು ಸಮರ್ಥಿಸಿಕೊಂಡಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ವಾರ್ರೂಂ ತೆರೆದಿದೆ. ಯಾವುದೇ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರು ಆಕ್ಸಿಜನ್ಗಾಗಿ ವಾರ್ರೂಂ ಸಂಪರ್ಕ ಮಾಡಬಹುದಾಗಿದೆ.