ಆ್ಯಪ್ನಗರ

ಸ್ಥಳೀಯ ಕದನದ ಬಳಿಕ ನಿಗಮ ಮಂಡಳಿಗೆ ನೇಮಕ

ಸದ್ಯಕ್ಕೆ ಸಂಪುಟ ವಿಸ್ತರಣೆಯ ಜೇನುಗೂಡಿಗೆ ಕೈಹಾಕುವುದು ಬೇಡವೆಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್‌ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಗೆ ತೆರೆ ಬೀಳುವವರೆಗೆ ನಿಗಮ ಮಂಡಳಿ ನೇಮಕವೂ ಅಗತ್ಯವಿಲ್ಲವೆಂಬ ನಿಲುವು ತೆಗೆದುಕೊಂಡಿದ್ದಾರೆ.

Vijaya Karnataka 11 Aug 2018, 8:01 am
ಬೆಂಗಳೂರು: ಸದ್ಯಕ್ಕೆ ಸಂಪುಟ ವಿಸ್ತರಣೆಯ ಜೇನುಗೂಡಿಗೆ ಕೈಹಾಕುವುದು ಬೇಡವೆಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್‌ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಗೆ ತೆರೆ ಬೀಳುವವರೆಗೆ ನಿಗಮ ಮಂಡಳಿ ನೇಮಕವೂ ಅಗತ್ಯವಿಲ್ಲವೆಂಬ ನಿಲುವು ತೆಗೆದುಕೊಂಡಿದ್ದಾರೆ.
Vijaya Karnataka Web congress


ಈ ಸಂಬಂಧ ಡಿಸಿಎಂ ಡಾ.ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಹಿರಿಯ ಸಚಿವರಾದ ಆರ್‌.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್‌ ಗುರುವಾರ ರಾತ್ರಿ ಸಭೆ ಸೇರಿದ್ದರು. ನಿಗಮ ಮಂಡಳಿಗಳ ಆಕಾಂಕ್ಷಿಗಳ ಒತ್ತಡವೂ ಜಾಸ್ತಿ ಇರುವುದರಿಂದ ಈ ಪ್ರಕ್ರಿಯೆ ಮುಂದೂಡುವುದೇ ಲೇಸು ಎನ್ನುವುದು ಈ ಸಭೆಯ ತೀರ್ಮಾನವೆಂದು ಗೊತ್ತಾಗಿದೆ.

ಆಷಾಢದ ಬಳಿಕ ಸಂಪುಟ ವಿಸ್ತರಣೆ ಎಂದು ಹೇಳಲಾಗಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆ ಇದಕ್ಕೆ ಅಡ್ಡಿಯಾಗಿದೆ. ಚುನಾವಣೆ ಎದುರಿಗಿಟ್ಟುಕೊಂಡು ಮಂತ್ರಿಮಂಡಲ ವಿಸ್ತರಿಸಿದರೆ ಅವಕಾಶ ವಂಚಿತರು ಅಸಮಾಧಾನಗೊಳ್ಳುತ್ತಾರೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ನಿಗಮ ಮಂಡಳಿ ವಿಚಾರದಲ್ಲೂ ಸ್ಥಾನಮಾನ ಸಿಗದವರು ಇದೇ ದಾರಿ ತುಳಿಯುತ್ತಾರೆ. ಹಾಗಾಗಿ ಈ ಎರಡೂ ಪ್ರಕ್ರಿಯೆ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆ ನಂತರವೇ ಯೋಚಿಸುವುದು ಒಳಿತು ಎಂಬ ಅಭಿಪ್ರಾಯಕ್ಕೆ ಬಂದರು ಎನ್ನಲಾಗಿದೆ.

ಈ ನಡುವೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಆಗಸ್ಟ್‌ 13 ರಂದು ಬೀದರ್‌ನಲ್ಲಿ ನಡೆಯುವ ಜನಧ್ವನಿ ರಾರ‍ಯಲಿ ಯಶಸ್ವಿಗೊಳಿಸುವ ಬಗ್ಗೆಯೂ ಕಾಂಗ್ರೆಸ್‌ ಪ್ರಮುಖರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ