ಆ್ಯಪ್ನಗರ

ಡಿಜೆಹಳ್ಳಿ ಘಟನೆಗೆ ಕಾಂಗ್ರೆಸ್‌, ಎಸ್‌ಡಿಪಿಐ ಪಿತೂರಿ ಕಾರಣ: ಬಿಜೆಪಿ

ಈ ಗಲಭೆಯ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಸತ್ಯ ಶೋಧನ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ರಾಜ್ಯದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು

Vijaya Karnataka Web 30 Sep 2020, 11:48 pm
ಬೆಂಗಳೂರು: ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆ ಪೂರ್ವ ನಿಯೋಜಿತ. ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಪಿತೂರಿಯಿಂದಲೇ ಈ ಘಟನೆ ನಡೆದಿದೆ ಎಂದು ಬಿಜೆಪಿಯ ಸತ್ಯ ಶೋಧನ ಸಮಿತಿ ವರದಿ ಸಲ್ಲಿಸಿದೆ.
Vijaya Karnataka Web ಬಿಜೆಪಿ
ಬಿಜೆಪಿ


ಈ ಸಂಬಂಧ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ತನ್ನ ವರದಿಯನ್ನು ಬುಧವಾರ ಸಲ್ಲಿಸಿತು. ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೇ ಈ ವಿಚಾರ ತಿಳಿಸಿದರು. ಜತೆಗೆ ಎಸ್‌ಡಿಪಿಐ ನಿಷೇಧಿಸುವಂತೆಯೂ ಒತ್ತಾಯಿಸಿದರು.

''ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ವ್ಯವಸ್ಥಿತ ಪಿತೂರಿಯಿಂದಲೇ ಈ ಗಲಭೆಯಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ವರದಿ ನೀಡಿದ್ದಾರೆ'' ಎಂದು ಕಟೀಲ್‌ ಸ್ಪಷ್ಟವಾಗಿ ಹೇಳಿದರು.

''ಕಾಂಗ್ರೆಸ್‌ನ ಅಧಿಕಾರದ ಹುಚ್ಚು ಈ ಗಲಭೆ ಹಿಂದಿದೆ. 2-3 ಗಂಟೆ ಕಾಲ ಗಲಭೆ ನಡೆದಿದೆ. ಸಿಸಿಟಿವಿ ಒಡೆದು ಹಾಕಲಾಗಿತ್ತು. ವಾಹನಕ್ಕೆ ಬೆಂಕಿ ಹಚ್ಚುವುದೂ ಸೇರಿದಂತೆ ಗಲಭೆ ನಡೆಸಲು ಬೇಕಾದ ವಸ್ತುಗಳನ್ನು ತಂದುಕೊಳ್ಳಲಾಗಿತ್ತು. ಹಾಗಾಗಿ ಇದು ಪೂರ್ವ ನಿಯೋಜಿತ ಕೃತ್ಯವೆನ್ನುವುದು ಸ್ಪಷ್ಟ. ಬಿಬಿಎಂಪಿ ಸದಸ್ಯರಾದ ಅಬ್ದುಲ್‌ ಹಪೀಜ್‌ ಜಾಫಿ, ಸಂಪತ್‌ರಾಜ್‌, ಇರ್ಷಾದ್‌ ಬೇಗಂ ಪತಿ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆಂದು ವರದಿ ಹೇಳಿದೆ. ಕಾಂಗ್ರೆಸ್‌ ಒಳಗಿನ ನಾಯಕತ್ವದ ಸಮಸ್ಯೆ ಪರಿಹರಿಸಿಕೊಳ್ಳದ ಕಾರಣ ಈ ಗಲಭೆ ನಡೆಯಿತು'' ಎಂದು ವರದಿಯಲ್ಲಿನ ಅಂಶ ಪ್ರಸ್ತಾಪಿಸಿ ಹೇಳಿದರು.

ಎನ್‌ಐಎಗೆ ಕೊಡಲಿ:
''ಈ ಗಲಭೆಯ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಸತ್ಯ ಶೋಧನ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ರಾಜ್ಯದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದರು.

ಸಿಎಂ ಭೇಟಿಯಾಗಲಿರುವ ಸಮಿತಿ

ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಪಿತೂರಿಯಿಂದ ಈ ಗಲಭೆ ನಡೆದಿದೆ. ಈ ಕುರಿತ ವರದಿಯನ್ನು ಸಿಎಂ ಅವರಿಗೆ ಗುರುವಾರ ಸಲ್ಲಿಸಲಾಗುವುದು ಎಂದು ಸತ್ಯ ಶೋಧನಾ ಸಮಿತಿ ಅಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ