ಆ್ಯಪ್ನಗರ

ಸಿದ್ದರಾಮಯ್ಯರನ್ನು ಹೃದಯದಿಂದ ಕಿತ್ತೆಸೆದಿದ್ದಾರಂತೆ ಎಂಟಿಬಿ

ನನ್ನ ಎದೆಯೊಳಗಡೆ ಸಿದ್ದರಾಮಯ್ಯ ಇದೀಗ ಇಲ್ಲ. ಅವರನ್ನು ಹೃದಯದೊಳಗಿನಿಂದ ಪಕ್ಕಕ್ಕೆ ಇಟ್ಟಿದ್ದೇನೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ಅನರ್ಹತೆಯ ಬಳಿಕ ಉಲ್ಟಾ ಹೊಡೆದಿದ್ದಾರೆ.

Vijaya Karnataka Web 13 Sep 2019, 5:27 pm
ಬೆಂಗಳೂರು: ನನ್ನ ಎದೆ ಬಗೆದರೆ ಅದರಲ್ಲಿ ಸಿದ್ದರಾಮಯ್ಯ ಕಾಣುತ್ತಾರೆ ಎಂದು ಅಭಿಮಾನ ಪ್ರದರ್ಶನ ಮಾಡಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಉಲ್ಟಾ ಹೊಡೆದಿದ್ದಾರೆ. ಇದೀಗ ನನ್ನ ಎದೆಯೊಳಗಡೆ ಸಿದ್ದರಾಮಯ್ಯ ಇಲ್ಲಎಂದ ಅವರು, ಅವರನ್ನು ಎದೆಯೊಳಗಿನಿಂದ ಕಿತ್ತು ಪಕ್ಕಕ್ಕೆ ಎಸೆದಿದ್ದೇನೆ ಎಂದಿದ್ದಾರೆ.
Vijaya Karnataka Web mtb nagaraj


ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಳಂಬ ಹಿನ್ನೆಲೆಯಲ್ಲಿ ಮುಂದಿನ ನಡೆ ಏನು ಎಂಬುವುದರ ಕುರಿತಾಗಿ ಚರ್ಚೆ ನಡೆಸಲು ಡಾ. ಸುಧಾಕರ್ ನಿವಾಸದಲ್ಲಿ ಅನರ್ಹ ಶಾಸಕರು ಸಭೆ ಸೇರಿದ್ದರು. ಈ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ನಾನು ಈ ಹಿಂದೆ ಸಿದ್ದರಾಮಯ್ಯ ಅವರು ನನ್ನ ಎದೆಯೊಳಗಡೆ ಇದ್ದಾರೆ ಎಂದು ಹೇಳಿದ್ದು ನಿಜ. ಆದರೆ ಅವರು ನನ್ನನ್ನು ಗಂಭಿರವಾಗಿ ಪರಿಗಣಿಸಿಲ್ಲ. ಆ ಕಾರಣಕ್ಕಾಗಿ ಅವರನ್ನು ಎದೆಯಿಂದ ಕಿತ್ತು ಪಕ್ಕಕ್ಕೆ ಇಟ್ಟಿದ್ದೇನೆ . ಇದೀಗ ಕೇವಲ ನನ್ನ ಕ್ಷೇತ್ರದ ಮತದಾರರರು ಮಾತ್ರ ನನ್ನ ಎದೆಯೊಳಗಡೆ ಇದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಹೊರವಲಯದಲ್ಲಿ ನಡೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಕುರಿತಾದ ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದ ಎಂಟಿಬಿ ನಾಗರಾಜ್, ನಾನು ರಾಜಕೀಯ ನಿವೃತ್ತಿ ಪಡೆಯಲು ಯೋಚನೆ ಮಾಡುತ್ತಿದ್ದೆ ಆದರೆ ಸಿದ್ದರಾಮಯ್ಯ ನನನ್ನು ಸಚಿವರನ್ನಾಗಿ ಮಾಡಿದರು. ಇದೀಗ ನನ್ನ ಎದೆಯನ್ನು ಬಗೆದರೆ ಅಲ್ಲಿ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂದಿದ್ದರು.

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಅತೃಪ್ತ ಶಾಸಕರ ಜೊತೆ ಸೇರಿಕೊಂಡು ಮುಂಬೈಗೆ ಹಾರಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿನ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಪಕ್ಷ ವಿರೋಧಿ ಚಟುವಟಿಕೆ ಆರೋಪಡಿಯಲ್ಲಿ ಎಂಟಿಬಿ ಅವರನ್ನು ಅನರ್ಹ ಮಾಡಿದ್ದರು. ಸ್ಪೀಕರ್ ತೀರ್ಪು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣದ ತನಿಖೆ ವಿಳಂಬವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ